ಜೈಪುರ: ರಾಜಸ್ಥಾನದ (Rajasthan) ಭರತ್ಪುರದಲ್ಲಿ ಭದ್ರತಾ ಅಧಿಕಾರಿಗಳಿಗೆ ಅಡ್ಡಿಪಡಿಸಿ, ಪೊಲೀಸ್ ಪೇದೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಸಂಸದೆ ಕೃಷ್ಣೇಂದ್ರ ಕೌರ್ (Krishnendra Kaur) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೌರ್, ನಗರದ ಅಖಾಡ್ ತಿರಾಹಾದಲ್ಲಿ ಕಾನ್ಸ್ಟೇಬಲ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಮಾಜಿ ಸಂಸದೆ ವಿರುದ್ಧ ಕಾನ್ಸ್ಟೇಬಲ್ ದೂರು ನೀಡಿದ ನಂತರ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆಗೆಂದು ವಿಮಾನವನ್ನೇ ಬುಕ್ ಮಾಡಿದ ಜೋಡಿ
ದೂರು ದಾಖಲಿಸಿರುವ ಕಾನ್ಸ್ಟೇಬಲ್ ಗಜರಾಜ್ ಸಿಂಗ್ ಭರತ್ಪುರದ ಆರ್ಎಸಿಯ 6ನೇ ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷ್ಣೇಂದ್ರ ಕೌರ್ ತಮ್ಮ ಕಾರನ್ನು ನಡುರಸ್ತೆಯಲ್ಲೇ ನಿಲ್ಲಿಸಿದ್ದರು. ಹೀಗೆ ಕಾರು ನಿಲ್ಲಿಸುವಂತಿಲ್ಲ ಎಂದು ನಾನು ಹೇಳಿದೆ. ಆದರೆ ಡ್ರೈವರ್ ನನ್ನ ಮಾತು ಕೇಳಲಲ್ಲಿ. ಕಾರಿನಲ್ಲಿ ಕುಳಿತಿದ್ದ ಕೌರು ಅವರು ನನ್ನ ವಿರುದ್ಧ ನಿಂದನೆ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೆ ಕಾರಿನಿಂದ ಕೆಳಗಿಳಿದು ಕಪಾಳಮೋಕ್ಷ ಮಾಡಿದ್ದಾರೆ ಎಂದು ಕಾನ್ಸ್ಟೇಬಲ್ ಗಂಭೀರ ಆರೋಪ ಮಾಡಿದ್ದಾರೆ.
ಆಕೆಯ ಡ್ರೈವರ್ ಮತ್ತು ಇತರರು ಕೂಡ ನನ್ನನ್ನು ನಿಂದಿಸಿದ್ದಾರೆ. ನಾನು ಘಟನೆಯ ಬಗ್ಗೆ ಉಸ್ತುವಾರಿ ಪ್ರಭು ದಯಾಳ್ ಮತ್ತು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಂತರ ನಾನು ಕೌರ್ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವ್ಯಕ್ತಿ ನೀಡಿದ ಚಾಕ್ಲೆಟ್ ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥ- ಆರೋಪಿಗಾಗಿ ಹುಡುಕಾಟ