ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಬೇಕಾಬಿಟ್ಟಿಯಾಗಿ ಸರ್ಕಾರಿ ಬಂಗಲೆಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಧಾರವಾಡದಲ್ಲಿ ಹೇಳಿಬರುತ್ತಿದೆ.
ಕುಲಪತಿಗಳು ಸುಖಾಸುಮ್ಮನೆ ಖರ್ಚು ಮಾಡುತ್ತಿದ್ದಾರೆ ಎಂಬುದು ಆರ್ಟಿಐ ಮಾಹಿತಿಯನ್ನು ಬಯಲು ಮಾಡಿದೆ. ಈಗ ಇರುವ ಕುಲಪತಿ ಕೆ.ಬಿ.ಗುಡಸಿ ಅವರು ಬಂದು ಒಂದು ವರ್ಷ ಕಳೆಯುತ್ತಾ ಬಂತು. ಆದರೆ ಅಷ್ಟರಲ್ಲೇ ಅವರು ಕರ್ನಾಟಕ ವಿವಿಯ ಬಂಗಲೆಗೆ ಶಿಫ್ಟ್ ಕೂಡಾ ಆಗಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರು ಆ ಮನೆಗೆ 11 ಲಕ್ಷ ಖರ್ಚು ಮಾಡಿದ್ದಾರೆ. ಇದನ್ನ ಟೆಂಡರ್ ಕರೆಯದೇ, ತುಂಡು ಗುತ್ತಿಗೆ ನೀಡಿದ್ದಾರೆ. ಹೀಗಾಗಿ 1 ಲಕ್ಷದ ಒಳಗಿನ ಕೆಲಸದ ಮಾಹಿತಿ ನೀಡಲಾಗಿದೆ. ಈ ಕಾಮಗಾರಿಯಲ್ಲಿ ಕಿಟಕಿಯ ಕರ್ಟನ್, ಹೊಸ ಕಾಟು, ತಲೆದಿಂಬು ಸೇರಿ ಹಲವು ಬಿಲ್ ಹಚ್ಚಲಾಗಿದೆ. ಇದನ್ನೂ ಓದಿ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಗಮನ ಸೆಳೆದ ಸೀಮಂತ ಕಾರ್ಯ
ಈ ಖರ್ಚು ಮಾಡುವುದಕ್ಕೆ ಏನೂ ಅಭ್ಯಂತರ ಇಲ್ಲ. ಆದರೆ ಇವರು ಬರುವ ಕೆಲವೇ ದಿನಗಳ ಹಿಂದೆ, ಇದೇ ಬಂಗಲೆಗೆ 33 ಲಕ್ಷ ಖರ್ಚು ಮಾಡಿದ್ದಾರೆ. ಅದು ಯಾಕೆ ಅಂತಾ ಗೊತ್ತಾಗಬೇಕು. ಒಟ್ಟು ಒಂದೇ ವರ್ಷದಲ್ಲಿ 45 ಲಕ್ಷ ರೂ. ಈ ಬಂಗಲೆಗೆ ಹೋಗಿದೆ. ಅದರಲ್ಲಿ ಹೊಸ ಬಂಗಲೆಯನ್ನೆ ಕಟ್ಟಬಹುದಾಗಿತ್ತು ಎಂದು ಮಾಜಿ ಸಿಂಡಿಕೇಟ್ ಸದಸ್ಯ ಜಯಂತ್ ಆರೋಪಿಸಿದ್ದಾರೆ.
ಈ ವಿಷಯ ಇಲ್ಲಿಗೆ ನಿಂತಿಲ್ಲ. ಇದು ರಾಜ್ಯಪಾಲರ ಗಮನಕ್ಕೆ ಕೂಡಾ ತರಲಾವುದು. ಸರ್ಕಾರಿ ದುಡ್ಡು ಅಂದರೆ ಅದು ಜನರ ದುಡ್ಡು. ಅಧಿಕಾರಕ್ಕೆ ಬಂದ ಮೇಲೆ ಹೇಗೆಲ್ಲಾ ಬಳಕೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿಂದೆ ಇದ್ದ ಕುಲಪತಿಗಳೂ ಈ ಬಂಗಲೆಗೆ ಖರ್ಚು ಮಾಡಿದ್ದಾರೆ. ವಾಲಿಕಾರ್ ಕುಲಪತಿ ಆಗಿದ್ದಾಗ 7 ಲಕ್ಷದಷ್ಟು ಖರ್ಚು ಮಾಡಿದ್ದಾರೆ. ಅದರ ನಂತರ ಪ್ರಮೋದ ಗಾಯ್ ಇದ್ದಾಗಲೂ 9 ಲಕ್ಷ ಖರ್ಚು ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ
ಈ ಲೆಕ್ಕದಂತೆಯೇ ಹೋದರೆ ಈ ಬಂಗಲೆಗೆ 10 ವರ್ಷಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ಕೇಳಿದರೆ, ನನ್ನ ವ್ಯಾಪ್ತಿಗೆ ಬರಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಇದನ್ನ ಸರ್ಕಾರವೇ ಬಗೆಹರಿಸಬೇಕಿದೆ.