ಕಿನ್ನೌರ್‌ನಲ್ಲಿ ಭಾರೀ ಹಿಮಪಾತಕ್ಕೆ ಮೂವರು ಬಲಿ – 10 ಮಂದಿಯ ರಕ್ಷಣೆ

Public TV
1 Min Read
himachal pradesh

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದ ಮೂವರು ಪಾದಯಾತ್ರಿಕರು ಸಾವನ್ನಪ್ಪಿದ್ದಾರೆ.

ಈ ಮೂವರು ಶಿಮ್ಲಾದ ರೋಹ್ರುದಲ್ಲಿರುವ ಜಂಗ್ಲಿಖ್‍ನಿಂದ ಸಾಂಗ್ಲಾದ ಕಿನ್ನೌರ್‍ಗೆ ತೆರಳುತ್ತಿದ್ದರು. ಕಿನ್ನೌರ್‌ನಲ್ಲಿ ಬುರಾನ್ ಪಾಸ್ ಬಳಿ ಇರುವ ಸಮುದ್ರ ಮಟ್ಟದಿಂದ 4,696 ಮೀಟರ್ ಎತ್ತರದಲ್ಲಿ ಸಿಲುಕಿಕೊಂಡಿದ್ದ 10 ಮಂದಿಯನ್ನು ಇಂಡೋ-ಟಿಬೆಟಿಯನ್ ಗಡಿಯ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಷ್ಟು ಮಂದಿ ಬುರಾನ್ ಪಾಸ್‍ಗೆ ತಲುಪುವಲ್ಲಿ ಯಶಸ್ವಿಯಾದರು. ಆದರೆ ಈ ಪ್ರದೇಶದಲ್ಲಿ ಭಾರೀ ಹಿಮಪಾತದಿಂದಾಗಿ ಇದರಿಂದ ಆಚೆಗೆ ಹೋಗಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

himachal pradesh 2

ಮೂವರು ಪಾದಯಾತ್ರಿಕರ ಮೃತ ದೇಹಗಳನ್ನು ನಾಲ್ಕು ಅಡಿ ಹಿಮದ ಕೆಳಗೆ ಹೂಳಲಾಗಿದೆ ಎಂದು ಕಿನ್ನೌರ್‍ನ ಅಪರ ಆಯುಕ್ತ ಅಪೂರ್ವ್ ದೇವಗನ್ ತಿಳಿಸಿದ್ದಾರೆ. ಇದನ್ನೂ ಓದಿ:  ಮಕ್ಕಳಿಗೆ ಬಿಸಿಯೂಟ ನೀಡಲು ಗುಡ್ಡಗಾಡಲ್ಲಿ ನಡೆಯುವ ಶಿಕ್ಷಕ

ಬುರಾನ್ ಪಾಸ್‍ನಲ್ಲಿ ಗುಂಪೊಂದು ಸಿಕ್ಕಿ ಹಾಕಿಕೊಂಡಿರುವ ಮಾಹಿತಿ ಬಂದ ನಂತರ 10 ಪಾದಯಾತ್ರಿಕರಲ್ಲಿ ಒಂಬತ್ತು ಮಂದಿ ಮುಂಬೈನವರು ಮತ್ತು ಒಬ್ಬರು ನವದೆಹಲಿಯವರು ಎಂದು ತಿಳಿದುಬಂದಿದೆ ಎಂದು ಜಿಲ್ಲಾಡಳಿತದ ಅಧಿಕಾರಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *