ಚಿಕ್ಕಮಗಳೂರು: 21 ವರ್ಷಗಳ ಬಳಿಕ ಕಾಫಿನಾಡಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವದಲ್ಲಿ ಸಚಿವ ಸಿ.ಟಿ ರವಿ ಮನಸ್ಸೋ ಇಚ್ಛೆ ಭರ್ಜರಿ ಕುಣಿದು ಕುಪ್ಪಳಿಸಿದ್ದಾರೆ.
ಶುಕ್ರವಾರ ಸಂಜೆ 6.30ಕ್ಕೆ ಆರಂಭವಾದ ಕಾರ್ಯಕ್ರಮ 10.30ರ ವೇಳೆಗೆ ಮುಗಿಯುತ್ತಿದ್ದಂತೆ ಕೊನೆಗೆ ಸಚಿವರು ಮಕ್ಕಳು ಹಾಗೂ ಸ್ಥಳಿಯರ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಡೊಳ್ಳಿನ ಒಂದೊಂದು ಹೊಡೆತಕ್ಕೂ ಒಂದೊಂದು ಸ್ಟೆಪ್ ಹಾಕ್ತಾ ಡೊಳ್ಳಿನ ಸದ್ದು ಜೋರಾಗ್ತಿದ್ದಂತೆ ಸಿ.ಟಿ ರವಿಯ ಕುಣಿತವೂ ಜೋರಾಗಿದೆ.
ಸಿ.ಟಿ.ರವಿ ಸಾಕಷ್ಟು ಜಾಗದಲ್ಲಿ ಹಲವು ಬಾರಿ ಕುಣಿದಿದ್ದಾರೆ. ಆದರೆ ಡೊಳ್ಳಿನ ಒಂದೊಂದು ಶಬ್ಧಕ್ಕೂ ಒಂದೊಂದು ಸ್ಟೆಪ್ ಹಾಕಿ ಮನಸ್ಸೋ ಇಚ್ಛೆ ಕುಣಿದಿದ್ದು ಇದೇ ಮೊದಲು ಎಂದು ಅನಿಸುತ್ತೆ. ಸಾವಿರಾರು ಜನರ ಎದುರೇ ಸಿ.ಟಿ ರವಿ ಎದ್ದು ಕುಣಿದು ಕುಪ್ಪಳಿಸಿದ್ದಾರೆ.
ಸಚಿವರ ಕುಣಿತ ನೋಡ್ತಿದ್ದಂತೆ ಸುಮ್ಮನೆ ಕೂರಲಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಕೂಡ ಸಚಿವರಿಗೆ ಸಾಥ್ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಸ್ಥಳಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಸಚಿವ ಸಿ.ಟಿ ರವಿಯೊಂದಿಗೆ ಕುಣಿದಿದ್ದಾರೆ.