ಹಾವೇರಿ: ಸಿಂದಗಿ ಹಾಗೂ ಹಾನಗಲ್ ಉಪಚುನಾವಣಾ ಕಣ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ಮುಂದುವರಿದಿದೆ. ವಾಗ್ದಾಳಿ ಭರದಲ್ಲಿ ತಾವು ಮಾಡಿದ ತಪ್ಪಿನ ಅರಿವಾದ ನಂತರ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಬಿಜೆಪಿ ಜೊತೆ ಕ್ಷಮೆ ಕೇಳಿದ್ದಾರೆ.
ಹೌದು. ಹಾನ್ಗಲ್ ಉಪಚುನಾವಣೆಯ ಪ್ರಚಾರದ ಭರದಲ್ಲಿ ಜಮೀರ್ ಅವರು ಬಿಜೆಪಿ ವಿರುದ್ಧ ಅವಾಚ್ಯ ಪದ ಬಳಸಿದ್ದರು. ಆದರೆ ಸಂಜೆ ವೇಳೆ ತಮ್ಮ ತಪ್ಪನ್ನು ಅರಿತ ಜಮೀರ್ ಬಿಜೆಪಿಗೆ ಕ್ಷಮೆ ಕೇಳಿದ್ದಾರೆ.
ಜಮೀರ್ ಹೇಳಿದ್ದೇನು..?
ಹಾನಗಲ್ ನರೇಗಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಜಮೀರ್ ಅವರು, ಇಲ್ಲಿಯವರೆಗೆ ಬಿಜೆಪಿಯವರು ನಾವು ಇಂತಹ ಕೆಲಸ ಮಾಡಿದ್ದೇವೆ ನಮಗೆ ವೋಟು ಕೊಡಿ ಅಂತ ಕೇಲ್ಲ. ಬದಲಾಗಿ ಬರೀ ಜಾತಿ.. ಹಿಂದೂ, ಮುಸ್ಲಿಂ ಅಂತ ಮು… ಬರೀ ಅದೇ ಎಂದು ಆಕ್ರೋಶದ ಧ್ವನಿಯಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಇದನ್ನೂ ಓದಿ: JDSಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ: ದಿನೇಶ್ ಗುಂಡೂರಾವ್
ಕ್ಷಮೆ ಕೇಳಿದ ಶಾಸಕ:
ಇದಾದ ಬಳಿಕ ಸಂಜೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಮೀರ್, ಗೊತ್ತಿಲ್ಲ. ಬೇಕೂಂತ ಹೇಳಿಲ್ಲ. ಮಾತಿನ ಭರದಲ್ಲಿ ಹೇಳಿರಬಹುದು. ನಾನು ಆ ಪದ ಬಳಕೆ ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ರಾಜಕಾರಣಿಗಳು ಅಂತಹ ಪದವನ್ನು ಉಪಯೋಗಿಸಬಾರದು. ನಾನು ಹೇಳಿದ್ದೀನಿ ಅಂತ ನನಗೆ ಗೊತ್ತಿಲ್ಲ, ನೀವು ಹೇಳಿದ ನಂತರವೇ ನನಗೆ ಗೊತ್ತಾಗಿರೋದು. ಒಂದು ವೇಳೆ ಆ ರೀತಿ ನಾನು ಹೇಳಿದ್ದರೆ ಬಿಜೆಪಿ ಜೊತೆ ಕ್ಷಮೆ ಕೇಳುತ್ತೇನೆ ಎಂದು ಜಮೀರ್ ತಿಳಿಸಿದರು. ಇದನ್ನೂ ಓದಿ: ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ತಾಯಿ ದ್ರೋಹಿಗಳು: ಸಿದ್ದರಾಮಯ್ಯ