ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ನವೆಂಬರ್ ತಿಂಗಳ ಆರಂಭದಲ್ಲೇ ಮತ್ತೆ ರಾಜ್ಯಕ್ಕೆ ಲಗ್ಗೆಯಿಡುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಲವೆಡೆ ಮಳೆ ಸುರಿಯುವ ಸಾಧ್ಯತೆಯಿದ್ದು, ಕೆಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಭಾಗಗಳಲ್ಲಿ ಬಿಸಿಲಿನ ತಾಪಮಾನ ಕೊಂಚ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಮುಂಜಾನೆ ಹಾಗೂ ರಾತ್ರಿ ವೇಳೆ ಚುಮುಚುಮು ಚಳಿ ಮುಂದುವರಿಯಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ವಿಜಯಪುರ, ಕಾರವಾರ ಹಾಗೂ ಉಡುಪಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 32-24
ಶಿವಮೊಗ್ಗ: 29-19
ಬೆಳಗಾವಿ: 30-18
ಮೈಸೂರು: 26-19
ಮಂಡ್ಯ: 26-19
ಮಡಿಕೇರಿ: 24-17
ರಾಮನಗರ: 26-19
ಹಾಸನ: 26-18
ಚಾಮರಾಜನಗರ: 26-19
ಚಿಕ್ಕಬಳ್ಳಾಪುರ: 22-17
ಕೋಲಾರ: 24-19
ತುಮಕೂರು: 25-19
ಉಡುಪಿ: 32-24
ಕಾರವಾರ: 32-24
ಚಿಕ್ಕಮಗಳೂರು: 26-18
ದಾವಣಗೆರೆ: 28-20
ಚಿತ್ರದುರ್ಗ: 27-19
ಹಾವೇರಿ: 30-20
ಬಳ್ಳಾರಿ: 29-21
ಗದಗ: 30-19
ಕೊಪ್ಪಳ: 29-21
ರಾಯಚೂರು: 29-21
ಯಾದಗಿರಿ: 31-21
ವಿಜಯಪುರ: 32-20
ಬೀದರ್: 29-18
ಕಲಬುರಗಿ: 31-20
ಬಾಗಲಕೋಟೆ: 32-21