ಇಷ್ಟು ದಿನ ಬಿಗ್ಬಾಸ್ ಮನೆಯಲ್ಲಿ ಚಿಕ್ಕಮಕ್ಕಳಂತೆ ಜಗಳ, ಚೇಷ್ಟೆ, ತಮಾಷೆ ಮಾಡಿಕೊಮಡಿದ್ದ ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ಜಗಳ ಮಾಡಿದ್ದಾರೆ.
- Advertisement 2
ಗಾರ್ಡನ್ ಏರಿಯಾದಲ್ಲಿ ಶುಭಾ ಪೂಂಜಾ ಗೇಮ್ಗೆ ಸಂಬಂಧ ಪಟ್ಟ ವಿಚಾರದಲ್ಲಿ ಎಷ್ಟು ಬೇಕಾದರೂ ಕಿತ್ತಾಡಿ, ಆದರೆ ವೈಯಕ್ತಿಕವಾಗಿ ಬೇಡ ಎಂದು ಪ್ರಶಾಂತ್ ಹಾಗೂ ಚಕ್ರವರ್ತಿಯವರಿಗೆ ಮನವಿ ಮಾಡಿದ್ದರು. ನಂತರ ದಿವ್ಯಾ ಸುರೇಶ್ ಬಳಿ ಹೋಗಿ ಇನ್ನು ಮುಂದೆ ಏನು ಮಾತನಾಡಬೇಡ ಎಲ್ಲವನ್ನು ಇಗ್ನೋರ್ ಮಾಡು, ಯಾವ ಹುಡುಗಿಯರ ಬಗ್ಗೆನೂ ಕೆಟ್ಟದಾಗಿ ಮಾತನಾಡುವುದು ನನಗೆ ಇಷ್ಟ ಆಗುವುದಿಲ್ಲ. ಯಾಕೆಂದರೆ ನಾನು ಇದನ್ನು ಅನುಭವಿಸಿದ್ದೇನೆ. ಇರುವುದು ಮೂರು ಅಥವಾ ಎರಡು ವಾರ ಎಲ್ಲವನ್ನು ಬಿಟ್ಟು ಬಿಡು ಎಂದು ಕಿವಿ ಮಾತು ಹೇಳಿದ್ದರು.
- Advertisement 3
- Advertisement 4
ನಂತರ ಈ ವಿಚಾರವಾಗಿ ಶುಭಾಪೂಂಜಾ ನಿಧಿ ಸುಬ್ಬಯ್ಯ ಜೊತೆ ರಾತ್ರಿ ಮಾತನಾಡಿದ್ದಾರೆ. ಈ ವೇಳೆ ನಿಧಿ ಸುಬ್ಬಯ್ಯ, ಪ್ರಶಾಂತ್ರವರಿಗೆ ನೀನು ಹೇಳಿದ್ದು ಸರಿ, ಆದರೆ ದಿವ್ಯಾ ಸುರೇಶ್ಗೆ ಹೇಳಬಾರದಿತ್ತು. ಯಾಕೆಂದರೆ ಅವಳು ಮೊದಲೇ ಅಳುತ್ತಿದ್ದಾಳೆ. ಆಗ ಶುಭಾ ಅವಳಿಗೆ ಹೀಗೆ ನೂರು ಬಾರಿ ಹೇಳುತ್ತಿದ್ದರೆ, ಇನ್ನೂ ಕುಗ್ಗಿ ಹೋಗುತ್ತಾಳೆ ಎಂದು ಹೇಳುತ್ತಾರೆ.
ಇದಕ್ಕೆ ಶುಭಾ ಪೂಂಜಾ ನೀನು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನೀನು ಒಂದು ಹೇಳಿದರೆ, ಅವರು ಒಂದು ಹೇಳುತ್ತಾರೆ, ಪ್ಲೀಸ್ ನಿಧಿ ನೀನು ಕೆಲವೊಂದು ಬಾರಿ ಅರ್ಥನೇ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. ಆಗ ನಿಧಿ ಸುಬ್ಬಯ್ಯ ನಾನು ಅವರನ್ನು ಫುಲ್ ಡೇ ಇಗ್ನೋರ್ ಮಾಡುತ್ತಿದ್ದೇನೆ ಎಂದಾಗ ನೀನು ಇಗ್ನೋರ್ ಮಾಡುತ್ತಿಲ್ಲ. ಬದಲಾಗಿ ನೀನು ಏನೇನೋ ಕಮೆಂಟ್ಸ್ ಮಾಡುತ್ತಿರುತ್ತೀಯಾ? ನೀನು ಕಮೆಂಟ್ ಪಾಸ್ ಮಾಡುವುದನ್ನು ನಿಲ್ಲಿಸು ಎಂದು ಶುಭಾ ಕಿಡಿಕಾರುತ್ತಾರೆ.
ಯಾವ ಕಮೆಂಟ್ ಪಾಸ್ ಮಾಡುತ್ತಿದ್ದೇನೆ ಎಂದು ನಿಧಿ ಪ್ರಶ್ನಿಸಿದಾಗ, ನೀನು ನನಗೆ ಅಡ್ವೈಸ್ ನೀಡುವುದನ್ನು ನಿಲ್ಲಿಸು. ನನಗೂ ನಾನು ಏನು ಮಾಡುತ್ತಿದ್ದೇನೆ ಗೊತ್ತಿದೆ. ದಯವಿಟ್ಟು ನನ್ನನ್ನು ಸ್ವಲ್ಪ ಬಿಟ್ಟು ಬಿಡು. ನನಗೂ ಏನು ಮಾತನಾಡುತ್ತಿದ್ದೇನೆ ಎಂಬ ಬುದ್ದಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್