-ಮಹಾಲಯ ಅಮಾವಾಸ್ಯೆ ಮುನ್ನ ಹೋಮ ಹವನ
-ಚುಂಚಶ್ರೀಗಳ ಭಕ್ತಿ ಗಾಯನ ಕೇಳಿ ಮಂತ್ರ ಮುಗ್ದರಾದ ಭಕ್ತರು
ಚಿಕ್ಕಬಳ್ಳಾಪುರ: ಮಹಾಲಯ ಅಮಾವಾಸ್ಯೆ ಹಿಂದಿನ ದಿನವಾದ ಇಂದು ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನದಿನ್ನೆ ಬಳಿಯ ಶ್ರೀ ವೀರಾಂಜನೇಯ ಸ್ವಾಮಿಗೆ ಆದಿಚುಂಚನಗಿರಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.
ವೀರಾಂಜನೇಯ ಸ್ವಾಮಿಗೆ ಜಲಾಭಿಷೇಕ, ಹಾಲು, ಮೊಸರು, ತುಪ್ಪ, ಪಂಚಾಮೃತ ಅಭಿಷೇಕ ನೇರವೇರಿಸಿದ ಶ್ರೀಗಳು ಮಹಾಮಂಗಳಾರಾತಿ ಮಾಡಿದರು. ತದನಂದರ ದೇವಾಲಯದ ಆವರಣದಲ್ಲಿ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ, ಪವಮಾನ ಹೋಮ. ಹನುಮಂತ ಹೋಮ, ಶೋಡೋಪಚಾರ ಹೋಮ, ಪೂರ್ಣಾಹುತಿ ಹೋಮ ನಡೆಸಲಾಯಿತು. ಇದನ್ನೂ ಓದಿ: ಉದಯಪುರಕ್ಕೆ ಸಾರಾ ಅಲಿಖಾನ್ ಭೇಟಿ – ಪ್ರಕೃತಿ ಮಧ್ಯೆ ಫೋಟೋ ಕ್ಲಿಕ್ಕಿಸಿಕೊಂಡ ಸೈಫ್ ಪುತ್ರಿ
ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದು, ಹೋಮ ಹವನದ ನಂತರ ಚುಂಚಶ್ರೀಗಳು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಗೂ ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ ಎಂಬ ಭಕ್ತಿಪೂರ್ವಕ ಗಾಯನ ಹಾಡಿ, ನೂರಾರು ಭಕ್ತರನ್ನು ಮಂತ್ರ ಮುಗ್ದಗೊಳಿಸಿದರು. ಶ್ರೀಗಳ ಗಾಯನದಿಂದ ಭಕ್ತಿ ಪರವಶರಾದ ಭಕ್ತರು ವೀಳ್ಯದೆಲೆಯಲ್ಲಿ ಅಂಲಕೃತಗೊಂಡಿದ್ದ ಶ್ರೀ ವೀರಾಂಜನೇಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಇದನ್ನೂ ಓದಿ: ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ