ಬಿಆರ್‌ ಹಿಲ್ಸ್‌ಗೆ ಜ.15, 16 ರಂದು ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧ

Public TV
1 Min Read
br hills Biligirirangana Hills

ಚಾಮರಾಜನಗರ: ಸಂಕ್ರಾಂತಿ (Makar Sankranti) ಹಬ್ಬದಂದು ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿ ರಂಗನಬೆಟ್ಟಕ್ಕೆ (Biligiriranga Hills) ದ್ವಿಚಕ್ರ ವಾಹನಗಳ (Two wheelers) ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸಂಕ್ರಾಂತಿ ಹಾಗೂ ಚಿಕ್ಕಜಾತ್ರೆ ಹಿನ್ನಲೆಯಲ್ಲಿ ಜ.15 ಹಾಗೂ 16 ರಂದು ಬೈಕ್‌ಗಳಿಗೆ ನಿರ್ಬಂಧ ಹೇರಿ ಡಿಸಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮೂಲ Vs ವಲಸಿಗ : ಬೆಳಗಾವಿಯಲ್ಲಿ ಬಿಜೆಪಿ ಸಂಘರ್ಷ ಜೋರು

ಈ ಎರಡು ದಿನ ವಾಹನ ದಟ್ಟನೆ ಹೆಚ್ಚಾಗುವ ಸಾಧ್ಯತೆ ಇದ್ದು ಬೆಟ್ಟದ ರಸ್ತೆ ಕಿರಿದು ಹಾಗೂ ಕಡಿದಾದ ಕಾರಣ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಂಡಿದೆ. ಗುಂಬಳ್ಳಿ ಮತ್ತು ಹೊಂಡರಬಾಳು ಎರಡು ಅರಣ್ಯ ಇಲಾಖೆಯ ಚೆಕ್‌ ಪೋಸ್ಟ್ ಗಳಲ್ಲಿಯೂ ನಿರ್ಬಂಧ ವಿಧಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಹುಟ್ಟು ಮುಸ್ಲಿಂ ಆಗದಿದ್ರೂ, ಟೋಪಿ ಹಾಕಿದಾಗ ಒರಿಜಿನಲ್‌ ಮುಸ್ಲಿಂ ಥರ ಕಾಣ್ತಾರೆ: ಸಿ.ಟಿ.ರವಿ

 

Share This Article