Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

Public TV
Last updated: April 30, 2024 5:10 pm
Public TV
Share
4 Min Read
Lok Sabha Elections 1977
SHARE

– ಇಂದಿರಾ ಗಾಂಧಿಗೆ ‘ಕೈ’ ಕೊಟ್ಟ ಜನ
– ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಯಾರು?

ಪಬ್ಲಿಕ್‌ ಟಿವಿ ವಿಶೇಷ
ಭಾರತೀಯ ರಾಜಕಾರಣದಲ್ಲಿ ಏಕಚಕ್ರಾಧಿಪತಿಯಂತೆ ಮೆರೆಯುತ್ತಿದ್ದ ಕಾಂಗ್ರೆಸ್‌ಗೆ ಸೋಲಿನ ರುಚಿ ತೋರಿಸಿದ ಚುನಾವಣೆ ಇದು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷಗಳೆಲ್ಲ ಒಂದಾಗಿ ಕಾಂಗ್ರೆಸ್ (Congress) ಪಕ್ಷವನ್ನು ಹೀನಾಯಕವಾಗಿ ಸೋಲಿಸಿದವು. ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ಪರಿಸ್ಥಿತಿಯನ್ನು ಅನುಭವಿಸಿದ್ದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದರು.

ಸ್ವತಂತ್ರ ಭಾರತದ 6ನೇ ಸಾರ್ವತ್ರಿಕ ಚುನಾವಣೆ 1975 ರಲ್ಲಿ ನಡೆಯಬೇಕಿತ್ತು. ಆದರೆ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿ ಚುನಾವಣೆಯನ್ನು ಎರಡು ವರ್ಷಗಳ ವರೆಗೆ ಮುಂದೂಡಿದರು. ತುರ್ತು ಪರಿಸ್ಥಿತಿಯು ಕಾಂಗ್ರೆಸ್‌ನ ಮೊದಲ ಪತನಕ್ಕೆ ಕಾರಣವಾಯಿತು. ಜನತಾ ಪಕ್ಷ ನೇತೃತ್ವದಲ್ಲಿ ಸಿಪಿಎಂ, ಎಸ್‌ಎಡಿ, ಪಿಡಬ್ಲ್ಯೂಪಿಐ, ಆರ್‌ಎಸ್‌ಪಿ, ಎಐಎಫ್‌ಬಿ, ಆರ್‌ಪಿಐ, ಡಿಎಂಕೆ ಕೂಟ ರಚಿಸಿಕೊಂಡು ಚುನಾವಣೆ ಎದುರಿಸಿ ಗೆದ್ದವು. ಇತ್ತ ಕಾಂಗ್ರೆಸ್ ನೇತೃತ್ವದ ಎಐಎಡಿಎಂಕೆ, ಸಿಇಐ, ಮುಸ್ಲಿಮ್ ಲೀಗ್, ಕೇರಳ ಕಾಂಗ್ರೆಸ್ ಕೂಟ ಸೋತು ನೆಲಕಚ್ಚಿದವು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

indira gandhi

5 ದಿನ ಚುನಾವಣೆ
1977 ರ ಮಾರ್ಚ್ 16 ರಿಂದ 20 ರ ವರೆಗೆ ಚುನಾವಣೆ (1977 Lok Sabha Elections) ನಡೆಯಿತು. ಒಟ್ಟು ಐದು ದಿನ ಮತದಾನ ನಡೆಯಿತು.

ಮತದಾರರು
32,11,74,327 ಒಟ್ಟು ಮತದಾರರಿದ್ದರು. ಅವರ ಪೈಕಿ 19,42,63,915 ಮತದಾರರು ವೋಟು ಚಲಾಯಿಸಿದರು. 60.5% ರಷ್ಟು ಮತ ಚಲಾವಣೆಯಾಗಿತ್ತು.

542 ಸೀಟ್
27 ರಾಜ್ಯಗಳ ಒಟ್ಟು 542 ಸ್ಥಾನಗಳಿಗೆ ಮತದಾನ ನಡೆದಿತ್ತು. ಐದು ರಾಷ್ಟ್ರೀಯ ಹಾಗೂ 15 ಪ್ರಾದೇಶಿಕ ಪಕ್ಷಗಳು ಚುನಾವಣೆ ಎದುರಿಸಿದ್ದವು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್‌ ಕುಸಿದರೂ ಗೆದ್ದ ಇಂದಿರಾ

emergency

ಯಾವ ಪಕ್ಷಕ್ಕೆ ಎಷ್ಟು ಸೀಟ್?
ಜನತಾ ಪಕ್ಷ 295, ಕಾಂಗ್ರೆಸ್ 154, ಸಿಪಿಎಂ 22, ಎಡಿಕೆ 18, ಎಸ್‌ಎಡಿ 9, ಐಎನ್‌ಡಿ 9, ಇತರೆ 35 ಸ್ಥಾನಗಳನ್ನು ಗೆದ್ದವು.

ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಆಡಳಿತ
ಸ್ವಾತಂತ್ರ‍್ಯಾ ನಂತರ ಮೊದಲ ಬಾರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡಿತು. 41.32% ರಷ್ಟು ಮತಗಳ ಹಂಚಿಕೆಯೊAದಿಗೆ, ಜನತಾ ಪಕ್ಷವು 405 ಸ್ಥಾನಗಳಲ್ಲಿ 295 ಸ್ಥಾನಗಳನ್ನು ಪಡೆದುಕೊಂಡು ಭರ್ಜರಿ ಜಯಗಳಿಸಿತು. ಜನತಾ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ಒಟ್ಟು 330 ಸ್ಥಾನಗಳನ್ನು ಗೆದ್ದು ಬೀಗಿದವು.

ಕಾಂಗ್ರೆಸ್ ಪಕ್ಷ 492 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ 34.52% ಮತ ಹಂಚಿಕೆಯೊಂದಿಗೆ 154 ಸ್ಥಾನಗಳನ್ನು ಮಾತ್ರ ಗೆದ್ದಿತು. ಜನತಾ ಪಕ್ಷವು ಭಾರತದ ದಕ್ಷಿಣದಲ್ಲಿ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಗಳಿಸಿತು. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

morarji desai

ಉತ್ತರದಲ್ಲಿ ನೆಲಕಚ್ಚಿದ ಕಾಂಗ್ರೆಸ್
ಕಾಂಗ್ರೆಸ್‌ನಲ್ಲಿರುವ 154 ಸದಸ್ಯರಲ್ಲಿ ಇಬ್ಬರು ಮಾತ್ರ ಉತ್ತರದಿಂದ ಗೆದ್ದು ಬಂದರು. 92 ಮಂದಿ ದಕ್ಷಿಣದ ನಾಲ್ಕು ರಾಜ್ಯಗಳಿಂದ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದರು.

ಉತ್ತರ ಭಾರತದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತೀಯ ಲೋಕದಳದ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದ ವಿರೋಧ ಪಕ್ಷಗಳ ಮೈತ್ರಿಕೂಟದ ಜನತಾ ಪಕ್ಷವು ಕಾಂಗ್ರೆಸ್ ಅನ್ನು ಸೋಲಿಸಿ ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ಸ್ಥಾಪಿಸಿತು.

ಮೊದಲ ಕಾಂಗ್ರೆಸ್ಸೇತರ ಪ್ರಧಾನಿ
ಮೊರಾರ್ಜಿ ದೇಸಾಯಿ ಅವರು 1977 ರ ಮಾರ್ಚ್ 24 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?

ತುರ್ತು ಪರಿಸ್ಥಿತಿ ಕಾಂಗ್ರೆಸ್‌ಗೆ ಮುಳುವಾಯಿತೇ?
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಅವರ ಈ ನಡೆ ಸರ್ವಾಧಿಕಾರಿ ಅಧಿಕಾರವನ್ನು ಪ್ರಚೋದಿಸಿತು. ಇದು ಮೊರಾರ್ಜಿ ದೇಸಾಯಿ ಮತ್ತು ಜಯಪ್ರಕಾಶ ನಾರಾಯಣ್ ಸೇರಿದಂತೆ ಹಲವಾರು ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಜೈಲು ಕಂಬಿ ಹಿಂದೆ ತಳ್ಳಿತು. 1975 ಮತ್ತು 1977 ರ ನಡುವೆ ಅನೇಕ ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು.

ತುರ್ತು ಪರಿಸ್ಥಿತಿಯು ಪತ್ರಿಕಾ ಸ್ವಾತಂತ್ರ‍್ಯ ಮತ್ತು ನಾಗರಿಕ ಸ್ವಾತಂತ್ರ‍್ಯಗಳ ಮೇಲೆ ಮಿತಿಗಳನ್ನು ಹೇರಿತು. ಕಾಂಗ್ರೆಸ್ಸೇತರ ನಾಯಕರ ಮೇಲೆ ದಬ್ಬಾಳಿಕೆ ಹೆಚ್ಚಿಸಿತು. ಕೊನೆಗೆ ಇಂದಿರಾ ಗಾಂಧಿಯವರು ಹೊಸ ಚುನಾವಣೆಗೆ ಕರೆ ನೀಡುವುದರೊಂದಿಗೆ 1977 ರ ಮಾರ್ಚ್ ತಿಂಗಳಿಗೆ ತುರ್ತು ಪರಿಸ್ಥಿತಿಯ ಅಗ್ನಿಪರೀಕ್ಷೆ ಕೊನೆಗೊಂಡಿತು. ಇತರ ಪ್ರತಿಪಕ್ಷ ನಾಯಕರನ್ನು ಬಿಡುಗಡೆ ಮಾಡುವಂತೆಯೂ ಅವರು ಆದೇಶಿಸಿದ್ದರು.

ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ನಂತರ, ಮೊರಾರ್ಜಿ ದೇಸಾಯಿ ಅಧ್ಯಕ್ಷರಾಗಿ ಮತ್ತು ಚರಣ್ ಸಿಂಗ್ ಉಪನಾಯಕರಾಗಿ ಜನತಾ ಪಕ್ಷವನ್ನು ಸ್ಥಾಪಿಸಿದರು. ಭಾರತೀಯ ಜನಸಂಘ, ಭಾರತೀಯ ಲೋಕದಳ, ಕಾಂಗ್ರೆಸ್ (ಒ) ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು.

TAGGED:1977 Lok Sabha Elections1977 ಚುನಾವಣೆ6th Indian General ElectionemergencyIndira GandhiLok Sabha elections 2024ಇಂದಿರಾ ಗಾಂಧಿಲೋಕಸಭಾ ಚುನಾವಣೆ 2024
Share This Article
Facebook Whatsapp Whatsapp Telegram

You Might Also Like

KRS Siddaramaiah
Districts

ಮೊದಲ ಬಾರಿಗೆ ಜೂನ್ ತಿಂಗಳಲ್ಲಿ KRS ಭರ್ತಿ – ಇಂದು ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ

Public TV
By Public TV
1 second ago
Mandya KRS Dam
Bengaluru City

ತಮಿಳುನಾಡಿಗೆ ಕಳೆದ ವರ್ಷ ಎಷ್ಟು ನೀರು ಹರಿದಿದೆ? ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?

Public TV
By Public TV
6 seconds ago
daily horoscope dina bhavishya
Astrology

ದಿನ ಭವಿಷ್ಯ 30-06-2025

Public TV
By Public TV
14 minutes ago
WEATHER 1 e1679398614299
Districts

ರಾಜ್ಯದ ಹವಾಮಾನ ವರದಿ 30-06-2025

Public TV
By Public TV
41 minutes ago
DK Shivakumar 11
Bengaluru City

ಸುರ್ಜೇವಾಲಾ ರಾಜ್ಯ ಭೇಟಿಗೂ ಮುನ್ನವೇ ಕುತೂಹಲ ಕೆರಳಿಸಿದ ಮಲ್ಲಿಕಾರ್ಜುನ ಖರ್ಗೆ – ಡಿಕೆಶಿ ಭೇಟಿ

Public TV
By Public TV
8 hours ago
Eknath Shindhe Devendra Fadnavis
Latest

Maharashtra | ʻತ್ರಿಭಾಷಾ ಸೂತ್ರʼ ಆದೇಶ ಹಿಂಪಡೆದ ʻಮಹಾʼ ಸರ್ಕಾರ

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?