ಮಂಗಳೂರು: ಪೊಲೀಸ್ ಫೈರಿಂಗ್ ನಡೆಸಿ ಕುಖ್ಯಾತ ದರೋಡೆಕೋರರನ್ನು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಮಣಿಹಳ್ಳದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸದ್ದಾಂ ಮಾರಿಪಳ್ಳ, ಮೌಸೀನ್ ಸುರತ್ಕಲ್ ಹಾಗೂ ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಬಂಧಿತ ಆರೋಪಿಗಳು. ದರೋಡೆಗೆ ಸಂಚು ಹಿನ್ನೆಲೆಯಲ್ಲಿ ಪೊಲೀಸರು ಬೆಳ್ತಂಗಡಿಯಿಂದ ದರೋಡೆಕೊರರನ್ನು ಬೆನ್ನಟ್ಟಿದ್ದರು. ಕಾರು ನಿಲ್ಲಿಸಲು ಸೂಚಿಸಿದಾಗ ಪೊಲೀಸರ ಮೇಲೆ ಡಿಕ್ಕಿ ಹೊಡೆಯಲು ದರೋಡೆಕೋರರ ತಂಡ ಯತ್ನಿಸಿತ್ತು.
- Advertisement 2
- Advertisement 3
ದರೋಡೆಕೋರರು ಕೆಂಪು ಕಲರ್ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಬಂಟ್ವಾಳದ ಮಣಿಹಳ್ಳ ಜಂಕ್ಷನ್ ನಲ್ಲಿ ಪೊಲೀಸರ ಮೇಲೆ ಹಾಯಲು ಯತ್ನಿಸಿದ್ದಾರೆ. ಆಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸ್ ಫೈರಿಂಗ್ ವೇಳೆ ಕಾರು ನಿಲ್ಲಿಸಿ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ.
- Advertisement 4
ಮನ್ಸೂರ್ ಅಮ್ಮೆಮಾರ್ ಹಾಗೂ ಅಮ್ಮಿ ಕಾರಿನಿಂದಿಳಿದು ಪರಾರಿಯಾಗಿದ್ದು, ಕಾರಿನಲ್ಲಿದ್ದ ತಲವಾರು ಸಹಿತ ಮಾರಕಾಸ್ತ್ರಗಳು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಹಾಗೂ ಬೆಳ್ತಂಗಡಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಈ ಫೈರಿಂಗ್ ನಡೆದಿದೆ.