ಚಿತ್ರದುರ್ಗ: ಚಲಿಸುವ ರೈಲಿಗೆ ಸಿಲುಕಿ ಇಬ್ಬರು ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ಬಳಿ ನಡೆದಿದೆ.
- Advertisement 2
ದೇವರಾಜ(43), ಸುನೀಲ್(28) ಮೃತರಾಗಿದ್ದಾರೆ. ಬೇಡರೆಡ್ಡಿಹಳ್ಳಿ ಬಳಿಯ ರೈಲ್ವೆ ಗೇಟ್ ದಾಟುವ ವೇಳೆ ದುರ್ಘಟನೆ ಸಂಭವಿಸಿರುವ ಸಾಧ್ಯತೆ ಇದ್ದು, ರಾತ್ರಿ ವೇಳೆ ಚಳ್ಳಕೆರೆಯಿಂದ ತಳಕು ಗ್ರಾಮದ ಬೋವಿ ಕಾಲೋನಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಹೆಂಡತಿಯಾಗಿದ್ದವಳು ಮಲತಾಯಿಯಾಗಿ ಬಂದಳು..!
- Advertisement 3
- Advertisement 4
ದೇಹಗಳು ರೈಲಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಕೈಕಾಲುಗಳು ತುಂಡು ತುಂಡಾಗಿ ಆಗಿದೆ. ದೇಹದ ಭಾಗಗಳು ದಿಕ್ಕಿಗೊಂದು ಬಿದ್ದಿರುವ ದೃಶ್ಯ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಇದನ್ನೂ ಓದಿ: ಶಕ್ತಿ ಇದ್ದರೆ ಅಪ್ಪ, ಮಗ ಅಂಬಾರಿ ಹೊರುತ್ತಾರೆ: ಬಿ.ಸಿ.ಪಾಟೀಲ್
ಈ ಪ್ರಕರಣ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ರೈಲ್ವೆ ಪೊಲೀಸರು ಹಾಗೂ ತಳಕು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.