ಚಾಮರಾಜನಗರ: ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ ಕಲಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮೀಸಲಾತಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌಡ ಲಿಂಗಾಯತ ಸಮುದಾಯ ಒಂದಾಗಿರುವುದು ಸಂತದ ವಿಚಾರವಾಗಿದೆ. ನಮ್ಮ ಸಮುದಾಯ ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿದೆ. ನೀವೆಲ್ಲರೂ ಇಂದು ಪ್ರತಿಜ್ಞೆ ಮಾಡಿದ್ದೀರಾ. ಯಾರಾದರೂ ಎರಡು ಸಾವಿರ ಕೊಟ್ರೆ ಮತವನ್ನು ಅವರಿಗೆ ಹಾಕಬೇಡಿ. ದುಡ್ಡು ತಗೊಂಡು ಯಾರು ಕೆಲಸ ಮಾಡಿದ್ದಾರೆ ಅವರಿಗೆ ನಿಮ್ಮ ಮತವನ್ನು ಹಾಕಿ ಎಂದು ಸಲಹೆ ನೀಡಿದರು.ಇದನ್ನೂ ಓದಿ:ಅರಗ ಜ್ಞಾನೇಂದ್ರಗೆ ಅಲ್ಪನಿಗೆ ಐಶ್ವರ್ಯ ಸಿಕ್ಕ ಹಾಗೇ ಆಗಿದೆ: ಬಿ.ಕೆ ಸಂಗಮೇಶ್
ಅತ್ಯಂತ ಒಳ್ಳೆ ಸಮಯದಲ್ಲಿ ಹೋರಾಟ ಮಾಡುತ್ತಿದ್ದೇವೆ. 18 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತೆ. ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ ಕಲಸಿಲಾಗುವುದು. ಇಂದು, ನಾಳೆ, ಸಂಜೆ ಶೀಘ್ರವೇ ಕ್ಯಾಬಿನೆಟ್ನಲ್ಲಿ ಚರ್ಚೆ ಅಂಥೆಲ್ಲಾ ಕಾಲಾಹರಣ ಮಾಡಬೇಡಿ. 18 ತಿಂಗಳುಗಳ ಕಾಲ ನಿರಂತರ ಹೋರಾಟ ಮಾಡಿದ್ದು, ನಾನು ಈಗಾಗಲೇ ಮೀಸಲಾತಿ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಮೀಸಲಾತಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ:ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳು ಯಾರೇ ಆಗಿರಲಿ ಕಠಿಣ ಕ್ರಮ: ಸಿಎಂ