Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಧರ್ಮದ ಹೆಸರಲ್ಲಿ ಭ್ರಷ್ಟಾಚಾರ, ಹಣ ಸಂಗ್ರಹಣೆಗೆ ಇವರಿಗೆ ಅಧಿಕಾರ ಕೊಟ್ಟವರು ಯಾರು? – ಕುಮಾರಸ್ವಾಮಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಧರ್ಮದ ಹೆಸರಲ್ಲಿ ಭ್ರಷ್ಟಾಚಾರ, ಹಣ ಸಂಗ್ರಹಣೆಗೆ ಇವರಿಗೆ ಅಧಿಕಾರ ಕೊಟ್ಟವರು ಯಾರು? – ಕುಮಾರಸ್ವಾಮಿ

Bengaluru City

ಧರ್ಮದ ಹೆಸರಲ್ಲಿ ಭ್ರಷ್ಟಾಚಾರ, ಹಣ ಸಂಗ್ರಹಣೆಗೆ ಇವರಿಗೆ ಅಧಿಕಾರ ಕೊಟ್ಟವರು ಯಾರು? – ಕುಮಾರಸ್ವಾಮಿ

Public TV
Last updated: February 17, 2021 2:57 pm
Public TV
Share
4 Min Read
hd kumaraswamy
SHARE

– ರಾಮನಿಗೆ ಅವಮಾನ ಮಾಡೋ ಪದ ನಾನು ಮಾತಾಡಿಲ್ಲ
– ಧರ್ಮದ ಹೆಸರಲ್ಲಿ ಹೀನಾಯವಾಗಿ ರಾಜಕೀಯ

ಬೆಂಗಳೂರು: ಧರ್ಮ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಯಾರೋ ಹಣ ಸಂಗ್ರಹಣೆ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಣೆ ಮಾಡಲು ಸಂಘಟನೆಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಎಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನ ಹೆಸರಲ್ಲಿ ಪಾರದರ್ಶಕತೆ ಇಲ್ಲದೆ ಹಣ ಲೂಟಿ ಮಾಡುತ್ತಿದ್ದಾರೆ. ರಾಮ ಮಂದಿರ ಕಟ್ಟುತ್ತೇನೆ ಅಂತ ಹಣ ದುರುಪಯೋಗ ಮಾಡ್ತಿದ್ದಾರೆ. ಇದಕ್ಕೆ ನನ್ನ ವಿರೋಧ ಇದೆ. ರಾಮನಿಗೆ ಅವಮಾನ ಮಾಡುವ ಪದ ನಾನು ಮಾತಾಡಿಲ್ಲ ಎಂದು ತನ್ನ ಹೇಳಿಕೆ ಸಂಬಂಧ ಎದ್ದಿರುವ ವಿವಾದಕ್ಕೆ ಸ್ಪಷ್ಟನೆ ನೀಡಿದರು.

RAMA MANDIRA

ರಾಮನ ಹೆಸರು ಹೇಳಿ ಅವಮಾನ ಮಾಡ್ತಿರೋರು ನೀವು, ರಾಮ ಮಂದಿರ ಕಟ್ಟಲು ನನ್ನ ವಿರೋಧ ಇಲ್ಲ. ನನ್ನ ಪಕ್ಷದ ಶಾಸಕರು ಹಣ ಕೊಟ್ಟಿದ್ದಾರೆ. ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಲು ನಾವು ಹಣ ಸಹಾಯ ಮಾಡಿದ್ದೇವೆ ಎಂದರು.

AYODHYA 1

3 ಜನ ಅಮಾಯಕರು ಬಂದಿದ್ದರು. ಒಂದು ಹೆಣ್ಣು ಮಗಳು ಬಂದಿದ್ದಳು. ಅವ್ರು ಹೇಳೋದನ್ನ ನಾನು ಲೈಟ್ ಆಗಿ ತೆಗೆದುಕೊಂಡೆ. ದೇಶದ ಪ್ರತೀಕ ಅಂತ ಹೇಳಿ ನನ್ನ ಮೈ ಮೇಲೆ ಬಿದ್ದಳು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಆನ್ ಲೈನ್ ನಲ್ಲಿ ಹಣ ಕೊಡಿ ಅಂತ ಹೇಳಬೇಕು. ಬೀದಿ ಬೀದಿಯಲ್ಲಿ ಯಾಕೆ ಹಣ ಸಂಗ್ರಹ ಮಾಡ್ತೀರಿ. ಆನ್ ಲೈನ್ ನಲ್ಲಿ ಹಣ ಕೊಡಿ ಅಂತ ಪ್ರಚಾರ ಮಾಡಿ. ನಾನು ಹಣ ಕೊಡುತ್ತೇನೆ. ಸಂಬಂಧ ಪಟ್ಟವರು, ಅಧಿಕೃತವಾಗಿ ಇರೋರು ಬಂದು ಕೇಳಲಿ. ಒಂದಲ್ಲ ಎರಡು ಸಾರಿ ಬೇಕಿದ್ರೆ ಕೊಡೋಣ ನನ್ನದು ತಾಯಿ ಹೃದಯ ಎಂದರು.

ಮೊನ್ನೆ ನಾನು ಕೆಲವರು ರಾಮನ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇದಕ್ಕೆ ಲೆಕ್ಕ ಕೊಡೋರು ಯಾರು? ಮಾರ್ಕ್ ಹಾಕಿದ್ದಾರೆ ಅಂತ ಹೇಳಿದ್ದೇನೆ. ಈ ಹೇಳಿಕೆಗೆ ಅನೇಕ ಸಂಘಟನೆ ಪ್ರತಿನಿಧಿಗಳು ಹೇಳಿಕೆ ಕೊಟ್ಟಿದ್ದಾರೆ. ಕೆಲ ಮಂತ್ರಿಗಳು, ಕೆಲ ಮಾಜಿ ವಿಧಾನ ಪರಿಷತ್ ಸದಸ್ಯರು ಮಾತಾಡಿದ್ದಾರೆ. ಪ್ರಚಾರ ಗಿಟ್ಟಿಸಲು ಇಂತಹ ಹೇಳಿಕೆ ಕೊಟ್ಟಿದ್ದಾರೆ. ದೇವೇಗೌಡ ಕುಟುಂಬಕ್ಕೆ ಯಾಕೆ ನಾಚಿಕೆ ಆಗಬೇಕು ಎಂದು ಹೇಳಿದ್ದಾರೆ. ರಾಮನ ಹೆಸರಲ್ಲಿ ರಾಜಕೀಯ ನಾವು ಮಾಡಿಲ್ಲ. ಧರ್ಮದ ಹೆಸರಲ್ಲಿ ಹೀನಾಯವಾಗಿ ರಾಜಕೀಯ ಮಾಡುತ್ತಿಲ್ಲ. ಧರ್ಮ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನಾವು ಇದನ್ನ ಮಾಡುತ್ತಿಲ್ಲ ಎಂದು ಹೇಳಿದರು.

kumaraswamy EPS121

ಕೆಲ ವರ್ಷಗಳ ಹಿಂದೆ ಒಂದು ಪಕ್ಷ ಹಣ ಸಂಗ್ರಹ ಮಾಡಿ, ಏರ್ ಟಿಕೆಟ್‍ಗೆ ಬಳಕೆ ಮಾಡಿದ್ದು ತಿಳಿದಿದೆ. ಮಾರ್ಕಿಂಗ್ ಯಾಕೆ ಮಾಡಬೇಕು. ಚಿಲ್ಲರೆ ರಾಜಕೀಯವನ್ನು ನಾವು ಮಾಡಿಕೊಂಡು ಬಂದಿಲ್ಲ. ಬೀದಿ ಬೀದಿಯಲ್ಲಿ ಹಣ ಸಂಗ್ರಹ ಮಾಡೋದು ಸರಿಯಲ್ಲ. ಹಿಂದೂ ಸಂಘಟನೆಗಳಿಗೆ ಹಣ ಸಂಘಟನೆ ಮಾಡಲು ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ನಾವು ಸ್ಟಿಕರ್ ಅಂಟಿಸೋದಾಗಿ ಅವರೇ ಹೇಳಿದ್ದಾರೆ. ಮನೆ ಮೇಲೆ ಯಾಕೆ ಸ್ಟಿಕರ್ ಹಾಕುತ್ತಿದ್ದೀರಿ. ಮೊಳೆ ಹೊಡೆಯೋ ಕೆಲಸ ಮಾಡ್ತಿರೋರು ದೇಶ ರಕ್ಷಣೆ ಮಾಡ್ತೀನಿ ಅಂತ ಹೊರಟವರು ನೀವು. ನಾವು ಮೊಳೆ ಹೊಡೆಯೋ ಕೆಲಸ ಮಾಡುತ್ತಿಲ್ಲ. ನಾನು ಬಿಜೆಪಿ, ಸರ್ಕಾರ, ಅಂಗ ಸಂಸ್ಥೆಗಳು ಬಗ್ಗೆ ಮಾತಾಡಿಲ್ಲ. ಕೆಲ ವ್ಯಕ್ತಿಗಳು ಅಂತ ನಾನು ಹೇಳಿದ್ದೇನೆ. ಪಾರದರ್ಶಕತೆಯಿಂದ ಹಣ ಸಂಗ್ರಹ ಮಾಡಿ ಅಂತ ಹೇಳಿದ್ದೇನೆ ಎಂದರು.

RAMA MANDIRA

ಜನರ ಧ್ವನಿಯಾಗಿ ದೇವೇಗೌಡ ಕುಟುಂಬ ರಾಜಕೀಯ ಮಾಡಿದೆ. ಅಭಿಮಾನಿದಿಂದ ಬದುಕಿದವರು ನಾವು. ಡಿಸಿಎಂ ಅಶ್ವಥ್ ನಾರಾಯಣ ಕೋಟ್ಯಂತರ ಹಣ ಮಲ್ಲೇಶ್ವರಂನಲ್ಲಿ ಲೂಟಿ ಮಾಡಿದ್ದಾರೆ. ಇವರೆಲ್ಲ ಹೇಗೆ ಬಂದ್ರು ಅಂತ ಗೊತ್ತು. ಮಲ್ಲೇಶ್ವರಂ ನಲ್ಲಿ ಕೆಲಸ ಕೊಡಿಸುವ ಹೆಸರಲ್ಲಿ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹಾಸನದಲ್ಲಿ ಯಾರೋ ಮಾತಾಡಿದ್ದಾರೆ. ಬೆಂಕಿ ಹಚ್ಚಿದ ಮನೆಗೆ ಮನೆ ಕಟ್ಟಿಕೊಟ್ಟವರು ನಾವು. ಬೆಂಕಿ ಆರಿಸೋ ಸಂಸ್ಕೃತಿ ಇರೋರಾಗಿದ್ದೇವೆ. ಯಾವ ಸಂಘದ ಬಗ್ಗೆ ನಾನು ಮಾತಾಡಿಲ್ಲ. ನಾಜಿ ಸಂಸ್ಕೃತಿ ಬಗ್ಗೆ ನಾನು ಹೇಳಿದೆ. ಆರ್‍ಎಸ್‍ಎಸ್ ಬಗ್ಗೆ ಇತಿಹಾಸಕಾರರು ಹೇಳಿದ್ದನ್ನು ನಾನು ಹೇಳಿದ್ದೇನೆ. ಇವರೇನು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಪೆಟ್ರೋಲ್, ಗ್ಯಾಸ್, ಡಿಸೇಲ್ ಹೆಚ್ಚಳ ಮಾಡೋದು ಬಿಜೆಪಿ ಕೊಡುಗೆ. ಉಜ್ವಲ ಉಜ್ವಲ ಅಂದ್ರಿ ಈಗ ಗ್ಯಾಸ್ ರೇಟ್ ಏನಾಗಿದೆ? ಇದೇ ನಿಮ್ಮ ಕೊಡುಗೆಯಾಗಿದೆ. ಮಾಹಿತಿ ಇಲ್ಲದೆ ನಾನು ಮಾತಾಡಿಲ್ಲ. ಬಂದ ಮಾಹಿತಿ ನಾನು ಇಟ್ಟಿದ್ದೇನೆ. ಇದೇ ದೊಡ್ಡ ಅಪರಾಧನಾ? ನಮ್ಮ ಬಗ್ಗೆ ಟೀಕೆ ಮಾಡೋವಾಗ ಎಚ್ಚರವಾಗಿರಿ ಎಂದು ವಿರೋದ ಪಕ್ಷದವರನ್ನು ಎಚ್ಚರಿಸಿದ್ದಾರೆ

ನನ್ನ ಹೇಳಕೆ ಬಗ್ಗೆ ಎಲ್ಲಿ ಬೇಕಾದ್ರು ಚರ್ಚೆ ಮಾಡಲು ನಾನು ಸಿದ್ದವಾಗಿದ್ದೇನೆ. ಚುನಾವಣೆ ಗಿಮಿಕ್ ಇದು ಅಲ್ಲ. ಭಾವನಾತ್ಮಕ ವಿಷಯ ಇಟ್ಟು ಪಕ್ಷ ಸಂಘಟನೆ ನಾವು ಮಾಡಿಲ್ಲ, ಮಾಡೋದು ಇಲ್ಲ. ವಿಷಯಾಧಾರಿತ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಯಾರನ್ನು ಅವಹೇಳನ ಮಾಡಲು ನಾನು ಅಂದು ಮಾತಾಡಿಲ್ಲ. ಪಾರದರ್ಶಕ ಕೊರತೆ ಇದೆ ಎಂದು ಹೇಳಿದ್ದಾರೆ.

ಅನಧಿಕೃತವಾಗಿ ಹಣ ಸಂಗ್ರಹ ಮಾಡ್ತಿದ್ದಾರೆ. ಯಾರ್ ಯಾರೋ ರಸೀದಿ ಇಲ್ಲದೆ ಹಣ ಪಡೆಯುತ್ತಿದ್ದಾರೆ. ಅನೇಕ ಜನ ನನ್ನ ಬಳಿ ಅನಧಿಕೃತವಾಗಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಈ ಕಾರಣಕ್ಕೆ ನಾನು ಮಾತನಾಡಿದ್ದೇನೆ ಎಂದರು.

TAGGED:bjpcongressCorruptKumaraswamyPublic TVRam MandirReligiousಕಾಂಗ್ರೆಸ್ಕುಮಾರಸ್ವಾಮಿಧಾರ್ಮಿಕಪಬ್ಲಿಕ್ ಟವಿಬಿಜೆಪಿಭ್ರಷ್ಟಾಚಾರರಾಮಮಂದಿರ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Donald Trump 2
Latest

ಇರಾನ್‌ ಬೋಟ್‌ಗಳನ್ನು ನೋಡಿದ ಕೂಡಲೇ ಗುಂಡು ಹಾರಿಸಿ ಹೊಡೆದು ಹಾಕಿ: ಟ್ರಂಪ್‌ ಆದೇಶ

Public TV
By Public TV
11 minutes ago
BS YEDIYURAPPA
Bengaluru City

ಐದು ದಶಕಗಳ ಬಿಎಸ್‌ವೈ ರಾಜಕೀಯ ಪಯಣ – 26 ರಂದು ಅಭಿಮಾನೋತ್ಸವದ ಭೂಮಿಪೂಜೆ

Public TV
By Public TV
18 minutes ago
Education Dept fails Karwar blind student by showing her absence even though she attended the exam
Districts

ಪರೀಕ್ಷೆಗೆ ಹಾಜರಾಗಿದ್ರೂ ಗೈರು – ಅಂಧ ವಿದ್ಯಾರ್ಥಿನಿ ಫೇಲ್‌

Public TV
By Public TV
39 minutes ago
Chikkaballapura Dubai Adoption 1
Chikkaballapur

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ದತ್ತು ಪಡೆದ ದುಬೈ ದಂಪತಿ

Public TV
By Public TV
45 minutes ago
g.parameshwara 2
Bengaluru City

ಕಾಂಗ್ರೆಸ್‌ಗೆ ಮುಸ್ಲಿಮರ ತಲಾಖ್‌ ಎಚ್ಚರಿಕೆ – ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ ಎಂದ ಪರಮೇಶ್ವರ್‌

Public TV
By Public TV
46 minutes ago
Jayanagar Blackmail 2
Bengaluru City

ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ – ಲೇಡಿ ಇನ್ಫ್ಲುಯೆನ್ಸರ್‌ ವಿರುದ್ಧ FIR

Public TV
By Public TV
54 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?