ತಿಹಾರ್ ಜೈಲಿಗೆ ಹೋಗಿದ್ದ ಬಗ್ಗೆ ಡಿಕೆಶಿ ಭಾಷಣ ಮಾಡಲಿ: ಈಶ್ವರಪ್ಪ ವ್ಯಂಗ್ಯ

Public TV
1 Min Read
ks eshwarappa 2

ಬೆಂಗಳೂರು: ಡಿ.ಕೆ. ಶಿವಕುಮಾರ್ (D.K Shivakumar) ಪ್ರತ್ಯೇಕ ಬಸ್ ಯಾತ್ರೆ ವಿಚಾರವಾಗಿ ಮಾಜಿ ಸಚಿವ ಈಶ್ವರಪ್ಪ (KS Eshwarappa) ಕಿಡಿಕಾರಿದ್ದಾರೆ.

ಅವರು ನಾನು ತಿಹಾರ್ ಜೈಲಿ (Tihar Jail) ಗೆ ಯಾಕೆ ಹೋಗಿದ್ದೆ, ಯಾವ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಮಾಡಿದ್ದೆ..?, ಯಾಕೆ ಇಡಿ (Enforcement Directorate) ಕೇಸ್ ಹಾಕಿದ್ದು..?, ಹೇಗೆ ಕಂತೆ ಕಂತೆ ನೋಟು ಸಿಕ್ಕಿತು ಅಂತಾ ವಿವರಿಸಿ 224 ಕ್ಷೇತ್ರದಲ್ಲಿ ಭಾಷಣ ಶುರು ಮಾಡಲಿ ಅಂತಾ ಡಿಕೆಶಿಗೆ ಟಕ್ಕರ್ ಕೊಟ್ರು. ಇದನ್ನೂ ಓದಿ: ಸಿಡಿ ರಾಡಿ: ರಮೇಶ್ ಜಾರಕಿಹೊಳಿಗೆ ಬೆಂಬಲ- ಮಂತ್ರಿಯೂ ಬೇಡ ಎಂದ ಈಶ್ವರಪ್ಪ

DK SHIVAKUMAR

ಇದೇ ವೇಳೆ ಶಿವಮೊಗ್ಗ (Shivamogga) ದಲ್ಲಿ ಶಾಂತಿ ನೆಲೆಸಬೇಕು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಈಶ್ವರಪ್ಪ ಗರಂ ಆದರು. ಹರ್ಷನ ಕೊಲೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕಾ ಅಂತಾ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟು ಬಿಡಲಿ. ಪಿಎಫ್ ಐ (PFI) ಗೂಂಡಾ ಕೊಲೆ ಮಾಡಿದ ಬಳಿಕವೂ ಅದನ್ನು ಖಂಡಿಸುವ ಪ್ರಯತ್ನವನ್ನೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ (Siddaramaiah) ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

SIDDARAMAIAH DKSHI

ಕೊಲೆ ಆದರೆ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನವರಿಗೆ ಖುಷಿ. ಮುಸಲ್ಮಾನ ಕೊಲೆ ಆದರೆ ಬಿಜೆಪಿ ಕಾರ್ಯಕರ್ತರ (BJP Activists) ಮೇಲೆ ಆಪಾದನೆ ಮಾಡುತ್ತಾರೆ. ಹಿಂದೂಗಳ ಕೊಲೆ ಆದರೆ ಅವರಿಗೆ ಏನೂ ಬೇಜಾರು ಇಲ್ಲ. ಶಿವಮೊಗ್ಗ ತಣ್ಣಗಿದೆ, ಅದಕ್ಕೆ ಬೆಂಕಿ ಹಚ್ಚಲು ಡಿ.ಕೆ. ಶಿವಕುಮಾರ್ ಪ್ರಯತ್ನ ಮಾಡಬಾರದು ಅಂತಾ ಈಶ್ವರಪ್ಪ ಕಿಡಿಕಾರಿದ್ರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *