ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲಿ ಸಾವಿರಕ್ಕಿಂತ ಹೆಚ್ಚು ದೇವಸ್ಥಾನ ಇದೆ. ಹೆಚ್ಚು ಪ್ರಸಿದ್ಧಿಗೆ ಬಾರದ ಗುಹೆಯೊಳಗಿನ ಕಲ್ಲು ಗಣಪತಿ ದೇವಸ್ಥಾನವು ಒಂದು. ಶಿರಿಯಾರ ಗ್ರಾಮದ ಪಡುಮುನಾಡುಗೆ ಹೋದರೆ ಈ ಸುಂದರ ದೇವಾಲಯವು ಬಂಡೆಕಲ್ಲಿನ ಮೇಲೆ ಸ್ಥಾಪಿತವಾಗಿದೆ.
ಬಲಗಡೆಯ ಕೆರೆಯನ್ನು ಸೂರ್ಯ ಪುಷ್ಕರಣಿ ಎನ್ನಲಾಗುತ್ತದೆ ಎಡಗಡೆಯ ಕೆರೆಯನ್ನು ಚಂದ್ರ ಪುಷ್ಕರಣಿ ಎನ್ನಲಾಗುತ್ತದೆ. ಇಲ್ಲಿನ ಗಣೇಶನು 4 ಕೈಯನ್ನು ಹೊಂದಿದ್ದಾನೆ ಎರಡು ಕೈ ವರದಾ ಹಸ್ತ ಇಚ್ಛೆಯನ್ನು ಸೂಚಿಸಿದರೆ, ಇನ್ನೆರಡು ಕೈಗಳು ಮೋಕ್ಷವನ್ನು ಸೂಚಿಸುತ್ತದೆ. ಇಲ್ಲಿ ತುಲಾಭಾರದ ಮೂಲಕ ಗಣೇಶನನ್ನು ಪ್ರಾರ್ಥಿಸಲಾಗುತ್ತದೆ. ಇದನ್ನೂ ಓದಿ: 5,000 ಬೆಂಕಿ ಕಡ್ಡಿ ಬಳಸಿ ಗಣಪತಿ ಮೂರ್ತಿ ರಚಿಸಿದ ಕಲಾವಿದ
ಗಣೇಶ ಚತುರ್ಥೀ ಸಂದರ್ಭದಲ್ಲಿ ದೂರದೂರದ ಊರುಗಳಿಂದ ಭಕ್ತರು ಗಣೇಶನ ದರ್ಶನಕ್ಕೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಕಲ್ಲು ಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ವೈಭವ. ಮಳೆನೀರ ಅಭಿಷೇಕದ ಜೊತೆ ಇಲ್ಲಿ ದೇವರ ದರ್ಶನ ನಿಜಕ್ಕೂ ರೋಮಾಂಚಕವಾಗಿದೆ.