ಚಿಕ್ಕಬಳ್ಳಾಪುರ: ಚುನಾವಣೆಗೆ (Election) ಕೆಲವೇ ತಿಂಗಳು ಬಾಕಿ ಇದ್ದು, ರಾಜ್ಯದಲ್ಲಿ 3 ಪಕ್ಷಗಳು ಯಾತ್ರೆಗಳ ಅಬ್ಬರದ ಪ್ರಚಾರ ಕೈಗೊಂಡಿವೆ. ಮತದಾರರನ್ನ (Voters) ಓಲೈಸೋಕೆ ನಾನಾ ತಂತ್ರಗಳನ್ನ ಹೆಣೆದು ಉಚಿತ ಕೊಡುಗೆಗಳನ್ನ ಘೋಷಣೆ ಮಾಡ್ತಿದ್ದಾರೆ.
ಈ ನಡುವೆ ರಾಜಕೀಯ ನಾಯಕರ (Political Leader) ಬೆಂಬಲಿಗರು ಸಹ ತಮ್ಮ ನಾಯಕರ ಮನಗೆಲ್ಲೋಕೆ ಸಾವಿರಾರು ಜನರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಶಕ್ತಿ ಪ್ರದರ್ಶನದ ವೇಳೆ ಉಚಿತ ಸೀರೆ ಉಡಗೊರೆಯಾಗಿ ಕೊಟ್ಟಿದ್ದು, ಸೀರೆಗಾಗಿ ನಾರಿಯರು ನಾನಾ ನೀನಾ ಅಂತಾ ಮುಗಿಬಿದ್ದ ಸನ್ನಿವೇಶ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಗೆಂಟಿಗನಾಹಳ್ಳಿ ಗ್ರಾಮದಲ್ಲಿ ನಡೆಯಿತು.
ಹೌದು. ಗ್ರಾಮದ ಬಿಜೆಪಿ ಮುಖಂಡ ಸಚಿವ ಕೆ.ಸುಧಾಕರ್ (K Sudhakar) ಬೆಂಬಲಿಗ ಶಿವಕುಮಾರ್, `ಸುಧಾಕರ್ಗೆ ಅಭಿನಂದನಾ ಸಮಾರಂಭ ಹಾಗೂ ಔತಣಕೂಟ’ದ ಹೆಸರಲ್ಲಿ ಸಾವಿರಾರು ಮಹಿಳೆಯರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗೆಂಟಿಗಾನಹಳ್ಳಿ ಗ್ರಾಮದ ಬಳಿ ಸಮಾರಂಭ ಆಯೋಜಿಸಿ ಭರ್ಜರಿ ಬಾಡೂಟ ಹಾಕಿಸಿ, ಸಾವಿರಾರು ಮಹಿಳೆಯರಿಗೆ ಕಲರ್ ಕಲರ್ ಸೀರೆ ಕೊಟ್ಟು ಮಹಿಳೆಯರ ಮನವೊಲಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಕೇವಲ 1 ರೂ.ಗೆ ಬಡಜನರಿಗೆ ಚಿಕಿತ್ಸೆ ನೀಡ್ತಾರೆ ಈ ಡಾಕ್ಟರ್!
ಸಾವಿರಾರು ಮಹಿಳೆಯರು ಒಮ್ಮೆಲೆ ಸೀರೆ ಪಡೆಯೋಕೆ ನಾನಾ ನೀನಾ ಅಂತಾ ಮುಗಿಬಿದ್ದಿದ್ದು ನೂಕು ನುಗ್ಗಲು ಉಂಟಾಗಿತ್ತು. ಗ್ರಾಮದೇವತೆಗೆ ಪೂಜೆ ಹೆಸರಲ್ಲಿ ಶಿವಕುಮಾರ್ (Shivakumar) ಸಭೆಯಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರಿಗೆ ಟೋಕನ್ ಕೊಟ್ಟು ಹರಿಶಿನ ಕುಂಕುಮದ ಹೆಸರಲ್ಲಿ ಉಚಿತ ಸೀರೆಯನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್
ಚಿಕ್ಕ-ಚಿಕ್ಕ ಮಕ್ಕಳನ್ನ ಕಂಕಳಲ್ಲಿ ಎತ್ತಿಕೊಂಡು ಸೀರೆಗಾಗಿ ಮುಗಿಬಿದ್ದಿದ್ದರು, ಗಂಟೆಗಟ್ಟಲೇ ಕಾಯ್ದುಕೊಂಡರೂ ನೂಕು ನುಗ್ಗಲಲ್ಲಿ ನಿಂತು ಸೀರೆ ಪಡೆದು ಮಹಿಳೆಯರು ತೆರಳಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k