ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚತುರ್ಥಿ / ಪಂಚಮಿ,
ಗುರುವಾರ, ಮೃಗಶಿರ ನಕ್ಷತ್ರ / ಆರಿದ್ರ ನಕ್ಷತ್ರ.
ರಾಹುಕಾಲ: 01:54 ರಿಂದ 03:28
ಗುಳಿಕಕಾಲ: 09:12 ರಿಂದ 10:46
ಯಮಗಂಡಕಾಲ: 06:03 ರಿಂದ 07:38
ಮೇಷ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಅಹಂಭಾವ ಮತ್ತು ಕೋಪದಿಂದ ಸಮಸ್ಯೆ, ಧನ ನಷ್ಟ, ಸಾಲ ಮಾಡುವ ಸಂದರ್ಭ, ತಂದೆ ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ಸಮಸ್ಯೆ.
ಮಿಥುನ: ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಉತ್ಸಾಹ, ಸಾಲ ಮಾಡುವ ಸನ್ನಿವೇಶ.
ಕಟಕ: ಮಕ್ಕಳಿಂದ ಧನಾಗಮನ, ಉದ್ಯೋಗ ನಷ್ಟ, ಪ್ರೀತಿ ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಅವಕಾಶ ವಂಚಿತರಾಗುವಿರಿ, ತಂದೆಯಿಂದ ನಷ್ಟ, ಉದ್ಯೋಗ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ.
ಕನ್ಯಾ: ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್ ಚಿಂತೆ.
ತುಲಾ: ಆತ್ಮ ಸಂಕಟ, ಆರೋಗ್ಯದಲ್ಲಿ ಏರುಪೇರು, ಅಪವಾದ ಮತ್ತು ಅಪನಿಂದನೆ, ಸಂಗಾತಿಯಿಂದ ನಷ್ಟ.
ವೃಶ್ಚಿಕ: ಮಾನಾಪಮಾನ, ಪ್ರೀತಿ ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಯಿಂದ ನೋವು, ಮಕ್ಕಳಲ್ಲಿ ಮಂದತ್ವ ಮತ್ತು ಆಲಸ್ಯ.
ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅನುಕೂಲ, ಬಂಧು ಬಾಂಧವರು ದೂರ, ಒತ್ತಡಗಳಿಂದ ನಿದ್ರಾಭಂಗ.
ಮಕರ: ಪ್ರೀತಿ ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡುತನ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ.
ಕುಂಭ: ಭೂ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯರಿಂದ ತೊಂದರೆ.
ಮೀನ: ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ.