ಹಾವನ್ನು ಪ್ರೀತಿಸುವವರು ಮತ್ತು ಅವುಗಳನ್ನು ಸಾಕುವವರು ಕೆಲವರು ಮಾತ್ರ, ಉಳಿದಂತೆ ಎಲ್ಲರೂ ಭಯಭೀತರಾಗುತ್ತಾರೆ. ಎಷ್ಟೋ ಮಂದಿಗೆ ಹಾವನ್ನು ಟಿವಿ ಅಥವಾ ವೀಡಿಯೋಗಳಲ್ಲಿ ನೋಡುವುದಕ್ಕೆ ಭಯಪಡುತ್ತಾರೆ. ಒಂದು ಬಾರಿ ಹಾವು ಕಚ್ಚಿದರೆ ಮನುಷ್ಯ ಬದುಕುಳಿಯುವುದೇ ಕಷ್ಟ. ಆದರೆ ಇಲ್ಲೊಬ್ಬ ವ್ಯಕ್ತಿ ಕಾಳಿಂಗ ಸರ್ಪ ಹಣೆಗೆ ಚುಂಬಿಸಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
View this post on Instagram
ಈ ವೀಡಿಯೋವನ್ನು ಸೌರಭ್ ಜಾಧವ್ ಎಂಬವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಭಾರತೀಯ ವನ್ಯಜೀವಿ ಸಂರಕ್ಷಣಾವಾದಿ ಮತ್ತು ಉರಗ ತಜ್ಞ ವಾವಾ ಸುರೇಶ್ (Vava Suresh) ಕಾಳಿಂಗ ಸರ್ಪ (Cobra) ಹತ್ತಿರ ಹೋಗುತ್ತಾರೆ. ನಂತರ ಹಾವು ಗಾಬರಿಯಾಗದಂತೆ ನಿಧಾನವಾಗಿ ಅದರ ಹಣೆಗೆ ಚುಂಬಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮನೆಬಿಟ್ಟು ಬಂದಿದ್ದ ಯುವತಿಗೆ ಆಶ್ರಯ ನೀಡೋದಾಗಿ ಕರೆದೊಯ್ದು ಅತ್ಯಾಚಾರ!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 16 ಸಾವಿರ ಮಂದಿ ವೀಕ್ಷಿಸಿದ್ದು, ವಾವಾ ಸುರೇಶ್ ಧೈರ್ಯಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಕಾಮೆಂಟ್ಗಳ ಸುರಿಮಳೆಯೇ ಹರಿದುಬರುತ್ತಿದೆ. ಇದನ್ನೂ ಓದಿ: ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ