Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ನಮ್ಮ ಬ್ರಹ್ಮಾಂಡಕ್ಕೆ ಇದ್ಯಾ ಕಂಟಕ! – ಬೆಂಕಿಯ ಚೆಂಡಿನಂತಾಗಿ ಕುಗ್ಗಿ ಹೋಗುತ್ತಾ?; ಸಂಶೋಧನೆಯಲ್ಲಿ ಬೆಚ್ಚಿ ಬೀಳಿಸೋ ಅಂಶ

Public TV
Last updated: March 30, 2025 3:48 pm
Public TV
Share
4 Min Read
universe collapse
SHARE

ಕೋಟ್ಯಾನುಕೋಟಿ ಜೀವರಾಶಿಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡು ಪೊರೆಯುತ್ತಿರುವ ಬ್ರಹ್ಮಾಂಡಕ್ಕೆ ಕಂಟಕ ಎದುರಾಗಿದೆ. ಬ್ರಹ್ಮಾಂಡಕ್ಕೆ (Universe Collapse) ಆಸರೆಯಂತಿದ್ದ ನಿಗೂಢ ಶಕ್ತಿಯೊಂದು ದುರ್ಬಲವಾಗುತ್ತಿದೆ. ಪರಿಣಾಮ ಮುಂದೊಂದು ದಿನ ಇಡೀ ಬ್ರಹ್ಮಾಂಡವೇ ಬೆಂಕಿಯ ಚೆಂಡಿನಂತೆ ಕುಗ್ಗಬಹುದು. ಇದರಿಂದ ಜೀವಸಂಕುಲ ನಾಶವಾಗಬಹುದು ಎಂಬ ಅಚ್ಚರಿಯ ವಿಚಾರವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಗ್ಯಾಲಕ್ಸಿಯ ವೇಗವರ್ಧಿತ ವಿಸ್ತರಣೆಯ ಹಿಂದೆ ‘ಡಾರ್ಕ್ ಎನರ್ಜಿ’ ನಿಗೂಢ ಶಕ್ತಿಯಾಗಿದೆ. ಈಗ ಆ ಶಕ್ತಿಯೇ ದುರ್ಬಲಗೊಳ್ಳುತ್ತಿದೆ. ಇದು ಮುಂದಿನ ಶತಕೋಟಿ ವರ್ಷಗಳ ಹೊತ್ತಿಗೆ ಬ್ರಹ್ಮಾಂಡವು ಸ್ವತಃ ಕುಸಿಯಲು ಕಾರಣವಾಗಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಏನಿದು ಬ್ರಹ್ಮಾಂಡ? ಕುಗ್ಗುವ ಭೀತಿ ಯಾಕೆ? ಪರಿಣಾಮ ಏನಾಗಬಹುದು? ಸಂಶೋಧಕರು ಹೇಳೋದೇನು? ಇಲ್ಲಿದೆ ವಿವರ..

Universe Collapse 1

ಬ್ರಹ್ಮಾಂಡ ಎಂದರೇನು?
ಗುರುತ್ವಾಕರ್ಷಣದಿಂದ ಕೋಟ್ಯಂತರ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವದ ಬೃಹತ್ ಗಾತ್ರದ ಸಮೂಹವೇ ಬ್ರಹ್ಮಾಂಡ. ಇದನ್ನು ನಕ್ಷತ್ರಪುಂಜ ಎಂತಲೂ ಕರೆಯುತ್ತಾರೆ. ಕೋಟಿ ಕೋಟಿ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನಲ್ಲಿ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಪುಂಜಕ್ಕೆ ‘ಆಕಾಶಗಂಗೆ’ ಅಂತ ಹೆಸರಿದೆ. ಈಗ ನಾವು ಇರುವ ಬ್ರಹ್ಮಾಂಡಕ್ಕೆ ಆಕಾಶಗಂಗೆ ಎಂದು ಹೆಸರು. ಮಿಲ್ಕಿ ವೇ ಅಂದರೆ ಕನ್ನಡದಲ್ಲಿ ಕ್ಷೀರಪಥ ಗ್ಯಾಲಕ್ಸಿ.

ಏನಿದು ಸಂಶೋಧನೆ?
ಕ್ಯಾಲಿಫೋರ್ನಿಯಾದ ಅನಾಹೈಮ್‌ನಲ್ಲಿ ನಡೆದ ಅಮೆರಿಕನ್ ಫಿಸಿಕಲ್ ಸೊಸೈಟಿಯ ಜಾಗತಿಕ ಭೌತಶಾಸ್ತ್ರ ಶೃಂಗಸಭೆಯ ಸಂದರ್ಭದಲ್ಲಿ ಸಂಶೋಧನಾ ವರದಿಯೊಂದನ್ನು ಪ್ರಕಟಿಸಲಾಯಿತು. ಬ್ರಹ್ಮಾಂಡದ ವಿಸ್ತರಣೆಯನ್ನು ಅಧ್ಯಯನ ಮಾಡುವ 900 ಕ್ಕೂ ಹೆಚ್ಚು ಸಂಶೋಧಕರ ಅಂತರರಾಷ್ಟ್ರೀಯ ಗುಂಪು ಬುಧವಾರ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿತು. ವಿಜ್ಞಾನಿಗಳು ಹಿಂದಿನ 11 ಶತಕೋಟಿ ವರ್ಷಗಳವರೆಗೆ ಬ್ರಹ್ಮಾಂಡದ ವಿಸ್ತರಣೆಯ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದಾರೆ. ಸುಮಾರು 1.5 ಕೋಟಿ ಗ್ಯಾಲಕ್ಸಿಗಳು ಮತ್ತು ಕ್ವೇಸಾರ್‌ಗಳನ್ನು ಸಂಶೋಧನೆಗೆ ಒಳಪಡಿಸಿದ್ದಾರೆ. ಅವುಗಳಿಂದ ಮೂರು ವರ್ಷಗಳ ಡೇಟಾವನ್ನು ವಿಶ್ಲೇಷಿಸಿದ್ದಾರೆ.

dark energy universe collapse

ದುರ್ಬಲಗೊಳ್ಳುತ್ತಿದೆ ಡಾರ್ಕ್ ಎನರ್ಜಿ
ಆಲ್ಬರ್ಟ್ ಐನ್‌ಸ್ಟೀನ್ ಸೇರಿದಂತೆ ವಿಜ್ಞಾನಿಗಳು, ಡಾರ್ಕ್ ಎನರ್ಜಿ (Dark Energy) ಬಗ್ಗೆ ತಿಳಿಸಿದ್ದಾರೆ. ಕಾಸ್ಮಾಲಾಜಿಕಲ್ ಸ್ಥಿರತೆಯು ಡಾರ್ಕ್ ಎನರ್ಜಿಯ ಒಂದು ರೂಪವಾಗಿದೆ. ಇದು ಬ್ರಹ್ಮಾಂಡದ ವಿಸ್ತರಣೆಯ ವೇಗವರ್ಧನೆಗೆ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಈಗ ಆ ಡಾರ್ಕ್ ಎನರ್ಜಿಯೇ ಅನಿರೀಕ್ಷಿತ ರೀತಿಯಲ್ಲಿ ಕಾಲಾನಂತರದಲ್ಲಿ ಬದಲಾಗುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ‘ಬ್ರಹ್ಮಾಂಡದ ಆರಂಭದಲ್ಲಿ ಡಾರ್ಕ್ ಎನರ್ಜಿ ತುಂಬಾ ಪ್ರಬಲವಾಗಿತ್ತು. ಆದರೆ ಇದು ಕಾಲಾನಂತರದಲ್ಲಿ ದುರ್ಬಲಗೊಂಡಿದೆ. ಹೀಗಾಗಿ, ವಿಜ್ಞಾನಿಗಳು ಬ್ರಹ್ಮಾಂಡದ ಬಗ್ಗೆ ತಮ್ಮ ತಿಳುವಳಿಕೆಯನ್ನು ನವೀಕರಿಸಲು ಇದು ಸಮಯ’ ಎಂದು ಡಿಇಎಸ್‌ಐ ಸಹ-ಅಧ್ಯಕ್ಷ ಮತ್ತು ಡಲ್ಲಾಸ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದ ಖಗೋಳ ಭೌತಶಾಸ್ತ್ರದ ಪ್ರಾಧ್ಯಾಪಕ ಮುಸ್ತಫಾ ಇಶಾಕ್ ಹೇಳುತ್ತಾರೆ.

ಡಾರ್ಕ್ ಎನರ್ಜಿ ಎಂದರೇನು?
ಬ್ರಹ್ಮಾಂಡವು ವೇಗವರ್ಧಿತವಾಗಿ ವಿಸ್ತರಿಸಲು ಕಾರಣವಾಗುವ ನಿಗೂಢ ಶಕ್ತಿಯೇ ಡಾರ್ಕ್ ಎನರ್ಜಿ. ಬ್ರಹ್ಮಾಂಡದ ದೊಡ್ಡ ನಿಗೂಢತೆಗಳಲ್ಲಿ ಒಂದಾಗಿದೆ. ಇದೇನು ಎಂಬ ಬಗ್ಗೆ ವಿಜ್ಞಾನಿಗಳಿಂದ ಸಾಕಷ್ಟು ಸಂಶೋಧನೆಗಳು ನಡೆದಿವೆ. ಆದರೆ, ಯಾರೂ ನಿಖರವಾಗಿ ಇದರ ಬಗ್ಗೆ ತಿಳಿಸಿಲ್ಲ. ಬ್ರಹ್ಮಾಂಡದ ಸರಿಸುಮಾರು 68.3ರಿಂದ 70% ರಷ್ಟು ಡಾರ್ಕ್ ಎನರ್ಜಿಯಾಗಿದೆ ಎಂದು ಅಂದಾಜಿಸಲಾಗಿದೆ. ಐನ್‌ಸ್ಟೀನ್ ತಮ್ಮ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಸಮೀಕರಣಗಳಲ್ಲಿ ಇದನ್ನು ‘ಕಾಸ್ಮಾಲಾಜಿಕ್ ಸ್ಥಿರ’ ಎಂದು ಕರೆದಿದ್ದಾರೆ. ಆದರೆ, ಬ್ರಹ್ಮಾಂಡ ವೇಗವರ್ಧಿತವಾಗಿ ವಿಸ್ತರಿಸುತ್ತಿದೆ ಎಂದಾಗ, ‘ಸ್ಥಿರ’ ಎನ್ನುವುದು ಸೂಕ್ತವಲ್ಲ ಎಂದು ನಂತರದ ಅನೇಕ ವಿಜ್ಞಾನಿಗಳು ತಮ್ಮ ಸಂಶೋಧನೆಗಳಲ್ಲಿ ತಿಳಿಸಿದರು.

ನಮ್ಮ ಬ್ರಹ್ಮಾಂಡದ ಮಾದರಿಯಲ್ಲಿ ನಾವು ಏನನ್ನೋ ಕಳೆದುಕೊಂಡಿದ್ದೇವೆ. ಅದು ನಮಗೆ ತಿಳಿದಿಲ್ಲ. ನಾವು ಕೇವಲ ವಿಷಯಗಳಲ್ಲಿ ಮಾತ್ರ ಅಳೆಯುತ್ತಿದ್ದೇವೆ. ನಮ್ಮ ಬ್ರಹ್ಮಾಂಡದ ಮಾದರಿಯನ್ನು ಮತ್ತೆ ಮರುಪರಿಶೀಲಿಸಬೇಕು. ಇದು, ವಾಸ್ತವವಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದ ಗಾಢವಾದ ಶಕ್ತಿಯ ಒಂದು ವಿಧಾನವಾಗಿದೆ ಎಂದು ಇಶಾಕ್ ತಿಳಿಸುತ್ತಾರೆ. ಸಂಶೋಧನೆಯಲ್ಲಿ ಭಾಗಿಯಾಗದ ಪೆನ್ ಸ್ಟೇಟ್ ಯೂನಿವರ್ಸಿಟಿಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಪ್ರಾಧ್ಯಾಪಕ ಡಾಂಗ್‌ಹುಯಿ ಜಿಯೋಂಗ್, ಈ ಸಂಶೋಧನೆಯು ಡಾರ್ಕ್ ಎನರ್ಜಿಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಜಿಯೋಂಗ್ ಅವರು ಹಾಬಿ-ಎಬರ್ಲಿ ಟೆಲಿಸ್ಕೋಪ್ ಡಾರ್ಕ್ ಎನರ್ಜಿ ಪ್ರಯೋಗದ ಸದಸ್ಯರಾಗಿದ್ದಾರೆ. ಬ್ರಹ್ಮಾಂಡದ ಅಸ್ತಿತ್ವದ ಕುರಿತು ಡಿಇಎಸ್‌ಐಗಿಂತಲೂ ಹಿಂದಿನಿಂದ ಡಾರ್ಕ್ ಎನರ್ಜಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ‘ಡಾರ್ಕ್ ಎನರ್ಜಿಯಲ್ಲಿ ನಿಜವಾಗಿಯೂ ಬದಲಾವಣೆಯ ಅಂಶಗಳು ಕಂಡುಬಂದಲ್ಲಿ, ಈ ಸಂಶೋಧನೆಯು ಡಾರ್ಕ್ ಎನರ್ಜಿ ಮೂಲದ ಬಗ್ಗೆ ಹೊಸ ಆಲೋಚನೆಯನ್ನೇ ತೆರೆದಿಡುತ್ತದೆ. ಪ್ರಸ್ತುತ ಮತ್ತು ಭವಿಷ್ಯದ ಡೇಟಾಗಳಿಂದ ಡಾರ್ಕ್ ಎನರ್ಜಿಯ ಗುಣಲಕ್ಷಣಗಳನ್ನು ಹೇಗೆ ಉತ್ತಮವಾಗಿ ಪರಿಶೀಲಿಸುವುದು ಎಂಬುದರ ಕುರಿತು ನಾವು ಯೋಚಿಸಬೇಕಾಗಿದೆ’ ಎಂದು ಜಿಯೋಂಗ್ ಹೇಳುತ್ತಾರೆ.

ಬ್ರಹ್ಮಾಂಡ ನಾಶ ಆಗುತ್ತಾ?
ಬ್ರಹ್ಮಾಂಡವು ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೊರನೋಟಕ್ಕೆ ಭಾವಿಸಲಾಗಿದೆ. ಆದರೆ ಇಶಾಕ್ ಅವರು, ಬ್ರಹ್ಮಾಂಡದ ವಿಸ್ತರಣೆಯು ನಿಲ್ಲುವ ಸಾಧ್ಯತೆ ಹೊಂದಿದೆ. ನಂತರ ಅದು ಕುಗ್ಗಲಿದೆ. ಬ್ರಹ್ಮಾಂಡವು ಈಗಾಗಲೇ ವಿಸ್ತರಿಸುವುದನ್ನು ನಿಲ್ಲಿಸಿದೆ. ಸ್ವತಃ ಕುಸಿಯುತ್ತಿದೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ. ಒಂದು ವೇಳೆ ಇದು ಸಂಭವಿಸಿದ್ದಲ್ಲಿ, 20 ಶತಕೋಟಿ ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಹೊಸ ಸಂಶೋಧನೆಯು 2024ರ ಏಪ್ರಿಲ್‌ನಲ್ಲಿ ಡಿಇಎಸ್‌ಐಯಿಂದ ಬಿಡುಗಡೆಯಾದ ಡೇಟಾವನ್ನು ಆಧರಿಸಿದೆ. ಅದು ಡಾರ್ಕ್ ಎನರ್ಜಿ ಬದಲಾವಣೆಯ ಚಿಹ್ನೆಗಳನ್ನು ಕಂಡುಹಿಡಿದಿದೆ. ಡಿಇಎಸ್‌ಐ ಬ್ರಹ್ಮಾಂಡವನ್ನು ನಾಲ್ಕು ವರ್ಷಗಳಿಂದ ಸಮೀಕ್ಷೆ ಮಾಡುತ್ತಿದೆ. ಐದು ವರ್ಷಗಳ ಮೌಲ್ಯದ ದತ್ತಾಂಶದ ವಿಶ್ಲೇಷಣೆಯು ಭವಿಷ್ಯದ ಸಂಶೋಧನೆಗಳಿಗೆ ದಾರಿಯಾಗಲಿದೆ. ನಿಗೂಢ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಮುಂದಿನ ಹಂತ ತಲುಪಲು ಸಹಾಯ ಮಾಡುತ್ತದೆ ಎಂದು ಇಶಾಕ್ ಹೇಳುತ್ತಾರೆ.

TAGGED:Dark energyearthlifeUniverse Collapseಡಾರ್ಕ್‌ ಎನರ್ಜಿಬ್ರಹ್ಮಾಂಡಭೂಮಿ
Share This Article
Facebook Whatsapp Whatsapp Telegram

Cinema News

Vasishta Simha 1
`ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?
Cinema Latest Sandalwood Top Stories
ramya 1
ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ: ರಮ್ಯಾ
Cinema Latest Sandalwood Top Stories
Aniruddha
ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?
Cinema Latest Main Post Sandalwood
Ajay Rao 2
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ
Cinema Latest Main Post Sandalwood
ramya 1
ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌
Bengaluru City Cinema Latest Main Post Sandalwood

You Might Also Like

CP Radhakrishnan Narendra Modi
Latest

ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ ಯಾರು? ಅವರನ್ನೇ ಆಯ್ಕೆ ಮಾಡಿದ್ದು ಯಾಕೆ?

Public TV
By Public TV
2 hours ago
Kolar Vemagal Kurugal Town Panchayat Election 1
Districts

ವೇಮಗಲ್- ಕುರಗಲ್ ಪಟ್ಟಣ ಪಂಚಾಯತ್ ಚುನಾವಣೆ; 92% ಮತದಾನ

Public TV
By Public TV
2 hours ago
Parents torture for getting low marks Sirsi Children who ran away from home found in Mumbai
Crime

ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರ ಟಾರ್ಚರ್‌ – ಮನೆ ಬಿಟ್ಟು ತೆರಳಿದ್ದ ಶಿರಸಿಯ ಮಕ್ಕಳು ಮುಂಬೈನಲ್ಲಿ ಪತ್ತೆ

Public TV
By Public TV
3 hours ago
Hampi Tourists 1
Bellary

ಹಂಪಿಯಲ್ಲಿ ಪ್ರವಾಸಿಗರ ದಂಡು – ಬ್ಯಾಟರಿ ಚಾಲಿತ ವಾಹನಗಳಿಲ್ಲದೇ ಪರದಾಡಿದ ಜನ

Public TV
By Public TV
3 hours ago
Eshwar Khandre
Bengaluru City

ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು – ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ

Public TV
By Public TV
4 hours ago
weather
Bengaluru City

ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಯಾವ ತಾಲೂಕಿನ ಶಾಲೆಗಳಿಗೆ ರಜೆ?

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?