ಬೆಂಗಳೂರು: ಕಾಂಗ್ರೆಸ್ (Congress) ಘೋಷಿಸಿದ ಉಚಿತ ಭಾಗ್ಯಗಳ ವಿಚಾರದಲ್ಲಿ ಉಂಟಾದ ಗೊಂದಲ ಪರಿಹಾರಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಸ್ ಯಾತ್ರೆ ನಂತರ ಗೊಂದಲ ಪರಿಹರಿಸಲು ಬ್ಲೂಪ್ರಿಂಟ್ ಸಿದ್ಧವಾಗಲಿದೆ. ಉಚಿತ ಭಾಗ್ಯ ಹೇಗೆ ಕೊಡುತ್ತೇವೆ? ಎಲ್ಲಿಂದ ಆದಾಯ ಹೊಂದಿಸುತ್ತೇವೆ? ಎಲ್ಲವನ್ನೂ ಲೆಕ್ಕಸಹಿತ ಜನರ ಮುಂದಿಡಲು ಬ್ಲೂಪ್ರಿಂಟ್ ಸಿದ್ಧಪಡಿಸಿ ಬಹಿರಂಗಪಡಿಸಲು ಪ್ಲಾನ್ ಮಾಡಲಾಗಿದೆ. ಅಲ್ಲಿವರೆಗೆ ಯಾರೂ ಮಾತನಾಡುವುದು ಬೇಡ, ಗೊಂದಲ ಸೃಷ್ಟಿಸುವುದೂ ಬೇಡ ಎಂಬ ಸೂಚನೆ ರವಾನಿಸಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಮತ್ತೊಂದು ಟೂರ್ – ಬೆಂಗಳೂರು, ಮಂಡ್ಯ ಗೇಮ್ ಪ್ಲ್ಯಾನ್?
ಜನವರಿ 27ರ ನಂತರ ಉಚಿತ ಭಾಗ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಪಾಳಯ ಪ್ಲಾನ್ ಮಾಡಿದೆ. ಕಾಂಗ್ರೆಸ್ ಈಗಾಗಲೇ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಎರಡೂ ಉಚಿತ ಭಾಗ್ಯಗಳ ಘೋಷಣೆ ಮಾಡಿದೆ. ಆದರೆ ಅದಕ್ಕೆ ಅರ್ಜಿ ಹಾಕಬೇಕು ಎಂಬಂತೆ ಕೆಪಿಸಿಸಿ ಅಧ್ಯಕ್ಷರು ಮಾತನಾಡಿದ್ದು ಗೊಂದಲ ಉಂಟುಮಾಡಿತ್ತು. ಕಾಂಗ್ರೆಸ್ನ ಉಚಿತ ಭಾಗ್ಯದ ಘೋಷಣೆ ಬಗ್ಗೆ ಟೀಕೆ ಜೊತೆಗೆ ಗೊಂದಲವು ಮೂಡಿತ್ತು. ಅದನ್ನು ಸರಿಪಡಿಸಲು ಸ್ವತಃ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯುತ್ತಿದ್ದಾರೆ ಎನ್ನಲಾಗಿದೆ.
ಎರಡು ಯೋಜನೆಗೆ ತಗಲುವ ವೆಚ್ಚ, ರಾಜ್ಯ ಸರ್ಕಾರದ ಬಜೆಟ್ನಲ್ಲಿ ಅದನ್ನ ಹೇಗೆ ಸರಿದೂಗಿಸಬಹುದು? ಈ ಘೋಷಣೆ ಬಗ್ಗೆ ಇರುವ ಅನುಮಾನಗಳೇನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲು ಬ್ಲೂಪ್ರಿಂಟ್ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ; ಅವರ ವಿರುದ್ಧ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ – KGF Babu
ಜನವರಿ 27ರ ನಂತರ ಅಧಿಕೃತ ಮಾಹಿತಿಯನ್ನೇ ಜನರ ಮುಂದಿಡುವುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗಿದೆ. ಆ ಮೂಲಕ ಕಾಂಗ್ರೆಸ್ ಭರವಸೆ ಕೇವಲ ಭರವಸೆಯಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಕೊಟ್ಟ ಭರವಸೆ ತಲುಪಲಿದೆ ಎಂಬ ಲೆಕ್ಕಾಚಾರ ಮುಂದಿಡುವುದು ಸಿದ್ದರಾಮಯ್ಯ ಪ್ಲಾನ್ ಎನ್ನಲಾಗಿದೆ. ಆದ್ದರಿಂದ ಅಲ್ಲಿವರೆಗೆ ಗೊಂದಲ ಮೂಡಿಸದಂತೆ ʼಕೈʼ ನಾಯಕರಿಗೆ ಸೂಚನೆ ನೀಡಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k