ದಾವಣಗೆರೆ: ನಾವು ಕೈಗೆ ಬಳೆ ಹಾಕಿಕೊಂಡಿಲ್ಲ. ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ, ಯಾರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ ನಾವು ಕೂಡ ಅಂತಹವರನ್ನು ಕತ್ತು ಸೀಳಿ ಪ್ರತ್ಯೋತ್ತರ ಕೊಟ್ಟಗ ಮಾತ್ರ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ಹಯ್ಯ ಲಾಲ್ ಹತ್ಯೆ ಮಾಡಿದರನ್ನು ಗುಂಡಿಟ್ಟು ಕೊಳ್ಳಬೇಕು. ಆಗ ಮಾತ್ರ ಕನ್ಹಯ್ಯ ಲಾಲ್ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆತನನ್ನು ಹೇಗೆ ಕೊಲೆ ಮಾಡಿದ್ರೋ ಹಾಗೇ ಅವರನ್ನು ಕೊಲ್ಲಬೇಕು. ಆಗ ಮಾತ್ರ ಮುಯ್ಯಿಗೆ ಮುಯ್ಯಿ ಆಗುತ್ತದೆ. ಹಿಂದೂಗಳ ಹತ್ಯೆ ಮಾಡಿದವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲಿ ಮಕ್ಕಳಿಗೆ ರುಂಡ ಕತ್ತರಿಸುವ ಕಾನೂನನ್ನೇ ಬೋಧಿಸಲಾಗುತ್ತಿದೆ – ಆರಿಫ್ ಖಾನ್ ಕಿಡಿ
ಇದೇನು ಪಾಕಿಸ್ತಾನ ಅಂದುಕೊಂಡಿದ್ದಾರಾ? ನಮ್ಮ ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ನೀಡುತ್ತಾರೆ. ಆದ್ರೆ ಕೆಲ ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಇಟ್ಟಿದ್ದಾರೆ. ಮದರಸಾಗಳಲ್ಲಿ ಏನು ಬೋಧನೆ ಮಾಡುತ್ತಿದ್ದಾರೆ. ಭಾರತ ಮಾತೆ ಬಗ್ಗೆ ಮದರಸಗಳಲ್ಲಿ ಹೇಳಲ್ಲ. ಇಲ್ಲಿ ನಮಗೆ ಸಹನೆ ಅತಿಯಾಗಿ ಬೇಡ. ಸೇಡಿಗೆ ಸೇಡು ಎಂದು ನಾವು ನಿರ್ಧಾರ ಮಾಡಬೇಕು. ಕನ್ನಯ್ಯ ಲಾಲ್ ಅಪ್ಪಟ ಹಿಂದೂವಾದಿ. ಆತ ಪೋಸ್ಟ್ ಶೇರ್ ಮಾಡಿದ್ದಕ್ಕೆ ಕತ್ತು ಸೀಳಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಮ್ಕಿ ಹಾಕಿದ್ದಾರೆ. ಮೋದಿಗೆ ಧಮ್ಕಿ ಹಾಕ್ತಾರೆ ಎಂದರೆ ಈ ನನ್ ಮಕ್ಳಿಗೆ ತಾಖತ್ ಎಷ್ಟು ಇರಬೇಕು ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಈ ಘಟನೆಗೆ ನೇರ ಹೊಣೆ. ಜೀವ ಬೆದರಿಕೆ ಎಂದು ಹೇಳಿ ಮನವಿ ಮಾಡಿದರೂ ಗಮನ ಹರಿಸಲಿಲ್ಲ. ಈ ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರಾ ಕಾರಣ. ಅ ಸರ್ಕಾರವನ್ನು ವಜಾ ಮಾಡಬೇಕು, ರಾಷ್ಟ್ರಪತಿ ಅಡಳಿತ ತರಬೇಕು ಅಲ್ಲಿರುವ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಬೆಂಬಲಿಸುತ್ತಿದ್ದಾರೆ. ಇದನ್ನೂ ಓದಿ: ಉದಯಪುರ ಟೈಲರ್ ಹತ್ಯೆ ಖಂಡಿಸಿ ರಾಜ್ಯದಲ್ಲಿ ಶುರುವಾಯ್ತು ನನ್ನ ಕತ್ತು ಸೀಳಬೇಡಿ ಅಭಿಯಾನ
ಎಲ್ಲಾ ಮುಸ್ಲಿಮರು ದೇಶದ್ರೋಹಿಗಳು ಅಲ್ಲ. ಅಲ್ಪಸಂಖ್ಯಾತ ಧರ್ಮಗುರುಗಳು ಇಂತಹ ಘಟನೆಯನ್ನು ಖಂಡಿಸಬೇಕು. ಆದರೆ ಅದನ್ನು ಖಂಡಿಸುತ್ತಿಲ್ಲ. ಅದೇ ಒಬ್ಬ ಧಾರ್ಮಿಕ ಗುರು ಪ್ರಚೋದನೆಯಿಂದ ಹುಬ್ಬಳ್ಳಿಯಲ್ಲಿ ಗಲಭೆ ಆಯ್ತು. ಮದರಸಗಳಲ್ಲಿ ರಾಷ್ಟ್ರದ್ರೋಹದ ಮಾತುಗಳನ್ನಾಡುತ್ತಾರೆ. ಸಿದ್ದರಾಮಯ್ಯನವರ ಹೆಸರಿನಲ್ಲಿ ಸಿದ್ದರಾಮ ಇದೆ. ಯಾಕೇ ಈ ಪ್ರಕರಣವನ್ನು ಸಿದ್ದರಾಮಯ್ಯ ಖಂಡಿಸಲಿಲ್ಲ. ಕೇವಲ ಸಂತಾಪ ಸೂಚಿಸಿದರೆ ಸಾಕಾ. ಕಾಂಗ್ರೆಸ್ನವರು ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಅವರನ್ನು ಬೆಂಬಲಿಸುತ್ತಿದ್ದಾರೆ. ನನಗೂ ಕೊಲೆ ಬೆದರಿಕೆ ಬಂತು ನಾನು ಹೆದರಿದ್ನಾ, ನಾನು ಹೇಡಿ ಅಲ್ಲ. ಯಾರು ಹಿಂದೂಗಳ ಕತ್ತು ಸೀಳುತ್ತಾರೋ ಅವರಿಗೆ ನಾವು ಅದೇ ರೀತಿ ಪ್ರತ್ಯುತ್ತರ ಕೊಟ್ಟಾಗ ಮಾತ್ರ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದಿದ್ದಾರೆ.