ನವದೆಹಲಿ: ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ (Chhattisgarh CM) ವಿಷ್ಣು ದೇವ್ ಸಾಯಿ (Vishnu Deo Sai) ಅವರನ್ನು ಬಿಜೆಪಿ ಕೇಂದ್ರ ನಾಯಕತ್ವವು ಭಾನುವಾರ ಅಧಿಕೃತವಾಗಿ ಆಯ್ಕೆ ಮಾಡಿದೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ರಾಯ್ಪುರದಲ್ಲಿ ಬಿಜೆಪಿಯ (BJP) ಹೊಸದಾಗಿ ಚುನಾಯಿತರಾದ 54 ಶಾಸಕರ ಪ್ರಮುಖ ಸಭೆಯ ನಂತರ ವಿಷ್ಣು ದೇವ್ ಸಾಯಿಯನ್ನು ಛತ್ತೀಸ್ಗಢ ಮುಖ್ಯಮಂತ್ರಿಯಾಗಿ ಘೋಷಿಸಲಾಯಿತು.
ಛತ್ತೀಸ್ಗಢ ಸಿಎಂ ಆಗಿ ಆಯ್ಕೆಯಾದ ಬಳಿಕ ವಿಷ್ಣು ದೇವ್ ಅವರು ‘ಮೋದಿ ಕಿ ಗ್ಯಾರಂಟಿ’ ಅಡಿಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದಾರೆ. ವಸತಿ ಯೋಜನೆಯ ಫಲಾನುಭವಿಗಳಿಗೆ 18 ಲಕ್ಷ ಮನೆಗಳನ್ನು ಮಂಜೂರು ಮಾಡುವುದು ಛತ್ತೀಸ್ಗಢ ಸರ್ಕಾರದ ಮೊದಲ ಆದೇಶವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಬುಡಕಟ್ಟು ಜನಾಂಗದ ನಾಯಕ, ಕೇಂದ್ರದ ಮಾಜಿ ಮಂತ್ರಿಗೆ ಛತ್ತೀಸ್ಗಢ ಸಿಎಂ ಪಟ್ಟ
ಬಿಷ್ಣು ದೇವ್ ಸಾಯಿ ಯಾರು?:
2023 ರ ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ವಿಷ್ಣು ದೇವ ಸಾಯಿ ಕುಂಕೂರಿಯಿಂದ ಗೆದ್ದಿದ್ದಾರೆ. ಸಾಯಿ ಅವರು 2020 ರಿಂದ 2022 ರವರೆಗೆ ಭಾರತೀಯ ಜನತಾ ಪಕ್ಷದ (BJP) ಛತ್ತೀಸ್ಗಢ ರಾಜ್ಯ ಅಧ್ಯಕ್ಷರಾಗಿದ್ದರು. ಅವರು ಮೊದಲ ನರೇಂದ್ರ ಮೋದಿ ಕ್ಯಾಬಿನೆಟ್ನಲ್ಲಿ ಉಕ್ಕು, ಗಣಿ, ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ (MoS) ಸಚಿವರಾಗಿದ್ದರು. ವಿಷ್ಣು ದೇವು 1999, 2004, 2009 ಮತ್ತು 2014 ರಲ್ಲಿ ರಾಯಗಢ ಕ್ಷೇತ್ರದಿಂದ ಸತತ 4 ಲೋಕಸಭಾ ಚುನಾವಣೆಗಳನ್ನು ಗೆದ್ದರು. ಈ ಚುನಾವಣೆಯಲ್ಲಿ ಸಾಯಿ ಅವರು ಕಾಂಗ್ರೆಸ್ ಅಭ್ಯರ್ಥಿಗಳಾದ ಪುಷ್ಪಾ ದೇವಿ ಸಿಂಗ್, ರಾಮ್ಪುಕರ್ ಸಿಂಗ್, ಹೃದಯರಾಮ್ ರಾಥಿಯಾ ಮತ್ತು ಆರ್ತಿ ಸಿಂಗ್ ಅವರನ್ನು ಸೋಲಿಸಿದರು.
ಸಾಯಿ 1990 ಮತ್ತು 1993 ರಲ್ಲಿ ಅವಿಭಜಿತ ಮಧ್ಯಪ್ರದೇಶದ ತಪ್ಕರಾ ಕ್ಷೇತ್ರದಿಂದ ಸತತ ಎರಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. 2023ರ ಛತ್ತೀಸ್ಗಢ ವಿಧಾನಸಭೆ ಚುನಾವಣೆಯಲ್ಲಿ ವಿಷ್ಣು ದೇವು ಈ ಬಾರಿ ಕಾಂಗ್ರೆಸ್ನ ಹಾಲಿ ಶಾಸಕ ಯುಡಿ ಮಿಂಜ್ ಅವರನ್ನು ಸೋಲಿಸಿದ್ದಾರೆ. ಇದನ್ನೂ ಓದಿ: ಮದ್ಯಸೇವಿಸಿ ಕಾರ್ಯಕ್ರಮಕ್ಕೆ ಹೋಗ್ತಾರೆ, ನಮ್ಮನ್ನು ನಿರ್ಲಕ್ಷಿಸಿದ್ದಾರೆ – ಪಂಜಾಬ್ ಸಿಎಂ ವಿರುದ್ಧ ಪುತ್ರಿ ಕೆಂಡ