ರಾಯಚೂರು: ನರಕಚತುರ್ದಶಿಯ ಪ್ರಯುಕ್ತ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿಯ (Mantralaya Sri Guru Raghavendra Swami) ಶ್ರೀ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿದರು.ಇದನ್ನೂ ಓದಿ:ಕೊಪ್ಪಳದಲ್ಲೂ ಭುಗಿಲೆದ್ದ ವಿವಾದ – ಜಿಲ್ಲೆಯ ಹಲವು ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು
ಶ್ರೀ ರಾಯರು ಮತ್ತು ಮಠದ ಇತರ ಬೃಂದಾವನಗಳು ಹಾಗೂ ಮೂಲ ಬೃಂದಾವನಗಳಿಗೆ ಗೋಪೂಜೆ, ತುಳಸಿ ಪೂಜೆ ಮತ್ತು ತೈಲ ಅಭ್ಯಂಜನವನ್ನು ಮಾಡಿದರು.
ನಂತರ ನರಕೃತ ನೀರಾಜನಂ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮ ಬಳಿಕ ಸುಬುಧೇಂದ್ರ ತೀರ್ಥ ಸ್ವಾಮಿ ಅನುಗ್ರಹ ಸಂದೇಶದ ಮೂಲಕ ನೆರೆದಿದ್ದ ಭಕ್ತರಿಗೆ ಆಶೀರ್ವದಿಸಿದರು.ಇದನ್ನೂ ಓದಿ: IPL Retention | ಇಂದು ಐಪಿಎಲ್ ರೀಟೆನ್ಶನ್ ಪಟ್ಟಿ ರಿಲೀಸ್ – ಕ್ಯಾಪ್ಟನ್ಗಳನ್ನೇ ಹೊರದಬ್ಬುವ ಸಾಧ್ಯತೆ!