ಉಡುಪಿ: ವಸತಿ ಗೃಹದ ಜನರು ತೋಟದಲ್ಲಿರುವ ಹೂಗಳನ್ನು ಕೀಳಲು ಹೋದಾಗ ಅಲ್ಲಿದ್ದ ಸುಮಾರು 10 ಅಡಿಯ ಕಾಳಿಂಗ ಸರ್ಪ ಕಾರ್ಕಳ ತಾಲೂಕಿನ ಚೆನ್ನಯ ಥೀಂ ಪಾರ್ಕ್ ಪರಿಸರದ ವಸತಿಗೃಹದ ಬಳಿ ಪತ್ತೆಯಾಗಿದೆ.
ಕಾಳಿಂಗ ಕಂಡು ಭಯಭೀತರಾದ ಜನರು ಉರಗ ತಜ್ಞ ಅನಿಲ್ ಪ್ರಭುಗೆ ತಿಳಿಸಲಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅವರು ಬರೀ ಕೈಯಲ್ಲಿ ಕಾಳಿಂಗ ಸರ್ಪ ಹಿಡಿದರು.
ಸರ್ಪವನ್ನು ಸೆರೆಹಿಡಿದ ಬಳಿಕ ಸ್ಥಳೀಯರಿಗೆ ಕಾಳಿಂಗದ ಬಗ್ಗೆ ಮಾಹಿತಿಯನ್ನು ನೀಡಿದರು. ಸಲೀಸಾಗಿ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕುದುರೆಮುಖ ರಕ್ಷಿತಾರಣ್ಯ ಪ್ರದೇಶಕ್ಕೆ ಬಿಡಲಾಯಿತು. ಇತ್ತೀಚಿನ ದಿನಗಳಲ್ಲಿ ಆಹಾರ ಹುಡುಕಿಕೊಂಡು ನಾಡಿಗೆ ನಾಡಿಗೆ ಇಳಿಯುತ್ತಿರುವ ಉರಗಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.