ಧಾರವಾಡ: ಹಾಡಹಗಲೇ ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಗುಂಡು ಹಾರಿಸಿದ ಘಟನೆ ಧಾರವಾಡ ಹೊರವಲಯದ ಟೈವಾಕ್ ಕಂಪನಿ ಬಳಿ ನಡೆದಿದೆ.
ಮಹಾರಾಷ್ಟ್ರ (Maharashtra) ಮೂಲದ ಸುಶಾಂತ್ ಅಗರವಾಲ್ ಎಂಬುವವರು ಅತ್ತಿಕೊಳ್ಳದ ಬಳಿ ಆಸ್ತಿ ಹೊಂದಿದ್ದಾರೆ. ಇವರ ಆಸ್ತಿ ಪಕ್ಕದಲ್ಲೇ ಪವನ್ ಕುಲಕರ್ಣಿ ಎಂಬುವವರ ಜಾಗ ಕೂಡ ಇದೆ. ಇಂದು ಪವನ್ ಕುಲಕರ್ಣಿ ಸೇರಿದಂತೆ ಇತರರು ಸುಶಾಂತ್ ಅಗರವಾಲ್ ಅವರ ಜಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ಸುಶಾಂತ್ ನಮ್ಮ ಆಸ್ತಿಯಲ್ಲಿ ಏಕೆ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕೆಲಸ ಮಾಡುತ್ತಿದ್ದ ಕೆಲವರು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಮಿಜೋರಾಂನಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿದು 17 ಮಂದಿ ದುರ್ಮರಣ
ಈ ವೇಳೆ ಭಯದಿಂದ ಸುಶಾಂತ್ ತಮ್ಮ ಬಳಿ ಇದ್ದ ಪರವಾನಿಗೆ ಹೊಂದಿರುವ ರಿವಾಲ್ವಾರ್ನಿಂದ ನೆಲಕ್ಕೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸುತ್ತಿದ್ದಂತೆ ಅಲ್ಲಿಂದ ಕೆಲಸ ಮಾಡುತ್ತಿದ್ದವರು ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ರಿವಾಲ್ವಾರ್ನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಎರಡೂ ಕಡೆಯವರನ್ನೂ ಪೊಲೀಸರು (Police) ಠಾಣೆಗೆ ಕರೆತಂದು ಡಿಸಿಪಿ ಎಂ.ರಾಜೀವ್ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಜಿಂಬಾಬ್ವೆ ಕ್ರಿಕೆಟ್ ದಿಗ್ಗಜ ಹೀತ್ ಸ್ಟ್ರೀಕ್ ಬದುಕಿದ್ದಾರೆ – ಆಪ್ತ ಹೆನ್ರಿ ಒಲೊಂಗಾ ಅಚ್ಚರಿಯ ಟ್ವೀಟ್
Web Stories