ಬೆಂಗಳೂರು: ಊರಹಬ್ಬದ ವೇಳೆ ಬಣ್ಣದ ನೀರು ಎರಚಿದ್ದಕ್ಕೆ ಹಳೆ ದ್ವೇಷವನ್ನು ಮುಂದಿಟ್ಟುಕೊಂಡು ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಕಾಟನ್ಪೇಟೆಯಲ್ಲಿ ನಡೆದಿದೆ.
ಗೋವಿಂದ್ರಾಜು ಮೃತ ದುರ್ದೈವಿ. ಊರಹಬ್ಬದಲ್ಲಿ ಗೋವಿಂದರಾಜು ಹಾಗೂ ಶಂಕರ್ ಬಣ್ಣದ ನೀರು ಎರಚಾಡಿದ್ದಾರೆ. ನೀರು ಎರಚಿದ್ದನ್ನೆ ಮುಂದಿಟ್ಟುಕೊಂಡು ಆರೋಪಿ ಶಂಕರ್ ತನ್ನ ಬಳಿಯಿದ್ದ ಚಾಕುವಿನಿಂದ ಗೋವಿಂದ್ ರಾಜುನನ್ನು ಬರ್ಬರವಾಗಿ ಹತ್ಯಗೈದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಂಕರ್ನನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆ- 10 ವರ್ಷದ ಹಿಂದಿನ ಜಗಳ ಅಂತ್ಯ