ಚಿಕ್ಕಬಳ್ಳಾಪುರ: ಸುಧಾಕರ್ ಬಾರಿ ಮುಚ್ಚಿಕೊಂಡಿದ್ದರೆ ಸರಿ. ಇಲ್ಲ ಅಂದರೆ ನಿನ್ನ ಎಲ್ಲಾ ಕಥೆ ಬಿಚ್ಚಿಡಬೇಕಾಗುತ್ತದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರ್ನಿಂಗ್ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ಹಿಂದೆ ಎಲ್ಲಿದ್ರು? ಯಾವ ಪಕ್ಷದಲ್ಲಿದ್ರು? ಸುಧಾಕರ್ಗೆ ಟಿಕೆಟ್ ಕೊಟ್ಟಿದ್ದು ಯಾರು ಗೊತ್ತಾ? ಟಿಕೆಟ್ ಕೊಡಿಸಿದ್ದು ನಾನು? ಬಾಯಿ ಮುಚ್ಚಿಕೊಂಡು ಇರು. ಇಲ್ಲ ಅಂದರೆ ನಿನ್ನ ಎಲ್ಲಾ ಕಥೆ ಹೇಳಬೇಕಾಗುತ್ತದೆ. ಟಿಕೆಟ್ ಕೊಡಿಸಿ ನಾನೇ ತಪ್ಪು ಮಾಡಿಬಿಟ್ಟಿದ್ದೇನೆ. ಈಗ ಏನು ಹೇಳುವುದು ಬೇಡ. ಬಾಯಿ ಮುಚ್ಚಿಕೊಂಡಿದ್ದರೆ, ನಾನು ಏನೂ ಹೇಳಲ್ಲ. ಈ ಬಾರಿ ಸುಧಾಕರ್ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕುತ್ತೇವೆ. ಮುಂದಿನ ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಚಿನ್ನದ ಹುಡುಗಿಯ ಪರಿಸರ ಪ್ರೀತಿ – ಹುಟ್ಟುಹಬ್ಬಕ್ಕೆ ಗಿಡ ನೆಟ್ಟ ಮೀರಾಬಾಯಿ ಚಾನು
ಎಸಿಬಿಯಲ್ಲಿನ ಪ್ರಕರಣಗಳನ್ನು ಲೋಕಾಯುಕ್ತ ವರ್ಗಾವಣೆ ಮಾಡಿ ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ತರುವಂತೆ ಆದೇಶ ಮಾಡಿರುವ ಹೈಕೋರ್ಟ್ನ ಆದೇಶವನ್ನು ಗೌರವಿಸುತ್ತೇನೆ. ಪೂರ್ಣ ಪ್ರಮಾಣದ ಆದೇಶ ನೋಡಿದ ಮೇಲೆ ಮತ್ತೆ ಮರು ಪ್ರತಿಕ್ರಿಯಿಸುವೆ. ಎಸಿಬಿ ಸ್ವತಂತ್ರ ತನಿಖಾ ಸಂಸ್ಥೆ ನಮ್ಮ ರಾಜ್ಯದಲ್ಲಿ ಮಾತ್ರ ಎಸಿಬಿ ಇರಲಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಎಸಿಬಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಿಪ್ಸ್ಟಿಕ್ನಿಂದ ವಾಲ್ ಮೇಲೆ ಡೆತ್ ನೋಟ್ – ಗೃಹಿಣಿ ಆತ್ಮಹತ್ಯೆಗೆ ಕಿರುಕುಳವೇ ಕಾರಣವಾಯ್ತಾ?