ಹಾವೇರಿ: ಮಾನಸಿಕ ಅಸ್ವಸ್ಥನೋರ್ವ ಜಿಲ್ಲಾಸ್ಪತ್ರೆಯ ಒಂದನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಗಂಗಪ್ಪ ಲಮಾಣಿ(38) ಆತ್ಮಹತ್ಯೆಗೆ ಯತ್ನಸಿದ ಮಾನಸಿಕ ಆಸ್ವಸ್ಥ. ಹಾವೇರಿ ತಾಲೂಕಿನ ಗುತ್ತಲ ತಾಂಡಾದ ನಿವಾಸಿ ಎನ್ನಲಾಗಿದ್ದು, ಕಳೆದ ಕೆಲವು ತಿಂಗಳಿನಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ನಾಲ್ಕೈದು ದಿನಗಳಿಂದ ವೈದ್ಯರು ಸೂಚಿಸಿದ ಮಾತ್ರೆಗಳನ್ನ ತೆಗೆದುಕೊಂಡಿರಲಿಲ್ಲ.
ಶುಕ್ರವಾರ ಜಿಲ್ಲಾಸ್ಪತ್ರೆಯಲ್ಲಿ ಮೊದಲನೇ ಮಹಡಿಯಲ್ಲಿರೋ ವೈದ್ಯರ ಬಳಿ ತೋರಿಸಲು ಬಂದಾಗ ಗಂಗಪ್ಪ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಡಿಯಿಂದ ಬಿದ್ದಿದ್ದರಿಂದ ಕೈ ಮುರಿದಿದೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಗಂಗಪ್ಪ ಲಮಾಣಿ ಅಪಾಯದಿಂದ ಪಾರಾಗಿದ್ದಾರೆ.