ಬೆಂಗಳೂರು: ಸಚಿವ ಎಚ್ ಡಿ ರೇವಣ್ಣ ಆಪ್ತರೊಬ್ಬರು ಕೆಐಎಡಿಬಿ ಮೂಲಕ ಕೈಗಾರಿಕೆಗಾಗಿ ಭೂಮಿ ಪಡೆದು ಬಹು ಅಂತಸ್ತಿನ ಕಟ್ಟಡವನ್ನು ಕಟ್ಟಿರೋ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.
ಹೌದು. ಸಚಿವರ ಆಪ್ತ ಮಂಜೇ ಗೌಡ ಎಂಬವರು ಸುಮಾರು ಎರಡು ಎಕರೆಯಷ್ಟು ಜಮೀನನ್ನ ಕೈಗಾರಿಕೆಗೆ ಅಂತ ಪಡೆದು ಬೃಹತ್ ಸ್ಕೂಲ್ ಕಟ್ಟಿ ಇದೀಗ ಪೇಚಿಗೆ ಸಿಲುಕಿದ್ದಾರೆ.
- Advertisement 2
ಏನಿದು ಪ್ರಕರಣ?:
ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಜಾಗದಲ್ಲಿ ಕಾಂಕ್ರೀಕ್ ಪ್ರಾಡಕ್ಟ್ನ ಕೈಗಾರಿಕೆ ನಿರ್ಮಾಣವಾಗ ಬೇಕಿತ್ತು. ಯಾಕಂದ್ರೆ 1992 ರಲ್ಲಿ ಕೆಐಎಡಿಬಿ ಕೈಗಾರಿಕೆ ನಿರ್ಮಾಣಕ್ಕೆ ಅಂತ ರವಿಶಂಕರ್ ಗೌಡ ಅವರಿಗೆ ಜಮೀನು ಮಂಜೂರು ಮಾಡಿತ್ತು. ಆದ್ರೆ ರವಿಶಂಕರ್ ಗೌಡ ಯಾವುದೇ ಕೈಗಾರಿಕೆ ನಿರ್ಮಿಸದೇ 2004 ರಲ್ಲಿ ಇದೇ ಜಮೀನನ್ನ ರೇವಣ್ಣ ಆಪ್ತ ಮಂಜೇಗೌಡರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ.
- Advertisement 3
- Advertisement 4
ಮಂಜೇಗೌಡ ಕೂಡ ಕೈಗಾರಿಗೆ ನಡೆಸುವ ಬದಲು ಸ್ಕೂಲ್ ಕಟ್ಟಿದ್ರು. ಸುತ್ತಮುತ್ತ ಕೈಗಾರಿಕೆ ಪ್ರದೇಶವಾಗಿರೋದ್ರಿಂದ ಮಕ್ಕಳ ಜೀವಕ್ಕೆ ಅಪಾಯವಿದೆ. ಮಕ್ಕಳ ಹಕ್ಕನ್ನ ರಕ್ಷಿಸಿ ಎಂದು ಮಕ್ಕಳ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ದೂರು ನೀಡಿದ್ರು. ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಸ್ಥಳ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ. ಕೈಗಾರಿಕೆ ಮಾಡಬೇಕಾದ ಜಾಗದಲ್ಲಿ ಶಾಲೆ ಹೇಗೆ ಕಟ್ಟಿದ್ದೀರಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.
1,300 ಮಕ್ಕಳ ಜೀವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಕ್ಕಳ ಹಕ್ಕು ಆಯೋಗ, ಇತ್ತ ಬಿಬಿಎಂಪಿ, ಬಿಡಿಎ, ಶಿಕ್ಷಣ ಇಲಾಖೆಗೆ ನೊಟೀಸ್ ನೀಡಿದೆ. ಈ ಶಾಲೆಯ ಮಾಲೀಕ ಡಾ. ಮಂಜೇಗೌಡ ಮೂಲತಃ ಹಾಸನದವರಾಗಿದ್ದಾರೆ. ಪಿಡಬ್ಲುಡಿ ಎಂಜಿನಿಯರ್ ಆಗಿರುವ ಇವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲಮಂಡಳಿ ಬೋರ್ಡ್ ಮೆಂಬರ್ ಕೂಡ ಆಗಿದ್ರು. ಇದೆಲ್ಲಾ ಪ್ರಭಾವ ಬಳಸಿಯೇ ಇಷ್ಟೆಲ್ಲಾ ಅಕ್ರಮ ನಡೆಸಿದ್ದಾರೆಂದು ಆರ್ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಆರೋಪ ಮಾಡಿದ್ದಾರೆ.