ಪಂಚಿಂಗ್ ಡೈಲಾಗ್ ಹೇಳುತ್ತಾ ಬಿಗ್ ಬಾಸ್ (Bigg Boss) ಮನೆಯೊಳಗೆ ಕಾಲಿಟ್ಟಿದ್ದ ನವಾಜ್, ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ನವಾಜ್ (Nawaz) ಚೆನ್ನಾಗಿ ಆಡುತ್ತಾನೆ ಎನ್ನುವ ನಂಬಿಕೆಯನ್ನು ಹುಸಿಗೊಳಿಸಿದ ಕಾರಣಕ್ಕಾಗಿ ಆ ಹುಡುಗನನ್ನು ಎಲಿಮಿನೇಟ್ ಮಾಡಲಾಗಿದೆ. ಅರುಣ್ ಸಾಗರ್ (Arun Sagar) ಜೊತೆ ಸದಾ ಅಂಟಿಕೊಂಡೇ ಇರುತ್ತಿದ್ದ ಈ ಹುಡುಗ, ಅರುಣ್ ಸಾಗರ್ ಅವರನ್ನು ಒಂಟಿಯಾಗಿ ಬಿಟ್ಟು ಬಂದಿದ್ದಾರೆ.
ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಎರಡ್ಮೂರು ದಿನ ನವಾಜ್ ಸೈಲೆಂಟ್ ಆಗಿ ಉಳಿದುಕೊಂಡರು. ಆನಂತರ ಎಲ್ಲರೊಂದಿಗೆ ಬೆರೆತರು. ಅದರಲ್ಲೂ ಕಳೆದ ವಾರ ದೊಡ್ಮನೆಯಿಂದ ಹೊರಬಂದ ಐಶ್ವರ್ಯ ಪಿಸ್ಸೆ ಜೊತೆ ತುಸು ಸಲುಗಿಂದ ಇದ್ದ ಈ ಹುಡುಗ, ಆಕೆಗೆ ಪ್ರಪೋಸ್ ಕೂಡ ಮಾಡಿದರು. ಏನೇ ಮಾಡಿದರೂ ಟಾಸ್ಕ್ ನಲ್ಲಿ ಹಿಂದುಳಿಯುತ್ತಲೇ ಹೋದರು. ಹಾಗಾಗಿ ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಗುರೂಜಿ
ಮೊದ, ಮೊದಲು ಮೌನಿ ಅನಿಸಿದ್ದ ನವಾಜ್, ಒಂದು ವಾರ ಕಳೆಯುತ್ತಿದ್ದಂತೆ ಚಿಗುರಿಕೊಂಡರು. ಮನೆಯಲ್ಲಿ ಇದ್ದ ಕೆಲವರನ್ನು ಹೊಡೆಯಬೇಕು ಅನಿಸ್ತಿದೆ ಅಂತ ಭಯದ ವಾತಾವರಣ ಸೃಷ್ಟಿ ಮಾಡಿದರು. ಆಗಾಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೂ ನಿಲ್ಲುತ್ತಿದ್ದರು. ಅರುಣ್ ಸಾಗರ್ ಹೊರತಾಗಿ ಉಳಿದವರ ಜೊತೆ ಅಷ್ಟಾಗಿ ಬೆರೆಯದೇ ಇರುವ ಕಾರಣವೇ, ಅವರು ಮನೆಯಿಂದ ಆಚೆ ಬರುವಂತಾಗಿದೆ.
ಈ ವಾರ ನವಾಜ್ ಗೆ ಯಾರೋ ಹೊಸ ಹೊಸ ಬಟ್ಟೆಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಟ್ಟಿದ್ದರು. ಅದನ್ನು ನೋಡಿ ಭಾವುಕರಾಗಿದ್ದ ಈ ಹುಡುಗ, ಜೀವನದಲ್ಲಿ ಎರಡೇ ಎರಡು ಬಟ್ಟೆಗಳನ್ನು ಕಂಡಿದೆ. ಯಾರೋ ಇಷ್ಟೊಂದು ಹೊಸ ಬಟ್ಟೆಗಳನ್ನು ಕಳುಹಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದರು. ಈ ಕಣ್ಣೀರು ಕೂಡ ಅವರನ್ನು ಕೈ ಹಿಡಿಯಲಿಲ್ಲ. ಈ ಕಾರಣಕ್ಕಾಗಿ ಮನೆಯಾಚೆ ಅವರು ಟ್ರೋಲ್ (Troll) ಆದರು. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಪಿಸ್ಸೆ ಔಟ್’
ವಾರಕ್ಕೊಂದು ಹೊಸ ಬಟ್ಟೆ ಹಾಕಿಕೊಂಡು ಥಿಯೇಟರ್ ಗೆ ಬರುವ ನವಾಜ್ ಬಟ್ಟೆ ವಿಷಯದಲ್ಲಿ ಸುಳ್ಳು ಹೇಳಿಬಿಟ್ಟರು ಅಂತ ಕಾಮೆಂಟ್ ಮಾಡಲಾಯಿತು. ಈ ಸುಳ್ಳು ಕೂಡ ಅವರಿಗೆ ಮುಳುವಾಗಿರಬಹುದು.