Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಸುಮಲತಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಸುಮಲತಾ

Districts

ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದ್ರೂ ಆಗಲ್ಲ: ಸುಮಲತಾ

Public TV
Last updated: August 19, 2021 7:19 pm
Public TV
Share
3 Min Read
MND 2 1
SHARE

– ಪ್ರತಾಪ್ ಸಿಂಹ ವಿರುದ್ಧ ಸಂಸದೆ ವಾಗ್ದಾಳಿ

ಮಂಡ್ಯ: ನನ್ನ ಆತ್ಮಸ್ಥೈರ್ಯ ಕುಗ್ಗಿಸಲು 10 ಜನ್ಮ ಎತ್ತಿ ಬಂದರೂ ಆಗಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ ಅವರಿಗೆ ಅಕ್ರಮ ಗಣಿಗಾರಿಕೆ ನಿಂತಾಗಿನಿಂದ ಎಲ್ಲೋ ಅವರಿಗೆ ಎಫೆಕ್ಟ್ ಆಗಿದೆ ಅನ್ನಿಸುತ್ತೆ. ಲಾಜಿಕ್ ಇಲ್ಲದ ಮಾತುಗಳನ್ನು ಅವರು ಮಾತನಾಡುತ್ತಿದ್ದಾರೆ. ನನ್ನ ಸುತ್ತ ಅಕ್ರಮ ನಡೆಯುತ್ತಿದೆ ಎಂಬ ಶಂಕೆ ಇದ್ದರೆ ಪೊಲೀಸ್‍ಗೆ ಕಂಪ್ಲೇಟ್ ಮಾಡಲಿ. ಅದನ್ನು ಎಲ್ಲಿ ಚಾಲೆಂಜ್ ಮಾಡಬೇಕು, ಎಲ್ಲಿ ಉತ್ತರ ಕೊಡಬೇಕು ಅಲ್ಲಿ ಕೊಡುತ್ತೇನೆ ಎಂದರು.

MND 4 1

ಅವರಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಲೆಟರ್ ಮಿಸ್ ಯೂಸ್ ಆದರೆ ನನ್ನ ಗಮನಕ್ಕೆ ತರಬಹುದಿತ್ತು. ಅದನ್ನು ಬಿಟ್ಟು ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಅವರ ಮಾತಿನಿಂದ ನನ್ನ ಆತ್ಮಸ್ಥೈರ್ಯ ಕುಗ್ಗಲ್ಲ. ನನ್ನ ಆತ್ಮಸ್ಥೈರ್ಯ ಕುಗ್ಗಿಸಬೇಕು ಅಂದ್ರೆ 10 ಜನ್ಮ ಎತ್ತಿ ಬಂದರೂ ಆಗಲ್ಲ. ಈ ರೀತಿಯ ಕಾಮೆಂಟ್ ಮಾಡುವವರಿಂದ ಇನ್ನಷ್ಟು ಶಕ್ತಿ ಬರುತ್ತದೆ. ಅವರ ಮಾತಿನಿಂದ ನನಗೆ ಬ್ಯಾಟರ್ ಚಾರ್ಜ್ ಮಾಡಿದಂತೆ ಆಗುತ್ತದೆ. ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕುವುದು ಹಾಸ್ಯಾಸ್ಪದ ಎನ್ನಿಸುತ್ತದೆ. ಅವರ ಮಾತಿಗೆ ಏನು ಹೇಳಬೇಕು ಅಂತಾ ನನಗೆ ಗೊತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ವೈದ್ಯಕೀಯ ಸೀಟ್‍ನಲ್ಲಿ OBC ಶೇ.27, EWSಗೆ ಶೇ.10 ಮೀಸಲಾತಿ

ಗಣಿಗಾರಿಕೆ ವಿಷಯ ಎತ್ತಿದಾಗ ಎಲ್ಲಾ ಶಾಸಕರು ದಿಶಾ ಸಭೆ ಬರುತ್ತೀರಾ. ಬೇರೆ ಸಮಸ್ಯೆ ಕುರಿತು ಮಾತನಾಡಲು ಬರುವುದಿಲ್ಲ. ಮನ್‍ಮುಲ್ ಹಗರಣದ ಬಗ್ಗೆ ಅವರು ತುಟಿ ಬಿಚ್ಚಲ್ಲ. ಶ್ರೀರಂಗಪಟ್ಟಣ ಶಾಸಕರಿಗೆ ನನ್ನ ಬಗ್ಗೆ ಮಾತನಾಡಿದರೆ ಮೈಲೇಜ್ ಸಿಗಬಹುದು. ಅದೇ ಕಾರಣಕ್ಕೆ ಅವರು ನನ್ನ ಹೆಸರನ್ನು ಮಂತ್ರದ ರೀತಿ ಹೇಳುತ್ತಿದ್ದಾರೆ. ದಿಶಾ ಸಭೆ ನಡೆಸಲು ನಿಮಗೆ ಹಕ್ಕಿಲ್ಲ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಒಳ್ಳೆಯದಕ್ಕಿಂದ ಕೆಟ್ಟದನ್ನು ಮಾಡುವವರು ಸಿಗುತ್ತಾರೆ ಎಂದು ಅಂಬರೀಶ್ ಅವರು ಹೇಳುತ್ತಿದ್ದರು. ಕೆಟ್ಟದ್ದನ್ನು ಕೆಲವರು ಮಾಡಲಿ ನಾವು ಒಳ್ಳೆಯದು ಮಾಡೋಣ. ಹಿಂದೆ ದುಷ್ಟರನ್ನು ಸಂಹಾರ ಮಾಡಲು ದೇವತೆಗಳು ಹುಟ್ಟಿ ಬರುತ್ತಿದ್ದರು. ರಾವಣಾಸುರ ಆಗಲಿ, ಮಹಿಷಾಸುರ ಆಗಲಿ ಬೇಕಿದ್ರೆ, ಅದನ್ನು ಸಂಹಾರ ಮಾಡಲು ನಾನು ಮಹಿಷ ಮರ್ದಿನಿ ಆಗುತ್ತೇನೆ ಎಂದು ತಿಳಿಸಿದರು.

MND 3 1

ಜೆಡಿಎಸ್ ಅವರನ್ನು ನನ್ನ ವಿರೋಧಿಗಳು ಎಂದು ಹೇಳಲ್ಲಾ. ಇವರು ಜಿಲ್ಲೆಯ ಜನರ ವಿರೋಧಿಗಳು. ಭ್ರಷ್ಟಾಚಾರದ ವಿರುದ್ಧದ ರಾಯಬಾರಿ ಆಗಿ ಬರುವವರನ್ನು ಈ ರೀತಿ ಟಾರ್ಗೆಟ್ ಮಾಡುತ್ತಾರೆ. ಇವರು ಜನರಿಗೆ ಯಾವ ಸೇವೆ ಮಾಡುತ್ತಾರೆ. ಇಂತಹ ಜನಪ್ರತಿಗಳನ್ನು ಆಯ್ಕೆ ಮಾಡಿದ್ದಕ್ಕೆ ಜನರು ಪಶ್ಚಾತ್ತಾಪ ಪಡಬೇಕು. ಇವರಿಂದ ಯಾವಾಗ ವಿಮುಕ್ತಿ ಯಾವಗ ಸಿಗುತ್ತದೆ ಎಂದು ಜನರು ಕಾಯುತ್ತಾ ಇದ್ದಾರೆ. ಇದಕ್ಕೆ ಹೆಚ್ಚು ದಿನ ಕಾಯಬೇಕಿಲ್ಲ, ಈ ಕೆಲಸ ತುಂಬಾ ಬೇಗನೇ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಬಲಿಷ್ಠ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸದಂತೆ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ

ಮೈಸೂರಿನ ದಿಶಾ ಸಭೆಗೆ ನಾನು ಉಪಾಧ್ಯಕ್ಷೆ ಆಗುತ್ತೇನೆ. ನಾನು ಪ್ರತಾಪ್ ಸಿಂಹ ಜೊತೆ ಹೇಳಿದಾಗ, ಅವರು ತಾಲೂಕು ಮಟ್ಟದಲ್ಲಿ ಸಭೆ ಮಾಡಿ ಎಂದರು. ರಾಷ್ಟ್ರೀಯ ಹೆದ್ದಾರಿ ನನ್ನ ಯೋಜನೆ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ. ನಾನು ಎಲ್ಲೂ ಇದು ನನ್ನ ಯೋಜನೆ ಎಂದು ಹೇಳಿಲ್ಲ. ಈ ಕಾಮಗಾರಿ ಮಂಡ್ಯ ವ್ಯಾಪ್ತಿಯಲ್ಲಿ 58 ಕಿಮೀ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ನಾನು ಕೇಳುತ್ತಿದ್ದೇನೆ. ನನ್ನ ಜಿಲ್ಲೆಯ ಜನರಿಗೆ ಸಮಸ್ಯೆ ಕೊಟ್ಟರೆ ನಾನು ಪಶ್ನೆ ಮಾಡುವ ಅಧಿಕಾರ ಇಲ್ಲವಾ..? ಪ್ರತಾಪ್ ಇದು ಮೈಸೂರಿನ ಕಾಮಗಾರಿ ಅಂತಾರೆ. ಹಾಗಿದ್ದರೆ ಈ ಕಾಮಗಾರಿಯನ್ನು ಆಕಾಶದ ಮೇಲೆ ಕಟ್ಟಿದ್ದಾರಾ..? ಮಂಡ್ಯದ ರೈತರು ಜಮೀನು ಕೊಟ್ಟಿಲ್ವಾ..? ಅವರಿಗೆ ಸಮಸ್ಯೆ ಕೊಟ್ಟುಕೊಂಡು, ಇದು ಮೈಸೂರಿನ ಕಾಮಗಾರಿ ಎಂದರೆ. ನೀವೇನೂ ಆಕಾಶದಲ್ಲಿ ಹಾರಿ ಹೋಗುತ್ತಿಲ್ಲವಲ್ಲ. 58 ಕಿಮೀ ಮಂಡ್ಯ ಮುಖಾಂತರವೇ ಹೋಗಬೇಕು. ನೀವು ಇಲ್ಲಿಯ ಜನಕ್ಕೆ ಅನ್ಯಾಯ ಮಾಡಿ ನಮ್ಮ ಯೋಜನೆ ಅಂದರೆ ಹೇಗೆ..? ನಿಮ್ಮ ಯೋಜನೆ ಆದ್ರೆ ಸರಿಯಾಗಿ ಮಾಡಿ, ಜನರಿಗೆ ಯಾಕ್ ತೊಂದರೆ ಕೊಡುತ್ತೀರಾ..? ಮಂಡ್ಯ ಜನರನ್ನು ಲೆಕ್ಕಿಸದೇ ಇದು ಮೈಸೂರಿಗೆ ಎಂದರೆ ನಾವು ಒಪ್ಪುವುದಕ್ಕೆ ತಯಾರಿಲ್ಲ. ಮೊದಲು ಮಂಡ್ಯ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಿ. ಪ್ರತಾಪ್ ಸಿಂಹ ವ್ಯಾಪ್ತಿ ಎಲ್ಲಿದೆ, ಅವರ ಅಧಿಕಾರ ಎಲ್ಲಿದೆ ಅಲ್ಲಿಗೆ ಸೀಮಿತ ಆಗೋದನ್ನು ಕಲಿಯಬೇಕು ಎಂದರು.

TAGGED:mandyapratap simhaPublic TVraveendra srikantaiahsumalataha ambareeshಪಬ್ಲಿಕ್ ಟಿವಿಪ್ರತಾಪ್ ಸಿಂಹಮಂಡ್ಯರವೀಂದ್ರ ಶ್ರೀಕಂಠಯ್ಯಸುಮಲತಾ ಅಂಬರೀಶ್
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
5 hours ago
01 17
Big Bulletin

ಬಿಗ್‌ ಬುಲೆಟಿನ್‌ 23 April 2026 ಭಾಗ-1

Public TV
By Public TV
6 hours ago
02 17
Big Bulletin

ಬಿಗ್‌ ಬುಲೆಟಿನ್‌ 23 April 2026 ಭಾಗ-2

Public TV
By Public TV
6 hours ago
03 15
Big Bulletin

ಬಿಗ್‌ ಬುಲೆಟಿನ್‌ 23 April 2026 ಭಾಗ-3

Public TV
By Public TV
6 hours ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
7 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
7 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?