ತುಮಕೂರು: ಚಿರು ನನಗೆ ಬಹಳ ಬೇಕಾದ, ಪ್ರಿಯವಾದ ಹುಡುಗ. ನಾನು ಅವನನ್ನು ತಮ್ಮನ ರೀತಿ ನೋಡಿಕೊಳ್ಳುತ್ತಿದ್ದೆ. ಅವನು ಕೂಡ ತಮ್ಮನ ರೀತಿಯೇ ಇದ್ದನು. ಈಗ ಅವನ ಬಗ್ಗೆ ಮಾತನಾಡುವುದು ಬೇಡ ಎಂದು ಸುದೀಪ್ ಹೇಳಿದರು. ಇದನ್ನೂ ಓದಿ: ನನಗೆ ರೈಸ್, ದಾಲ್ ಗೊತ್ತು ಹೊರತು ಬೇರೇನೂ ಗೊತ್ತಿಲ್ಲ: ಸುದೀಪ್
ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಚಿರು ನನಗೆ ಬಹಳ ಬೇಕಾದ, ಪ್ರಿಯವಾದ ಹುಡುಗ. ನಾನು ಅವನನ್ನು ತಮ್ಮನ ರೀತಿ ನೋಡಿಕೊಳ್ಳುತ್ತಿದ್ದೆ. ಅವನು ಕೂಡ ತಮ್ಮನ ರೀತಿಯೇ ಇದ್ದನು. ಈಗ ಅವನ ಬಗ್ಗೆ ಮಾತನಾಡುವುದು ಬೇಡ. ಹೋದವರ ಬಗ್ಗೆ ಮತ್ತೆ ಕೆದಕಿ ಕೆದಕಿ ಮಾತನಾಡುವುದು ಬೇಡ ಎಂದರು.
- Advertisement 2
- Advertisement 3
ಅಷ್ಟೇ ಅಲ್ಲದೇ ಅವರಿಗೂ ಒಂದು ಕುಟುಂಬದ ಇದೆ. ಸುಂದರವಾದ ತಮ್ಮ ಇದ್ದಾನೆ. ಅಣ್ಣನ ಅಗಲಿಕೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೆಂಡತಿ ಇದ್ದಾರೆ, ಹೀಗಾಗಿ ಅವನ ಬಗ್ಗೆ ಮಾತನಾಡುವುದು ಬೇಡ ಎಂದರು. ಬೇರೆಯವರಿಗೆ ಸಲಹೆ ಕೊಡಲು ನಾವು ಯಾರು? ಜೀವನದಲ್ಲಿ ಯಾರಿಗೂ ಸಲಹೆ ಕೊಡಬಾರದು. ಯಾಕೆಂದರೆ ಕಲಿಯೋರು ಕಲಿಯುತ್ತಾರೆ ಎಂದು ಸುದೀಪ್ ಹೇಳಿದರು.
- Advertisement 4
ನಾನು ಒಂದು ಹೆಜ್ಜೆ ಇಟ್ಟರೆ, ನನ್ನ ಹಿಂದೆ ಇರುವವರು, ಸಂಘದವರು 10 ಹೆಜ್ಜೆ ಮುಂದೆ ಇಡುತ್ತಾರೆ. ಹೀಗಾಗಿ ನಾನೇ ಹಿಂದೆ ಉಳಿದಿದ್ದೇನೆ. ನಾನು ಹುಟ್ಟುಹಬ್ಬ ಆಚರಿಸುವುದನ್ನು ನಿಲ್ಲಿಸಿ ತುಂಬಾ ವರ್ಷಗಳಾಗಿವೆ. ನನ್ನ ಸ್ನೇಹಿತರೆ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ವರ್ಷ ನಮ್ಮ ಪೋಷಕರೊಂದಿಗೆ ಸಮಯ ಕಳೆದಿದ್ದೇನೆ. ಇದರಿಂದ ನನಗೆ ಖುಷಿಯಾಗಿದೆ. ಜೊತೆಗೆ ಯಾರನ್ನೂ ಭೇಟಿ ಆಗದಿರುವುದಕ್ಕೆ ನೋವಿದೆ ಎಂದು ಹುಟ್ಟುಹಬ್ಬದ ಬಗ್ಗೆ ಮಾತನಾಡಿದರು.
ಇಂದ್ರಜಿತ್ ಅವರ ಇಡೀ ಲೈಫ್ ನಾನಿಲ್ಲದೆ ಸಾಗಿದೆ. ಅವರು ನನಗಾಗಿ ಇಲ್ಲ, ನಾನೂ ಅವರಿಗಾಗಿ ಇಲ್ಲ. ಆದರೆ ಅದಕ್ಕೆಲ್ಲಾ ಇಂದ್ರಜಿತ್ ಹೆದರಲ್ಲ. ಅವರು ನನಗೆ ತುಂಬಾ ವರ್ಷಗಳಿಂದ ಗೊತ್ತು. ಆದರೆ ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ನನಗಿಲ್ಲ ಎಂದು ಇಂದ್ರಜಿತ್ಗೆ ಬೆದರಿಕೆ ಕರೆ ವಿಚಾರದ ಹಿನ್ನೆಲೆ ಅವರಿಗೆ ಬೆಂಬಲಕ್ಕೆ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಸುದೀಪ್ ಉತ್ತರಿಸಿದರು.