ಶಿವಮೊಗ್ಗ: ಸಾಗರದಲ್ಲಿ ಬಜರಂಗದಳ (Bajrang Dal) ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಯತ್ನ ಎಂಬುದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ತನ್ನ ಸಹೋದರಿಗೆ ಸುನಿಲ್ ಕಾಟ ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಸಮೀರ್ ಈ ಕೊಲೆ ಯತ್ನ ನಡೆಸಿದ್ದಾನೆ. ಸಮೀರ್ ಸಹೋದರಿಗೆ ಕಿರುಕುಳ ಕೊಡುತ್ತಿದ್ದ ಎಂಬುದಕ್ಕೆ ಕರೆ ಮಾಡಿದ್ದಕ್ಕೆ ದಾಖಲೆ ಸಿಕ್ಕಿದೆ ಎಂದು ಶಿವಮೊಗ್ಗ ಎಸ್.ಪಿ. ಮಿಥುನ್ (Shivamogga SP Mithun) ತಿಳಿಸಿದ್ದಾರೆ.
ಒಂದು ಬಾರಿ ನಿನ್ನ ತಂಗಿ ನಂಬರ್ ಕೊಡು ಎಂದು ಸುನಿಲ್ ನೇರವಾಗಿ ಕೇಳಿದ್ದಕ್ಕೆ ಸಮೀರ್ ಸಿಟ್ಟಾಗಿದ್ದ. ಈ ಸಂದರ್ಭದಲ್ಲಿ ನನ್ನ ತಂಗಿಯ ತಂಟೆಗೆ ಬರಬೇಡ ಎಂದು ಎಚ್ಚರಿಸಿದ್ದ. ಆದರೂ ಸುನಿಲ್ ತಂಗಿಗೆ ಕಿರುಕುಳ ನೀಡಿದ್ದಕ್ಕೆ ಕೊಲೆಗೆ ಯತ್ನಿಸಿದ್ದಾನೆ ಎಂದು ಎಂದು ಎಸ್ಪಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ವೈಯಕ್ತಿಕ ವಿವಾದಗಳಿದ್ದರೆ ಠಾಣೆಗೆ ದೂರು ನೀಡಬೇಕು. ಯಾರೂ ಅಪರಾಧ ಕೃತ್ಯಕ್ಕೆ ಇಳಿಯಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಂದೂಗಳ ಭಾವನೆ ಕೆಣಕಿದಾಗ ಸುಮ್ಮನಿರಬೇಕಾ – ಭಜರಂಗದಳ ಗುಡುಗು
ಸಾಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರೋಪಿ ಸಮೀರ್ ಸಹೋದರಿ ಸುನಿಲ್ ಬಗ್ಗೆ ಆರೋಪ ಮಾಡಿದ್ದು, ಆತ ತನಗೆ ಹಿಜಬ್ (Hijab) ತೆಗೆಯುವಂತೆ ಪೀಡಿಸುತ್ತಿದ್ದ. ಕಳೆದ ಹಿಜಬ್ ಗಲಾಟೆ ಬಳಿಕ ಬಹಳಷ್ಟು ಬಾರಿ ಹಿಜಬ್ ತೆಗೆಯುವಂತೆ ಕಾಟ ಕೊಡುತ್ತಿದ್ದ ಎಂದು ದೂರಿದ್ದಾರೆ. ಅಲ್ಲದೇ ನನ್ನ ಅಣ್ಣ ಆತನಿಗೆ ಹೆದರಿಸಲು ಹೋಗಿದ್ದ ಅಷ್ಟೇ ಎಂದು ತಿಳಿಸಿದ್ದಾರೆ.
ಎಸ್ಪಿ ಎಸ್.ಪಿ. ಮಿಥುನ್ ಹೇಳಿಕೆ ಬಗ್ಗೆ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರಾದರೂ ತಂಗಿ ಫೋನ್ ನಂಬರ್ ಕೊಡಿ ಎಂದು ಅಣ್ಣನನ್ನು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿ ಸಮೀರ್ ಸೇರಿ ಮೂವರನ್ನು ಬಂಧಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k