ಬೆಂಗಳೂರು: ರಸ್ತೆ ಗುಂಡಿಗಳಿಂದಾಗಿ ಸವಾರರು ಬಲಿಯಾಗುತ್ತಿರುವ ಹಿನ್ನೆಲೆಯಿಂದ ಬೇಸತ್ತ ಯುವಕರ ತಂಡವೊಂದು ಮಹಾನ್ ಕೆಲಸವನ್ನು ಮಾಡುವ ಮೂಲಕ ಬಿಬಿಎಂಪಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಮಾತೃಭೂಮಿ ಯುವಕರ ತಂಡ ಈ ಮಹಾನ್ ಕಾರ್ಯಕ್ಕೆ ಕೈ ಹಾಕಿದೆ. ರಸ್ತೆ ಗುಂಡಿಯನ್ನು ಮುಚ್ಚದ ಬಿಬಿಎಂಪಿಯಿಂದಾಗಿ ಬೇಸತ್ತ ಈ ತಂಡ, ತಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ. ಅಲ್ಲದೇ ತಮ್ಮ ಸ್ವಂತ ಖರ್ಚಿನಲ್ಲೇ ಗುಂಡಿಗಳನ್ನು ಮುಚ್ಚುತ್ತಿರುವುದು ವಿಶೇಷವಾಗಿದೆ.
ಬೆಂಗಳೂರಿನ ಯಾವ ಏರಿಯಾದಲ್ಲಿ ಗುಂಡಿ ಇದ್ದರೂ ಇವರಿಗೆ ಲೊಕೇಶನ್ ಕಳುಹಿಸಿದ್ರೆ ಸಾಕು. ತಾವೇ ಬಂದು ಗುಂಡಿಯನ್ನು ಮುಚ್ಚಿ ಹೋಗುತ್ತಾರೆ. ಮಾತೃಭೂಮಿ ತಂಡ ಮೂರು ದಿನಕೊಮ್ಮೆ ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಬಿಬಿಎಂಪಿ ಮಾಡುವ ಕೆಲಸವನ್ನು ಇವರೇ ಮಾಡಿ ಸವಾಲ್ ಹಾಕುತ್ತಿದ್ದಾರೆ.
ರಸ್ತೆ ಗುಂಡಿ ಅಪಘಾತದಲ್ಲಿ ಮಾತೃಭೂಮಿ ತಂಡ ತಮ್ಮ ಸ್ನೇಹಿತನನ್ನು ಕಳೆದುಕೊಂಡಿತ್ತು. ಹಾಗಾಗಿ ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ತಾವೇ ಗುಂಡಿಗಳನ್ನು ಮುಚ್ಚಲು ಮುಂದಾಗಿರುವುದಾಗಿ ತಂಡದ ಯುವಕರು ಹೇಳುತ್ತಿದ್ದಾರೆ.
https://www.youtube.com/watch?v=NzvZAOJuXfU