ಬೆಂಗಳೂರು: ಕೊರೊನಾ ಆರ್ಥಿಕ ಸಂಕಷ್ಟ ಕಾಸಿಲ್ಲ ಎಂದು ಹೇಳುವ ಸರ್ಕಾರ ಸಚಿವರು ಮತ್ತು ಸಂಸದರಿಗೆ ಹೊಸ ಕಾರು ಖರೀದಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಟೀಕೆಗೆ ಗುರಿಯಾಗಿದೆ.
ಸಚಿವರು, ಸಂಸದರಿಗೆ ಹೊಸ ಕಾರು ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಶೋರೂಂ ದರ 22 ಲಕ್ಷಕ್ಕೆ ಖರೀದಿ ಮಿತಿ ನಿಗದಿ ಮಾಡಲಾಗಿತ್ತು. ಈಗ ಶೋರೂಮ್ ದರ 23 ಲಕ್ಷಕ್ಕೆ ಖರೀದಿ ಮಿತಿ ಏರಿಕೆ ನಿಗದಿ ಪರಿಷ್ಕರಿಸಿ ಆದೇಶಿಸಲಾಗಿದೆ. 60 ಕಾರುಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.
ಕೊರೊನಾ ಕಾಲದಲ್ಲೇ ಇದು ಎರಡನೇ ಬಾರಿ ಖರೀದಿ ದರ ಮಿತಿ ಪರಿಷ್ಕರಣೆ ಮಾಡಲಾಗುತ್ತಿದೆ. ಬರೋಬ್ಬರಿ 32ಸಚಿವರು, 28 ಸಂಸದರು ಹೊಸ ಕಾರು ಖರೀದಿ ಮಾಡ್ತಾರಾ ಎನ್ನಲಾಗುತ್ತಿದೆ. 60 ಕಾರು ಖರೀದಿ ಮಾಡಿದ್ರೆ ರಾಜ್ಯದಕ್ಕೆ ಬೊಕ್ಕಸಕ್ಕೆ ಬರೋಬ್ಬರಿ 13.80 ಕೋಟಿ ರೂ. ಹೊರೆ ಬೀಳಲಿದೆ.
ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿ ಎಂದರೆ ಕೊರೊನಾ ಕಾರಣವನ್ನು ಹೇಳುತ್ತಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲು ದುಡ್ಡಿಲ್ಲ ಎಂದು ಹೇಳುತ್ತಾರೆ. ಸಾರಿಗೆ ನೌಕರರ ಸಂಬಳ ಸರಿಯಾಗಿ ಪಾವತಿಯಾಗತ್ತಿಲ್ಲ. ತೆರಿಗೆ ಕಡಿಮೆ ಮಾಡಿ ತೈಲ ಬೆಲೆ ಇಳಿಸಿ ಎಂದರೂ ಕೇಳದ ಸರ್ಕಾರ ಈಗ ನಮ್ಮ ತೆರಿಗೆ ಹಣದಿಂದಲೇ ಕಾರು ಖರೀದಿಗೆ ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಜನ ಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.
ಸಚಿವರಿಗೆ ವಾಹನ ಬೇಕು ನಿಜ. ಆದರೆ ಸುಸಜ್ಜಿತವಾಗಿರಬೇಕು. ಆದರೆ ಐಶಾರಾಮಿಯಾಗಿರಬೇಕು ಎಂಬ ನಿಯಮವಿಲ್ಲ. ಕೋವಿಡ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕಾದ ಸರ್ಕಾರವೇ ಖರ್ಚು ಮಾಡಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.