ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಬುದ್ಗಾಮ್ (Budgam) ಜಿಲ್ಲೆಯ ಯೂಸ್ಮಾರ್ಗ್ನ ಮೇಲ್ಭಾಗದಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (Lashkar-e-Taiba) ಕಮಾಂಡರ್ ಯಾಸಿರ್ ಬಲಿಯಾಗಿದ್ದಾನೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಉಗ್ರರ ಉಪಸ್ಥಿತಿ ಕುರಿತು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಂಟಿ ಭದ್ರತಾ ಪಡೆಗಳು ಯೂಸ್ಮಾರ್ಗ್ನ ಎತ್ತರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಫಸ್ಟ್ ಟೈಮ್ ವಿಮಾನ ಏರಿದ ಸರ್ಕಾರಿ ಶಾಲಾ ಮಕ್ಕಳು; ಮುಂಬೈ ಪ್ರವಾಸಕ್ಕೆ ಫುಲ್ ಖುಷ್!
ವಿಶೇಷ ಪಡೆಗಳು ಮತ್ತು 53ನೇ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಶೋಧ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ ಬಳಿಕ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಎನ್ಕೌಂಟರ್ಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಾನು ನಿಮ್ಮ ವಿದ್ಯಾರ್ಥಿಯಾಗಿದ್ದರೆ ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು? – ಶಿಕ್ಷಕಿಯನ್ನೇ ಕೇಳಿದ ಮೋದಿ
ಹತನಾದ ಯಾಸಿರ್ ಲಷ್ಕರ್-ಎ-ತೊಯ್ಬಾದ ಸುಲೈಮಾನ್ ಮೂಸಾ ಗುಂಪಿನ ಭಾಗವಾಗಿದ್ದ ಎನ್ನಲಾಗಿದೆ. ಆದರೆ ಸುಮಾರು ಒಂದು ವರ್ಷದ ಹಿಂದೆ ಆತ ಆ ಗುಂಪಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಭದ್ರತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತೈಲ ಕೇಂದ್ರ ಖಾರ್ಗ್ ದ್ವೀಪದ ಬಳಿಯೇ ಇರಾನಿಯನ್ ಟ್ಯಾಂಕರ್ ಮೇಲೆ ಅಮೆರಿಕ ದಾಳಿ
ಯಾಸಿರ್ನ ಚಲನವಲನಗಳ ಮೇಲೆ ಭದ್ರತಾ ಏಜೆನ್ಸಿಗಳು ನಿಗಾ ಇಟ್ಟಿದ್ದವು. ಯೂಸ್ಮಾರ್ಗ್ ಪ್ರದೇಶದಲ್ಲಿ ಆತನ ಚಟುವಟಿಕೆಗಳನ್ನು ಕೆಲಕಾಲದಿಂದಲೇ ಗಮನಿಸಲಾಗುತ್ತಿತ್ತು ಎನ್ನಲಾಗಿದೆ. ಗುಂಪಿನಿಂದ ಬೇರ್ಪಟ್ಟ ಬಳಿಕ ಯಾಸಿರ್ ಈ ಪ್ರದೇಶದಲ್ಲಿ ಪ್ರಮುಖ ಲಷ್ಕರ್ ಉಗ್ರನಾಗಿ ಹೊರಹೊಮ್ಮಿದ್ದ ಎಂದು ಮೂಲಗಳು ಹೇಳಿವೆ. ಯೂಸ್ಮಾರ್ಗ್ನ ಮೇಲ್ಭಾಗದ ಪ್ರದೇಶದಲ್ಲಿ ಆತನ ಉಪಸ್ಥಿತಿ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಇದನ್ನೂ ಓದಿ: GBA ಕಾಮಗಾರಿ ವೇಳೆ ಗ್ಯಾಸ್ ಪೈಪ್ಗೆ ಹಾನಿ – 8 ಅಡಿ ಎತ್ತರಕ್ಕೆ ಚಿಮ್ಮುತ್ತಿರುವ ಗ್ಯಾಸ್
ಕಾರ್ಯಾಚರಣೆ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಯಾಸಿರ್ ಸಾವನ್ನಪ್ಪಿದ್ದಾನೆ. ಎನ್ಕೌಂಟರ್ ಬಳಿಕ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್ಶಿಪ್ಗೆ ಭೂಮಿ ನೀಡಿದ ರೈತರ ಪರಿಹಾರಕ್ಕೆ ಕನ್ನ – ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ವಂಚನೆಗೆ ಯತ್ನ
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಿರುವ ಸಂದರ್ಭದಲ್ಲೇ ಈ ಎನ್ಕೌಂಟರ್ ನಡೆದಿದೆ. ಯಾಸಿರ್ ಹತ್ಯೆಯ ಬಳಿಕ ಭದ್ರತಾ ಏಜೆನ್ಸಿಗಳು ಆತನ ಸಂಪರ್ಕ ಜಾಲದ ಕುರಿತು ತನಿಖೆ ಆರಂಭಿಸಿವೆ. ಲಷ್ಕರ್-ಎ-ತೊಯ್ಬಾದ ಇತರ ಉಗ್ರರೊಂದಿಗೆ ಆತನಿಗಿದ್ದ ಸಂಪರ್ಕ ಹಾಗೂ ಈ ಪ್ರದೇಶದಲ್ಲಿ ಆತ ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಇದನ್ನೂ ಓದಿ: ಬಾಗಿಲಿಗೆ ಬಂದಿದೆ ಸರ್ಕಾರ, ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7 ಮೀಸಲಾತಿ: ಪ್ರಜಾಸೇವಾ ಇಲಾಖೆಗೆ ಡಿಕೆಶಿ ಚಾಲನೆ
ಇತ್ತೀಚಿನ ಜಮ್ಮು ಮತ್ತು ಕಾಶ್ಮೀರದ ಉಗ್ರ ಚಟುವಟಿಕೆಗಳ ಯೋಜನೆ, ನೆರವು ಅಥವಾ ಇತರ ರೀತಿಯ ಬೆಂಬಲದಲ್ಲಿ ಯಾಸಿರ್ ಯಾವುದೇ ಪಾತ್ರ ವಹಿಸಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಎಂ ಡಿಕೆಶಿ ಕನಸಿನ ʻಪ್ರಜಾಸೇವಾ ಇಲಾಖೆʼ ಲೋಕಾರ್ಪಣೆ – ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ
