ಕೊಪ್ಪಳ: ಭಾರತೀಯರ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಶನಿವಾರ 6 ಗಂಟೆಗಳ ಕಾಲ ನಿಲ್ಲಿಸಿದ್ದಾರೆ. ಇಬ್ಬರ ಜಗಳವನ್ನು 6 ಗಂಟೆ ನಿಲ್ಲಿಸುವುದು ಸಾಮಾನ್ಯದ ಮಾತಾ ಎಂದು ಗಣಿ ಸಚಿವ ಹಾಲಪ್ಪ ಪ್ರಶ್ನಿಸಿದರು.
ಯುದ್ಧಗ್ರಸ್ಥ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ವಿಚಾರವಾಗಿ ನಡೆದ ಚರ್ಚೆ ಹಿನ್ನೆಲೆಯಲ್ಲಿ ಹಾಲಪ್ಪ ಆಚಾರ್ ಭಾನುವಾರ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಮಹಿಳಾ ದಿನಾಚರಣೆ – ಸೀರೆ, ಶೂ ತೊಟ್ಟು ಮಹಿಳೆಯರ ಓಟ
ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿಯನ್ನು ಕೆಲವರು ಅರ್ಥ ಮಾಡಿಕೊಳ್ಳಲ್ಲ. ಯದ್ಧ ನಡೆಯುವಾಗ ಆ ದೇಶದ ಒಳಗೆ ಹೋಗಲು ಆಗುತ್ತಾ? ಆದರೂ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು ಮನೆಗೆ ಮುಟ್ಟಿಸಿದ್ದೇವೆ ಎಂದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ನೆರವು ನೀಡಿದ ಬಿಎಸ್ವೈ
ಯುದ್ಧ ನಡೆಯುವಾಗ ಸಾಕಷ್ಟು ತೊಂದರೆಯಾಗುತ್ತದೆ. ಯಾರೇ ಆದರೂ ಅದನ್ನು ಅನುಭವಿಸಬೇಕು. ಆದರೆ ಅನುಭವಿಸಿದ ಸಮಸ್ಯೆಯನ್ನು ರಾಷ್ಟ್ರದ ಮೇಲೆ ಹಾಕಬಾರದು. ನಮ್ಮ ಸರ್ಕಾರದ ಕಾಳಜಿ ಎಷ್ಟಿದೆ ಎನ್ನುವುದನ್ನು ಅನೇಕ ರಾಷ್ಟ್ರಗಳು ನೋಡುತ್ತಿವೆ. ಕೆಲ ವಿದ್ಯಾರ್ಥಿಗಳು ಅವರ ಭಾವನೆ ಹಂಚಿಕೊಂಡಿದ್ದಾರೆ. ಇದಕ್ಕೆ ನಾನು ರಿಯಾಕ್ಟ್ ಮಾಡಲ್ಲ ಎಂದು ಹಾಲಪ್ಪ ಆಚಾರ್ ಹೇಳಿದರು.