ತಮಿಳು ನಟ ಜಯಂ ರವಿ (Jayam Ravi) ದಾಂಪತ್ಯದಲ್ಲಿ ಬಿರುಗಾಳಿ ಎದ್ದು ಅದು ಜಗಜ್ಜಾಹೀರಾಗಿತ್ತು. ಇದೀಗ ಪತ್ನಿ ಆರತಿ ಜೊತೆ ನಟ ರವಿ ವಿಚ್ಛೇದನ ಪ್ರಗತಿಯಲ್ಲಿದ್ದಾಗಲೇ ವದಂತಿ ಗೆಳತಿ ಜೊತೆ ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಮಿಳುನಾಡಿನ ಕುಂದ್ರಕುಡಿ ಮುರುಗನ್ ದೇವಸ್ಥಾನದಲ್ಲಿ ಗೆಳತಿ ಕೆನಿಶಾ ಫ್ರಾನ್ಸಿಸ್ (Kenishaa Francis) ಜೊತೆ ಕಾಣಿಸ್ಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ದೇವಸ್ಥಾನದಲ್ಲಿ ಪ್ರವೇಶ ಮಾಡಿಲ್ಲವಾದರೂ ದೇವಸ್ಥಾನದ ಕಡೆಯಿಂದ ಹೊರಗೆ ಬಂದಿರುವ ಫೋಟೋದಲ್ಲಿ ಜಯಂ ರವಿ ಪಕ್ಕ ವದಂತಿ ಗೆಳತಿ ಕೆನಿಶಾ ಫ್ರಾನ್ಸಿಸ್ ಹಾರ ಹಾಕಿಕೊಂಡು ನಿಂತಿದ್ದಾರೆ. ಈ ವಿಚಾರ ಇದೀಗ ಕಾಲಿವುಡ್ನಲ್ಲಿ ಸೆನ್ಷೇಷನಲ್ ಸುದ್ದಿಯಾಗಿ ಹೊರಹೊಮ್ಮಿದೆ.
ನಟ ರವಿಮೋಹನ್ ಅಲಿಯಾಸ್ ಜಯಂ ರವಿ ಪಕ್ಕ ಕೆನಿಶಾ ಪರಸ್ಪರ ಹಾರ ಬದಲಿಸಿಕೊಂಡಂತೆ ನಿಂತಿರುವ ಫೋಟೋ ಥಟ್ ಅಂತ ನೋಡಿದವರಿಗೆ ಮದುವೆಯಾದ್ರಾ ಅನ್ನಿಸದೇ ಇರಲ್ಲ. ಆದರೆ ಹಾಗಾಗಲಿಲ್ಲ. ಬದಲಿಗೆ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಹಾರ ಕೊಡಲಾಗಿದ್ದು, ಕೆನಿಶಾ-ರವಿ ಇಬ್ಬರೂ ಹಾರ ಧರಿಸಿ ನಿಂತಿದ್ದಾರೆ. ಆದರೆ ದೇವಸ್ಥಾನದ ಹೊರಗಡೆ ಮಾತ್ರ ಇಬ್ರೂ ಒಟ್ಟಿಗೆ ಕಾಣಿಸ್ಕೊಂಡಿಲ್ಲ. ಭಕ್ತರ ಕಣ್ತಪ್ಪಿಸಿ ಕೆನಿಶಾ ಮುಂಚೆಯೇ ದೇವಸ್ಥಾನ ಪ್ರವೇಶಿಸಿದ್ದರು ಆದರೆ ಜಯಂ ರವಿಗೆ ಅದು ಸುಲಭವಲ್ಲ. ಈಗಾಗ್ಲೇ ಭಾರೀ ಹೆಸರು ಮಾಡಿರುವ ತಮಿಳು ನಟ. ಇವರ ಈ ನಡೆ ಇನ್ನೂ ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
ಅಂದಹಾಗೆ ಜಯಂ ರವಿ ಪತ್ನಿ ಆರತಿ ಜೊತೆ ದಿಢೀರ್ ಡಿವೋರ್ಸ್ ವಿಚಾರ ಭಾರೀ ವಿಕೋಪಕ್ಕೆ ತಿರುಗಿದೆ. ಪತಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಎಂದಿದ್ದರು ಆರತಿ. ವಿಚ್ಛೇದನದ ನೀಡಲು ಪತಿಯಿಂದ ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಕೇಳಿದ್ದರು ಎಂದು ವದಂತಿ ಹಬ್ಬಿತ್ತು. ಜಯಂ ರವಿ ಹಾಗೂ ಆರತಿ ದಂಪತಿಗೆ ಇಬ್ಬರು ಪುತ್ರರಿದ್ದು, ಮದುವೆಯಾಗಿ 15 ವರ್ಷಗಳ ಅನ್ಯೋನ್ಯ ದಾಂಪತ್ಯದ ಬಳಿಕ ವಿಚ್ಛೇದನ ಪಡೆಯುತ್ತಿರುವುದು ಕುತೂಹಲ. ದಂಪತಿ ನಡುವಿನ ಬಿರುಕಿಗೆ ಸಿಂಗರ್ ಕೆನಿಶಾ ಕಾರಣ ಎನ್ನಲಾಗಿತ್ತು. ಇಬ್ಬರೂ ಗೋವಾದಲ್ಲಿರುವ ಫೋಟೋಗಳು ವೈರಲ್ ಆಗಿದ್ದವು. ಇದೀಗ ದೇವಸ್ಥಾನದಲ್ಲಿ ಹಾರ ಹಾಕಿಕೊಂಡು ಅಕ್ಕ ಪಕ್ಕ ನಿಂತಿದ್ದಾರೆ. ಈ ಮೂಲಕ ಜಯಂ ರವಿ ಪತ್ನಿ ಆರತಿ ಸುಳಿವು ಕೊಟ್ಟಿದ್ದ ಒಂದೊಂದೇ ವಿಚಾರಗಳು ಬಯಲಾಗುತ್ತಿವೆ.