ಚಿತ್ರದುರ್ಗ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಆದರಿಂದ ಮೋದಿ ಅಭಿಮಾನಿಯೋರ್ವ ವಿಭಿನ್ನ ರೀತಿಯಲ್ಲಿ ತಮ್ಮ ನಾಯಕನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಹೌದು, ಇಂದು ಮಧ್ಯಾಹ್ನ ಚಿತ್ರದುರ್ಗಕ್ಕೆ ಮೋದಿ ಅವರು ಬರಲಿದ್ದಾರೆ. ಆದರಿಂದ ಅಭಿಮಾನಿ ಮಂಜುನಾಥ್ ತಮ್ಮ ಮೈತುಂಬಾ ಹುಲಿವೇಷದ ಬಣ್ಣ ಬಳಿದುಕೊಂಡು ಮೋದಿ ಎಂದು ಬೆನ್ನ ಮೇಲೆ ಬರೆಸಿಕೊಂಡು, ಪ್ರಧಾನಿಯನ್ನು ಸ್ವಾಗತಿಸಲು ರೆಡಿಯಾಗಿ ಅಭಿಮಾನ ಮೆರೆದಿದ್ದಾರೆ.
ಚಿತ್ರದುರ್ಗದ ಕೆಳಗೋಟೆ ನಿವಾಸಿಯಾದ ಮಂಜುನಾಥ್ ಮೋದಿ ಅವರ ಕಟ್ಟಾ ಅಭಿಮಾನಿ. ಆದರಿಂದ ತಮ್ಮ ಊರಿಗೆ ಮೋದಿ ಬರುತ್ತಿರುವುದಕ್ಕೆ ಫುಲ್ ಖುಷ್ ಆಗಿ, ಹುಲಿವೇಷ ಧರಿಸಿ ನಗರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಅಭಿಮಾನಿಯನ್ನು ಕಂಡವರು ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.