ವಿಜಯಪುರ: ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ್ದು, ರಾತ್ರಿ 8:21ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿರುವ ಬಗ್ಗೆ ಜನಸಾಮಾನ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ವಿಜಯಪುರ ನಗರದ ಬಸವನಗರ, ಗಾಂಧಿನಗರ, ಗ್ಯಾಂಗ್ ಬಾವಡಿ ಬಡಾವಣೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಹಿನ್ನೆಲೆ ಮನೆಯಿಂದ ಜನರು ಭಯಭೀತರಾಗಿ ಹೊರಬಂದಿದ್ದಾರೆ. ಭಾರೀ ಶಬ್ದ ಹಾಗೂ ಭೂಮಿ ಕಂಪನದ ಹಿನ್ನೆಲೆ ಮನೆಯಲ್ಲಿನ ಸಾಮಾಗ್ರಿಗಳು ಕೆಳಗೆ ಬಿದ್ದಿವೆ. ಇದನ್ನೂ ಓದಿ: ಷರತ್ತಿನೊಂದಿಗೆ ಗಣೇಶೋತ್ಸವಕ್ಕೆ BBMP ಗ್ರೀನ್ ಸಿಗ್ನಲ್ – ಈದ್ಗಾ ಮೈದಾನ ಗಣಪನಿಗೆ ಸಿಕ್ಕಿಲ್ಲ ಪರ್ಮಿಷನ್
ಜಿಲ್ಲೆಯ ಬಸವನಬಾಗೇವಾಡಿ, ಇಂಡಿ ವಿಜಯಪುರ, ನಿಡಗುಂದಿ ತಾಲೂಕಿನಲ್ಲೂ ಕಂಪನದ ಅನುಭವಾಗಿದ್ದು, ಈ ಬಗ್ಗೆ ಜನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನರ್ಸ್, ಫಾರ್ಮಾಸಿಸ್ಟ್ ಜೋಡಿಯ ಟ್ಯಾಬ್ಲೆಟ್ ವೆಡ್ಡಿಂಗ್ ಕಾರ್ಡ್ ವೈರಲ್