ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ಟ್ರೈಲ್ ನಲ್ಲೇ ಭಾಷಣ ಮಾಡಿದ ಟಾಂಗ್ ಕೊಟ್ಟಿದ್ದು, ಜಮೀರ್ ಅವರ ಭಾಷಣ ಕೇಳಿದ ಸಭಿಕರು ಬಿದ್ದು ಬಿದ್ದು ನಕ್ಕಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ದೇಶ ಅಭಿವೃದ್ಧಿ ಆಗಿಲ್ಲ. ಆದ್ರು ಅವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.
ಥೇಟ್ ಮೋದಿ ಅವರಂತೆಯೇ ಎರಡು ಕೈಗಳನ್ನು ಅಗಲಿಸಿ ಮಾತನಾಡಿದ ಸಚಿವರು, ‘ಮನ್ ಕಿ ಬಾತ್’ ಮಾಡುವುದರಿಂದ ಏನು ಅಭಿವೃದ್ಧಿ ಆಗಿಲ್ಲ. ನಮಗೇ ಮನ್ ಕಿ ಬಾತ್ ಕಾರ್ಯಕ್ರಮ ಬೇಡ, ಕಮ್ ಕಿ ಬಾತ್ ಕಾರ್ಯಕ್ರಮ ಬೇಕು. ಜನರಿಗೆ ಚುನಾವಣೆಗೂ ಮುನ್ನ ನೀಡಿದ ಭರವಸೆಗಳು ಈಡೇರಿಲ್ಲ. ಸಬ್ ಕ ಸಾಥ್ ಸಬ್ ಕ ವಿಕಾಸ್ ಎನ್ನುತ್ತೀರಿ, ಆದರೆ ಯಾರ ಅಭಿವೃದ್ಧಿ ಆಗಿದೆ ಎಂದು ಪ್ರಶ್ನೆ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv