ವಿಜಯಪುರ: ಸಿದ್ದೇಶ್ವರ ಶ್ರೀಗಳು (Siddheshwar shree) ಅಗಲಿ 8 ದಿನ ಕಳೆದಿದೆ. ಶ್ರೀಗಳ ಅಸ್ಥಿ ವಿಸರ್ಜನೆ (Asthi Visarjan) ಕಾರ್ಯಕ್ರಮ ಇಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ (Kudalasangama) ನದಿಯಲ್ಲಿ ಮತ್ತು ಗೋಕರ್ಣದ(Gokarna) ಸಾಗರದಲ್ಲಿ ನಡೆಯಲಿದೆ.
ವಿಜಯಪುರದ ಬಸವತಂವ ಪಾಟೀಲ ಅವರ ವಾಹನದಲ್ಲಿ ಶ್ರೀಗಳ ಅಸ್ಥಿಯನ್ನು ತೆಗೆದುಕೊಂಡು ತೆರಳಲಾಯಿತು. ವಿಶೇಷ ವಾಹನಕ್ಕೆ ಶ್ರೀಗಳ ಭಾವಚಿತ್ರ ಹಾಕಿ ಹೂವಿನಿಂದ ಅಲಂಕಾರ ಮಾಡಿ ಬಸವಲಿಂಗ ಸ್ವಾಮಿಜಿ ಮತ್ತು ಇತರೇ ಸ್ವಾಮೀಜಿಗಳು ಆಶ್ರಮದ ಶ್ರೀಗಳ ಕೋಣೆಯಲ್ಲಿ ಇರಿಸಲಾಗಿದ್ದ ಅಸ್ಥಿಗಳನ್ನು ಹೊರತಂದರು.
ಅಸ್ಥಿಗಳನ್ನು ಹಿಡಿದು ಆಶ್ರಮದ ಆವರಣದಲ್ಲಿಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ಪ್ರದಕ್ಷಿಣೆ ಹಾಕಿ ಭಜನೆ ಮಾಡಲಾಯಿತು. ತದನಂತರ ವಿಶೇಷ ವಾಹನದಲ್ಲಿ ಅಸ್ಥಿಗಳನ್ನಿಟ್ಟುಕೊಂಡು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ವಾಹನ ಕೂಡಲಸಂಗಮಕ್ಕೆ ತೆರಳಿತು.
ಈ ವಾಹನದೊಂದಿಗೆ ನೂರಾರು ಭಕ್ತರು ತಮ್ಮ ವಾಹನಗಳ ಮೂಲಕ ತೆರಳಿದರು. ಮೊದಲು ಕೂಡಲಸಂಗಮದಲ್ಲಿ ಬೆಳಗ್ಗೆ ಅಸ್ಥಿ ವಿಸರ್ಜನೆ ನಡೆಯಲಿದ್ದು, ನಂತರ ಸಂಜೆ 5 ಗಂಟೆಗೆ ಗೋಕರ್ಣದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k