ಗದಗ: ಮಲಪ್ರಭಾ ಬಲದಂಡೆ ಕಾಲುವೆಗೆ ಬಿದ್ದು ಪರದಾಟ ನಡೆಸಿದ್ದ ಕುದುರೆಯೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಕುದುರೆ ಕಾಲುವೆ ಪಕ್ಕ ನಡೆದು ಹೋಗುವ ವೇಳೆ ಕಾಲುಜಾರಿ ಕಾಲುವೆಯಲ್ಲಿ ಸಿಲುಕಿ ಪರದಾಟ ನಡೆಸಿದ್ದನ್ನು ಕಂಡ ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದರು. ಆದರೆ ಸೂಕ್ತ ಸಲಕರಣೆ ಹಾಗೂ ಕಾಲುವೆ ಜೇಡಿ ಮಣ್ಣಿನಿಂದ ಕೂಡಿದ್ದ ಕಾರಣ ರಕ್ಷಣೆ ಮಾಡಲು ವಿಫಲರಾಗಿದ್ದರು.
ಈ ವೇಳೆ ಅಗ್ನಿಶಾಮಕ ರಕ್ಷಣಾ ತಂಡಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳೀಯರ ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 2 ಗಂಟೆಗಳಿಗೂ ಕಾಲ ಸಿಲುಕಿ ನರಳಾಡುತ್ತಿದ್ದ ಕುದುರೆಯನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.
ಹೆಚ್ಚಿನ ಅವಧಿ ಕೆಸರಿನಲ್ಲಿ ಸಿಲುಕಿ ನರಳಾಡಿದ್ದ ಕುದುರೆ ರಕ್ಷಣೆ ಮಾಡಿದ ಬಳಿಕವೂ ನಿತ್ರಾಣಗೊಂಡಿತ್ತು. ಅಲ್ಲದೇ ಎದ್ದು ನಿಲ್ಲಲಾಗದ ಕುದುರೆಯ ಪರದಾಟ ಕಣ್ಣೀರು ತರುವಂತಿತ್ತು. ಈ ವೇಳೆ ಕುದುರೆಗೆ ನೀರು, ಆಹಾರ ನೀಡಿ ಪೋಷಣೆ ಮಾಡಿ ರಕ್ಷಣೆ ಮಾಡಿದ್ದಾರೆ.
https://www.youtube.com/watch?v=6BUSLJn0G_g