-ಹಸಿರು ಬಿಳಿ ಕೇಸರಿ ಲೈಟಿಂಗ್ ನಿಂದ ಕಂಗೊಳಿಸಿದ ಬ್ರಿಗೇಡ್ ರೋಡ್
-ಕೋರಮಂಗಲದಲ್ಲಿ ಪಂಜಿನ ಮೆರವಣಿಗೆ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಟೆಕ್ಕಿ ಹಾಗು ಉದ್ಯಮಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಬಡವರು, ಭಿಕ್ಷುಕರು ಹಾಗೂ ಬೀದಿ ಬದಿ ಮಲಗವರಿಗೆ ಬ್ಲಾಂಕೆಟ್, ಹಾಸಿಗೆ ವಿತರಿಸಿದ್ದಾರೆ. ಟೆಕ್ಕಿ ಕಾರ್ತಿಕ್ ಹಾಗೂ ಉದ್ಯಮಿ ವಿನೋದ್ ತಮ್ಮ ಕೈಲಾದ ಸಹಾಯವನ್ನು ಸ್ವತಂತ್ರ ದಿನದಂದು ಮಾಡಿದ್ದಾರೆ.
ಯಶವಂತಪುರ ರೈಲ್ವೇ ನಿಲ್ದಾಣ ಸುತ್ತಮುತ್ತ ಇರೋ ಭಿಕ್ಷುಕರಿಗೆ ಬ್ಲಾಂಕೆಟ್ ,ಹಣ್ಣು ಹಂಪಲು, ಊಟ ಹೊದಿಕೆ ವಿತರಣೆ ಮಾಡಿದ್ರು. ಅಲ್ಲದೇ ಫೂಟ್ ಪಾತ್ ಮೇಲೆ ಮಲಗೋ ಬಡವರಿಗೂ ಬ್ಲಾಕೇಟ್ ವಿತರಣೆ ಮಾಡಿ ಸಾರ್ಥಕತೆ ಮೆರೆದರು. ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ಮಾನವೀಯತೆ ಮೆರೆಯುತ್ತಿರುವ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
- Advertisement 2
- Advertisement 3
ಮಧ್ಯರಾತ್ರಿ 12 ಗಂಟೆಗೆ ನಗರದ ಬನ್ನಪ್ಪ ಪಾರ್ಕ್ ನಲ್ಲಿ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯ್ತು. ಹಿಂದೂ ಜಾಗರಣ ವೇದಿಕೆ ಅಖಂಡ ಭಾರತ ಸಂಕಲ್ಪದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ರು. ಸ್ವಾಮಿ ಪರಮಾನಂದ ಸ್ವಾಮೀಜಿಗಳು ಹಾಗು ನೂರಾರು ಕಾರ್ಯಕರ್ತರು, ಸಾರ್ವಜನಿಕರ ಸಮ್ಮುಖದಲ್ಲಿ 12 ಗಂಟೆಗೆ ಸರಿಯಾಗಿ ಧ್ವಜಾರೋಹಣ ಮಾಡಲಾಯಿತು.
- Advertisement 4
ಬ್ರಿಗೇಡ್ ರೋಡ್ ನಲ್ಲಿ ಹಸಿರು, ಬಿಳಿ, ಕೇಸರಿ ಲೈಟಿಂಗ್ ನಿಂದ ಅಲಂಕರಿಸಲಾಗಿದೆ. ಮೊದಲ ಬಾರಿಗೆ ಬ್ರಿಗೇಡ್ ರೋಡ್ ನ ದೀಪಾಂಲಕರ ಮಾಡಿದ್ದು ಎಲ್ಲರನ್ನು ಸೆಳೆಯುತ್ತಿದೆ. ಅದರಲ್ಲೂ ವಿಶೇಷವಾಗಿ ಭಾರತದ ಧ್ವಜ ಬಣ್ಣದ ರೀತಿಯ ಲೈಟ್ ಗಳನ್ನು ಹಾಕಿ ವಿಶೇಷವಾಗಿ ಶೃಂಗರಿಸಲಾಗಿದೆ. ಕೋರಮಂಗಲ ಬಳಿಯಿರುವ ಟೀಚರ್ಸ್ ಕಾಲೋನಿಯಲ್ಲಿ ತಡರಾತ್ರಿ 12 ಗಂಟೆಗೆ ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯ್ತು. ‘ನಮ್ಮ ಟೀಚರ್ಸ್’ ಸಂಘದ ವತಿಯಿಂದ ವಿಶೇಷವಾಗಿ ಪಂಜು ಮೆರವಣಿಗೆ ಮುಖಾಂತರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಕ್ಕಳು ಸೇರಿದಂತೆ ಮಹಿಳೆಯರು, ಸಾರ್ವಜನಿಕರು ಪಂಜು ಹಾಗೂ ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv