ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನೂತನವಾಗಿ ಅನುಷ್ಠಾನಕ್ಕೆ ತರುತ್ತಿರುವ ಪಾರ್ಸೆಲ್ ಮತ್ತು ಕಾರ್ಗೋ ಸೇವೆಯಾದ ‘ನಮ್ಮ ಕಾರ್ಗೋ’ ಸೇವೆ ಶುಕ್ರವಾರ ಉದ್ಘಾಟನೆಯಾಗಲಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇದೇ ಶುಕ್ರವಾರ ಈ ಸೇವೆಯನ್ನು ಉದ್ಧಾಟಿಸಲಿದ್ದಾರೆ.
- Advertisement 2
- Advertisement 3
ರಾಜ್ಯಾದ್ಯಂತ ಹಾಗೂ ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿಶ್ವಾಸಾರ್ಹ ಮತ್ತು ಮಿತವ್ಯಯದ ನಮ್ಮ ಕಾರ್ಗೋ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.
- Advertisement 4
ಜೊತೆಗೆ ಕೆಎಸ್ಆರ್ಟಿಸಿ ಇಂತಹ ಒಂದು ಮಹತ್ವದ ಯೋಜನೆಗೆ ಕೈ ಹಾಕಿರುವುದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.