ರಾಯಚೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಯಚೂರಿನ ರಿಮ್ಸ್ ಆಸ್ಪತ್ರೆ ಸಿಬ್ಬಂದಿ ಕಪ್ಪು ಬಟ್ಟೆ ಧರಸಿ ಪ್ರತಿಭಟನೆ ನಡೆಸಿದರು.
ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿದ್ದೇವೆ. ಆದ್ರೆ ಯಾವುದೇ ಸುರಕ್ಷತೆಗಳನ್ನ ನೀಡುತ್ತಿಲ್ಲ. ನಮಗೆ ತೊಂದರೆಗಳಾದ್ರೆ ನಮ್ಮನ್ನ ನೋಡಿಕೊಳ್ಳುವವರ್ಯಾರು. ಕೋವಿಡ್ ಸೋಂಕಿತರನ್ನ ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳುವುದೇ ಕಷ್ಟವಾಗಿದೆ. ಯಾಕಂದ್ರೆ ನಮಗೇ ಯಾವುದೇ ರೀತಿಯ ಸುರಕ್ಷತೆಗಳು ಇಲ್ಲ ಅಂತ ರಿಮ್ಸ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳನ್ನ ನೊಂದಾಯಿಸಿಕೊಳ್ಳದೆ ಇರಲು ಆಗಲ್ಲ. ಆದ್ರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊದಲು ಆಡಳಿತ ಮಂಡಳಿ ರಕ್ಷಣೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. 2006 ರಿಂದ ನೂತನ ಪಿಂಚಣಿ ಯೋಜನೆ ಸಹ ನಮಗೆ ಅನ್ವಯಿಸಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಹೋರಾಟವನ್ನು ಚುರುಕುಗೊಳಿಸಬೇಕಾಗುತ್ತದೆ ಅಂತ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದ್ದಾರೆ.