ಲೋಕ ಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮುಕ್ತಾಯ
ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ಗೆಹ್ಲೋಟ್
19 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಗೈರು
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹ್ಮದ್
ಅಲ್ಲಾಹ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ದಾವಣಗೆರೆ ಉಪಚುನಾವಣೆಯಿಂದ ವಿವಾದ
ಪಕ್ಷ ವಿರೋಧಿ ಆರೋಪ ಹೊತ್ತಿದ್ದ ಜಮೀರ್
ಹೈಕಮಾಂಡ್ ಕ್ಷಮೆಯಾಚನೆ ಬಳಿಕ ಸಚಿವ ಸ್ಥಾನ
ಸಿದ್ದು ಸಂಪುಟದಲ್ಲೂ ಸಚಿವರಾಗಿದ್ದ ಜಮೀರ್
ವಿಜಯಾನಂದ ಕಾಶಪ್ಪನವರ್ ಪ್ರಮಾಣ ವಚನ ಸ್ವೀಕಾರ
ಕೂಡಲ ಸಂಗಮದೇವ, ಪಂಚಮ ಪೀಠ, ಬುದ್ಧ ಬಸವ, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ
ಲಿಂಗಾಯತ ನಾಯಕನಾಗಿರುವ ಕಾಶಪ್ಪನವರ್
2 ಬಾರಿ ಶಾಸಕರಾಗಿ ಆಯ್ಕೆ
ಪಂಚಮಸಾಲಿ 2A ಹೋರಾಟದಲ್ಲಿ ಮುಂಚೂಣಿ
ಪ್ರಮಾಣ ವಚನ ಸ್ವೀಕರಿಸಿದ ಶಿವರಾಜ್ ತಂಗಡಗಿ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಭೋವಿ ಸಮುದಾಯದ ಪ್ರಭಾವಿ ನಾಯಕ
3ನೇ ಬಾರಿ ಮಂತ್ರಿಯಾಗುವ ಅದೃಷ್ಟ
3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಂಗಡಗಿ
ಸಿದ್ದು ಸಂಪುಟದಲ್ಲೂ ಸಚಿವರಾಗಿದ್ದ ತಂಗಡಗಿ
ಈ ಹಿಂದೆ ಯಡಿಯೂರಪ್ಪ ಸಂಪುಟದಲ್ಲೂ ಸಚಿವ
ಶಿವಲಿಂಗೇಗೌಡ ಪ್ರಮಾಣ ವಚನ ಸ್ವೀಕಾರ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಹಾಸನದ ಒಕ್ಕಲಿಗ ನಾಯಕ
ಸರಳತೆಗೆ ಮತ್ತೊಂದು ಹೆಸರು
4 ಬಾರಿ ಶಾಸಕರಾಗಿ ಆಯ್ಕೆ
ಸಿಎಂ-ಡಿಸಿಎಂ ಕಾಲು ಮುಟ್ಟಿ ನಮಸ್ಕಾರ ಮಾಡಿದ ಶಿವಲಿಂಗೇಗೌಡ
ನೂತನ ಸಚಿವರಾಗಿ ಸಂತೋಷ್ ಲಾಡ್ ಪ್ರಮಾಣ ವಚನ
ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸಂತೋಷ್ ಲಾಡ್
ಸಿದ್ದು ಸಂಪುಟದಲ್ಲಿ ಸಚಿವರಾಗಿದ್ದ ಲಾಡ್
ಯುವ ಸಚಿವರು ಅಂತಲೇ ಖ್ಯಾತಿ
ಸಂಕಷ್ಟದ ಸಮಯದಲ್ಲಿ ಪಕ್ಷಕ್ಕೆ ನೆರವು
3 ಬಾರಿ ಶಾಸಕರಾಗಿರುವ ಸಂತೋಷ್ ಲಾಡ್
ರುದ್ರಪ್ಪ ಲಮಾಣಿ ಪ್ರಮಾಣ ವಚನ ಸ್ವೀಕಾರ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಲಮಾಣಿ
ದಲಿತ ನಾಯಕರಾಗಿರುವ ರುದ್ರಪ್ಪ ಲಮಾಣಿ
ಬಂಜಾರ ಸಮುದಾಯದ ಏಕೈಕ ನಾಯಕ
ಈ ಹಿಂದೆ ಕೈತಪ್ಪಿದ್ದ ಸಚಿವ ಸ್ಥಾನ
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪ್ರಮಾಣ ವಚನ
3 ಬಾರಿ ಶಾಸಕರಾಗಿ ಸೇವೆ
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಿಜ್ವಾನ್ ಅರ್ಷದ್
ಮುಸ್ಲಿಂ ಸಮುದಾಯದ ನಾಯಕ
2 ಬಾರಿ ಶಾಸಕರಾಗಿ ಆಯ್ಕೆ
ಡಿಕೆಶಿ ಆಪ್ತರಾಗಿರುವ ರಿಜ್ವಾನ್ ಅರ್ಷದ್
2019ರ ಉಪಚುನಾವಣೆಯಲ್ಲಿ ಗೆಲುವು
ಟಿ. ರಘುಮೂರ್ತಿ ಪ್ರಮಾಣ ವಚನ ಸ್ವೀಕಾರ
ದೇವರ ಹೆಸರಿನಲ್ಲಿ ಪ್ರಮಾಣ ವಚನ
ಸುಧಾಕರ್ ನಿಧನದ ಬಳಿಕ ಚಿತ್ರದುರ್ಗಕ್ಕೆ ಸಚಿವ ಸ್ಥಾನ
ST ಸಮುದಾಯಕ್ಕೆ ಸೇರಿದ ನಾಯಕ
3 ಬಾರಿ ಶಾಸಕರಾಗಿ ಆಯ್ಕೆ
ಕ್ಲೀನ್ ಹ್ಯಾಂಡ್ ಅಂತಲೇ ಜನಪ್ರಿಯ
ಯಾವ ಬಣದಲ್ಲೂ ಗುರುತಿಸಿಕೊಳ್ಳದ ಶಾಸಕ
ನೂತನ ಸಚಿವರಾಗಿ ಪುಟ್ಟರಂಗಶೆಟ್ಟಿ ಪ್ರಮಾಣ ವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಉಪ್ಪಾರ ಸಮುದಾಯಕ್ಕೆ ಸೇರಿದ ನಾಯಕ
ಸಿದ್ದರಾಮಯ್ಯ ಜೊತೆ ಉತ್ತಮ ಒಡನಾಟ
ಈ ಹಿಂದೆ ಸಿದ್ದು ಸಂಪುಟದಲ್ಲಿ ಸಚಿವ
ವೃತ್ತಿಯಿಂದ ಕೃಷಿಕ ಹಾಗೂ ಉದ್ಯಮಿ
ನರೇಂದ್ರ ಸ್ವಾಮಿ ಪ್ರಮಾಣ ವಚನ
ಡಾ. ಅಂಬೇಡ್ಕರ್ ಹಾಗೂ ಗಂಗಾಧರ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ವಚನ
ಈ ಹಿಂದೆ ಸಚಿವರಾಗಿದ್ದ ನರೇಂದ್ರ ಸ್ವಾಮಿ
ಮಳವಳ್ಳಿಯ ಪ್ರಭಾವಿ ಶಾಸಕ ನರೇಂದ್ರ ಸ್ವಾಮಿ
ದಲಿತ ಸಮುದಾಯದ ಪ್ರಭಾವಿ ನಾಯಕ
ಪ್ರಮಾಣ ವಚನ ಸ್ವೀಕರಿಸಿದ ಬಿ.ನಾಗೇಂದ್ರ
ದೇವರ ಹೆಸರಿನಲ್ಲಿ ಪ್ರಮಾಣ ವಚನ
ವಾಲ್ಮೀಕಿ ಹಗರಣದಿಂದ ಈ ಹಿಂದೆ ರಾಜೀನಾಮೆ
ಬಳ್ಳಾರಿಯ ಪ್ರಭಾವಿ ರಾಜಕಾರಣಿ
ಈ ಹಿಂದೆ ಉದ್ಯಮಿ ಆಗಿದ್ದ ನಾಗೇಂದ್ರ
ಸತತ 4 ಬಾರಿ ಶಾಸಕರಾಗಿ ಆಯ್ಕೆ
ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ
ಎಸ್ಎಸ್ ಮಲ್ಲಿಕಾರ್ಜುನ ಪ್ರಮಾಣ ವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಲಿಂಗಾಯತ ಪ್ರಭಾವಿ ನಾಯಕ
ಕೊನೆ ಕ್ಷಣದಲ್ಲಿ ಒಲಿದ ಸಚಿವ ಸ್ಥಾನ
ಮಂಕಾಳು ವೈದ್ಯ ಬದಲು ಸಚಿವ ಸ್ಥಾನ
ಮಧು ಬಂಗಾರಪ್ಪ ಪ್ರಮಾಣ ವಚನ ಸ್ವೀಕಾರ
ದೇವರ ಹೆಸರಿನಲ್ಲಿ ಪ್ರಮಾಣ ವಚನ
ಈಡಿಗ ಸಮುದಾಯದ ನಾಯಕ
ಸಿಎಂ ಡಿಕೆ ಜೊತೆ ಉತ್ತಮ ಒಡನಾಟ ಹೊಂದಿರುವ ಮಧು ಬಂಗಾರಪ್ಪ
JDS ಬಿಟ್ಟು ಕಾಂಗ್ರೆಸ್ ಸೇರಿದ್ದ ಮಧು ಬಂಗಾರಪ್ಪ
ಲಕ್ಷ್ಮಣ ಸವದಿ ಪ್ರಮಾಣ ವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಲಕ್ಷ್ಮಣ ಸವದಿ
ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ
4 ಬಾರಿ ಶಾಸಕರಾಗಿರುವ ಸವದಿ
ಪ್ರಮಾಣ ವಚನ ಸ್ವೀಕರಿಸಿದ ಚಲುವರಾಯಸ್ವಾಮಿ
ದೇವರ ಹೆಸರಿನಲ್ಲಿ ಹಾಗೂ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಬಸವರಾಜ್ ರಾಯರೆಡ್ಡಿ ಪ್ರಮಾಣ ವಚನ
6 ಬಾರಿ ಶಾಸಕರಾಗಿರುವ ರಾಯರೆಡ್ಡಿ
ಪ್ರಮಾಣ ವಚನ ಸ್ವೀಕರಿಸಿದ ಕೆ.ಎಸ್ ಬಸವಂತಪ್ಪ
ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ
ಸಿಎಂ-ಡಿಸಿಎಂ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆದ ಬಸವಂತಪ್ಪ
ಹೆಚ್.ಸಿ ಬಾಲಕೃಷ್ಣ ಪ್ರಮಾಣ ವಚನ ಸ್ವೀಕಾರ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಾಲಕೃಷ್ಣ
ಡಿಕೆ ಶಿವಕುಮಾರ್ ಕಾಲಿಗೆ ಮುಟ್ಟಿ ನಮಸ್ಕಾರ ಮಾಡಿದ ಬಾಲಕೃಷ್ಣ
ನೂತನ ಸಚಿವನಾಗಿ ಅಜಯ್ ಸಿಂಗ್ ಪ್ರಮಾಣ ವಚನ
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
3 ಬಾರಿ ಶಾಸಕರಾಗಿದ್ದ ಅಜಯ್ ಸಿಂಗ್
ರಾಜ್ಯಪಾಲರು, ಸಿಎಂ ಡಿಕೆಶಿ, ಡಿಸಿಎಂ ಪರಮೇಶ್ವರ್ ಕಾಲು ಮುಟ್ಟಿ ಆಶೀರ್ವಾದ ಪಡೆದ ಅಜಯ್ ಸಿಂಗ್
ಲೋಕ ಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ
19 ಶಾಸಕರು ಸಚಿವರಾಗಿ ಪ್ರಮಾಣ ವಚನ
ಪ್ರತಿಜ್ಞಾವಿಧಿ ಭೋಧಿಸಲಿರುವ ರಾಜ್ಯಪಾಲ ಗೆಹ್ಲೋಟ್
ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ, ಡಿಸಿಎಂ ಪರಮೇಶ್ವರ್ ಭಾಗಿ
ಪ್ರಸಾದ್ ಅಬ್ಬಯ್ಯಗೆ ಕೈತಪ್ಪಿದ ಸಚಿವ ಸ್ಥಾನ – ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಪ್ರತಿಭಟನೆ
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಆಕ್ರೋಶ
ಹಳೆ ಹುಬ್ಬಳ್ಳಿಯ ಇಂಡಿ ಪಂಪ್ ಸರ್ಕಲ್ನಲ್ಲಿ ರಸ್ತೆ ತಡೆದು ಪ್ರತಿಭಟನೆ
ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು
ಇಂಡಿ ಪಂಪ್ ಸರ್ಕಲ್ನಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ
ಸರ್ಕಾರಿ ಬಸ್ಗೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು
ಬಸ್ಗೆ ಹಾನಿ, ಪ್ರಯಾಣಿಕರಲ್ಲಿ ಆತಂಕ
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರ ಹರಸಾಹಸ
ಸಚಿವ ಸಂಪುಟ ವಿಸ್ತರಣೆ ಬಳಿಕ ಹುಬ್ಬಳ್ಳಿಯಲ್ಲಿ ರಾಜಕೀಯ ಕಾವು ಹೆಚ್ಚಳ
ಗಾಯತ್ರಿ ಶಾಂತೇಗೌಡ ಹೊರತುಪಡಿಸಿ ಎಲ್ಲ 19 ಮಂದಿ ಪ್ರಮಾಣ ವಚನ
1 ಸಚಿವ ಸ್ಥಾನ ಖಾಲಿ ಉಳಿಸಿಕೊಂಡ ಹೈಕಮಾಂಡ್
ಪ್ರಮಾಣ ವಚನಕ್ಕೂ ಮುನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ರುದ್ರಪ್ಪ ಲಮಾಣಿ
ಮಂಕಾಳು ವೈದ್ಯ ಬದಲು ಎಸ್ಎಸ್ ಮಲ್ಲಿಕಾರ್ಜುನ್ ಪ್ರಮಾಣವಚನ
ನಾನು ಹಿರಿಯ ಶಾಸಕ, ಹೈಕಮಾಂಡ್ ಯಾಕೆ ಈ ಶಿಕ್ಷೆ ನೀಡಿದೆ ಗೊತ್ತಿಲ್ಲ: ಟಿಬಿ ಜಯಚಂದ್ರ
ಜನ ರಾಜಕೀಯ ಬಿಟ್ಟು ಹೊರಗೆ ಬನ್ನಿ ಅಂತಿದ್ದಾರೆ. ನಾನು ಹಿರಿಯ ಶಾಸಕ. ಹೈಕಮಾಂಡ್ ಯಾಕೆ ಈ ಶಿಕ್ಷೆ ನೀಡಿದೆ ಗೊತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಯಾವ ರೀತಿಯ ನಿರ್ಧಾರ ಮಾಡುತ್ತಾರೋ ನೋಡೋಣ.
ನನ್ನ ಕ್ಷೇತ್ರದ ಮತದಾರರೇ ಪ್ರಭುಗಳು. ಈಗ ಸಾಕಷ್ಟು ಶಾಸಕರು ನಮ್ಮ ಮನೆ ಬಳಿ ಬರುತ್ತಿದ್ದಾರೆ. ಎಲ್ಲರೂ ಕೂತು ಮಾತನಾಡುತ್ತೇವೆ. ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದ ಟಿಬಿ ಜಯಚಂದ್ರ.
ಜಯಚಂದ್ರ ನಿವಾಸದಲ್ಲಿ ಅಸಮಧಾನಿತ ಶಾಸಕರ ಸಭೆ
ಟಿಬಿ ಜಯಚಂದ್ರ ಮನೆಯಲ್ಲಿ ಎಂಆರ್ ಗೋಪಾಲಕೃಷ್ಣ ಹಾಗು ಅಪ್ಪಾಜಿ ನಾಡಗೌಡ ಉಪಸ್ಥಿತಿ.
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಾಂಗ್ರೆಸ್ ನಾಯಕರು ಗರಂ.
ಬೇಳೂರು ಗೋಪಾಲಕೃಷ್ಣ, ಎಂ ಕೃಷ್ಣಪ್ಪ ಸಹ ಟಿಬಿ ಜಯಚಂದ್ರ ಮನೆ ಕಡೆ ಬರುತ್ತಿದ್ದಾರೆ.
ಅಸಮಾಧಾನಿತ ಶಾಸಕರ ರಾಜೀನಾಮೆ ನಡೆಗೆ ಉತ್ತರಿಸಿದ ಸಿಎಂ
ತಾಳ್ಮೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆ. ಶಾಸಕರು ಹೆಚ್ಚಿದ್ದಾರೆ ಎಲ್ಲರಿಗೂ ಕೊಡಲು ಆಗಲ್ಲ. ಹಿಂದೆ ನನಗೆ ಸಿದ್ದರಾಮಯ್ಯ ಕ್ಯಾಬಿನೆಟ್ ಮಂತ್ರಿ ತಪ್ಪಿತ್ತು. ಆ ಮೇಲೆ ನಾನು ಮಂತ್ರಿ ಆಗಿರಲಿಲ್ಲವಾ? ಹಾಗೇ ಮುಂದೆ ಎಲ್ಲರಿಗೂ ಅವಕಾಶ ಕೊಡುವ ಕೆಲಸ ಮಾಡುತ್ತೇವೆ. ಇವಾಗ ನಾನು ಲೋಕಭವನಕ್ಕೆ ಹೋಗುತ್ತಿದ್ದೇನೆ. ಅಸಮಾಧಾನಿತ ಶಾಸಕರ ರಾಜೀನಾಮೆ ನಡೆಗೆ ಉತ್ತರಿಸಿದ ಹೋದ ಸಿಎಂ ಡಿಕೆಶಿ.
ರಾಜೀನಾಮೆ ಕೊಡುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿದವ್ರಿಗೆ ಹೈಕಮಾಂಡ್ ಶಾಕ್
ಸಚಿವ ಸ್ಥಾನದ ವಂಚಿತರಿಂದ ರಾಜೀನಾಮೆ ಬೆದರಿಕೆ
ರಾಜೀನಾಮೆ ಬೆದರಿಕೆಯನ್ನ ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್
ರಾಜೀನಾಮೆ ಕೊಡುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿದವರಿಗೆ ಶಾಕ್ ಕೊಟ್ಟ ಹೈಕಮಾಂಡ್
ಯಾರಾದ್ರೂ ರಾಜೀನಾಮೆ ಕೊಟ್ರೆ ಸ್ವೀಕಾರ ಮಾಡುವಂತೆ ಸೂಚನೆ
ಸಚಿವ ಸ್ಥಾನ ವಂಚಿತರಿಗೆ ಬೇರೆ ಬೇರೆ ಸ್ಥಾನ ಕೊಡುತ್ತೇವೆ
ಅದನ್ನು ಮೀರಿ ರಾಜೀನಾಮೆ ಕೊಟ್ರೆ ರಾಜೀನಾಮೆ ಸ್ವೀಕರಿಸುವಂತೆ ಸಿಎಂಗೆ ಸೂಚನೆ
ರಾಜೀನಾಮೆ ಕೊಡಿ ಅಂದ್ರೆ ಕೊಡ್ತೇನೆ: ಶಾಸಕ ಸಂಗಮೇಶ್ ಆಕ್ರೋಶ
ಬರೀ ಬಾಯಲ್ಲಿ ಹೇಳೋದು ಅಷ್ಟೇ. ಸೀನಿಯರ್ಸ್ಗೆ ಶಿವಮೊಗ್ಗದಲ್ಲಿ ಕೊಟ್ಟಿಲ್ಲ. ಬೇರೆ ಪಕ್ಷದಿಂದ ಬಂದು ಒಂದು ಬಾರಿ ಗೆದ್ದವ್ರಿಗೆ ಕೊಟ್ಟಿದ್ದಾರೆ. ಬಿಜೆಪಿಯವರು ಐವತ್ತು ಕೋಟಿ ಕೊಡ್ತೀವಿ, ಸಚಿವ ಸ್ಥಾನ ಕೊಡ್ತಿವಿ ಅಂದ್ರೂ ಹೋಗಿಲ್ಲ. ಕ್ಷೇತ್ರದಲ್ಲಿ ಯಾರಿಗೂ ಉತ್ತರ ಕೊಡಲು ಆಗುತ್ತಿಲ್ಲ. ಮನಸ್ಸಿಗೆ ನೋವು ಆಗಿದೆ.
ನಾಳೆ ಭದ್ರಾವತಿ ಕ್ಷೇತ್ರದಲ್ಲಿ ಹೋಗಿ ಅವರ ಬಳಿ ಹೋಗಿ ಚರ್ಚೆ ಮಾಡುತ್ತೇನೆ. ರಾಜೀನಾಮೆ ಕೊಡಿ ಅಂದ್ರೆ ಕೊಡ್ತೇನೆ. ಕಳೆದ ಬಾರಿ ಕೊಟ್ಟವ್ರಿಗೆ ಕೊಟ್ಟಿದ್ದಾರೆ. ಹೈಕಮಾಂಡ್ಗೆ ಕಿವಿ ಊದಿದವರಿಗೆ ಕೊಡುತ್ತಾರೆ. ನೊಂದ ಶಾಸಕರು ನಾವು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್ಗೆ 136 ಸೀಟ್ ಬಂದಿದೆ ಅಂತ ಹಮ್ಮು ಬಂದಿದೆ. ಹತ್ತು ಸೀಟ್ ಹೋದ್ರೆ ಏನು ಆಗಲ್ಲ ಅಂತ ಅಂದುಕೊಂಡಿದ್ದಾರೆ. ಮುಂದೆ ಗೊತ್ತಾಗುತ್ತೆ. ಪ್ರಾಮಾಣಿಕ ವ್ಯಕ್ತಿಯನ್ನ ಕಡೆಗಣಿಸಿದ್ದಾರೆ. ಇದು ಬೆದರಿಕೆ ಅಲ್ಲಾ, ರಾಜೀನಾಮೆ ಕೊಟ್ಟೇ ಕೊಡುತ್ತೇನೆ.
ಲೋಕಭವನಕ್ಕೆ ಹೋಗದ ಹೊಸ ಪಟ್ಟಿ
ಹಳೆ ಪಟ್ಟಿ ಬೇಡ ಎಂದು ಹೇಳಿರುವ ಸಿಎಂ ಡಿಕೆಶಿ
ಲೋಕಭವನದಲ್ಲಿ ಅಧಿಕೃತಗೊಳ್ಳದ ಸಚಿವರ ಪಟ್ಟಿ
ಹೊಸ ಪಟ್ಟಿ ಕಳುಹಿಸಿದ ಬಳಿಕವಷ್ಟೇ ಅಧಿಕೃತ ಮುದ್ರೆ
ವಿಧಾನಸೌಧದಲ್ಲಿ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದ ಯಶವಂತರಾಯ ಗೌಡ
ಕಾಂಗ್ರೆಸ್ ಅಲ್ಲಿ ನಿಷ್ಠೆ ಪ್ರಾಮಾಣಿಕತೆಗೆ ಬೆಲೆ ಇಲ್ಲ.
2023ರ ಪೂರ್ವದಲ್ಲೇ ನನಗೆ ಕರೆದು ಭರವಸೆ ಕೊಟ್ಟಿದ್ದಾರೆ.
ನಾನು ಬಿಟ್ಟು ಹೋಗ್ತಿಲ್ಲ, ಅವರೇ ನನ್ನ ಬಿಟ್ಟಿದ್ದಾರೆ.
ಕಳೆದ ಬಾರಿಯೇ ನಿಗಮ ಮಂಡಳಿ ಕೊಡ್ತೀವಿ ಅಂದ್ರು, ನಾನು ಬೇಡ ಅಂದೆ.
ನಾನು ರಾಜೀನಾಮೆ ಕೊಟ್ಟಿದ್ದೀನಿ, ಅದನ್ನ ಅಂಗೀಕಾರ ಮಾಡಬೇಕು.
ಯಾವುದೇ ಕಾರಣಕ್ಕೂ ನಾನು ವಾಪಸ್ ಪಡೆಯಲ್ಲ.
ಯಾವುದೇ ಕಾರಣಕ್ಕೂ ನಾನು ಶಾಸಕನಾಗಿ ಮುಂದುವರೆಯಲ್ಲ.
ಜಿಲ್ಲೆಯ ರಾಜಕಾರಣ ಬೀದಿಗೆ ಬಂದಿದೆ.
ಗಾಯತ್ರಿ ಶಾಂತೇಗೌಡರಿಗೆ ಸಚಿವ ಸ್ಥಾನ ಕೊಟ್ಟಿದ್ದು ಅಸಮಾಧಾನ ತಂದಿದೆ: ಶಾಸಕ ಬಿಜಿ ಗೋವಿಂದಪ್ಪ
ನಾಲ್ಕು ಬಾರಿ ಗೆದ್ದು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಗೋವಿಂದಪ್ಪ.
ಇನ್ನೂ ಎಂಎಲ್ಸಿಯಾಗಿ ಪ್ರಮಾಣವಚನ ಸ್ವೀಕಾರ ಮಾಡದವರಿಗೆ ಮಂತ್ರಿ ಸ್ಥಾನ ಕೊಡುತ್ತಿದ್ದಾರೆ.
ನಮಗೆ ಸಚಿವ ಸ್ಥಾನ ಕೊಡದಿದ್ರೂ ಪರವಾಗಿರಲಿಲ್ಲ, ಆದರೆ ಗಾಯತ್ರಿ ಶಾಂತೇಗೌಡರಿಗೆ ಸಚಿವ ಸ್ಥಾನ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ಯಾರಿಗೆ ಸಿಕ್ಕರೂ ನಾವು ಸಮ್ಮತಿ ಸೂಚಿಸಿದ್ದೆವು.
ಶಾಸಕ ರಘುಮೂರ್ತಿಯವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಖುಷಿಯಿದೆ.
ಗಾಯತ್ರಿ ಶಾಂತೇಗೌಡರಿಗೆ ಕೊಟ್ಟಿದ್ದು ಅಸಮಾಧಾನ ತಂದಿದೆ.
ರಾಜೀನಾಮೆ ಬೆದರಿಕೆ ಹಾಕಿಲ್ಲ
ನನಗೆ ಗೊತ್ತಿಲ್ಲ. ಸಿಎಂ ಹೇಳಿದ್ರು, ಕೊನೆಗಳಿಗೆಯಲ್ಲಿ ಬದಲಾಗಿರಬೇಕು ನೀನು ಬಾ ಅಂದರು. ಯಾಕೆ ಅನ್ನೋದು ಗೊತ್ತಿಲ್ಲ. ನಾನು ರಾಜೀನಾಮೆ ಬೆದರಿಕೆ ಹಾಕಿಲ್ಲ. ಯಾವುದೇ ಚರ್ಚೆ ಆಗಿಲ್ಲ. ಮಂಕಾಳು ವೈದ್ಯ ಬೈ ಮಿಸ್ಟೇಕ್ ಅಂದ್ರು. ಜಿಲ್ಲೆ ಕಾರಣಕ್ಕೆ, ಜಾತಿ ಕಾರಣಕ್ಕೆ ನನಗೆ ಕೊಟ್ಟಿದ್ದಾರೆ. ಲಿಸ್ಟ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದು ಎಸ್ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಪ್ರಮಾಣ ವಚನದ ಬಳಿಕ ಅನೌಪಚಾರಿಕ ಸಂಪುಟ ಸಭೆ
ಸಚಿವರ ಪ್ರಮಾಣ ವಚನದ ಬಳಿಕ ಸಿಎಂ ಡಿ.ಕೆ ಶಿವಕುಮಾರ್ ಅವರು, ಅನೌಪಚಾರಿಕ ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಎಲ್ಲಾ 33 ಸಚಿವರೂ ಅನೌಪಚಾರಿಕ ಸಂಪುಟ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇದಕ್ಕೆ ರಾಜಕೀಯ ಅಂತಾರೆ: ಅಪ್ಪಾಜಿ ನಾಡಗೌಡ
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಪ್ಪಾಜಿ ನಾಡಗೌಡ ಬೇಸರ ಹೊರಹಾಕಿದ್ದಾರೆ.
ಇದಕ್ಕೆ ರಾಜಕಾರಣ ಅಂತ ಹೇಳೋದು. ಪಾಲಿಟಿಕ್ಸ್ನಲ್ಲಿ ಯಾರಿಗೆ ದೇವರು ಒಲಿಯುತ್ತಾನೆಂದು ಗೊತ್ತಾಗೋದಿಲ್ಲ. ಎಲ್ಲವೂ ಮುಗಿದು ಹೋಗಿದೆ. ನಾನು ಬೇರೆ ಕಾರಣಕ್ಕೆ ಸಿಎಂ ಮನೆಗೆ ಬಂದಿದ್ದೆ.
ಒಬ್ಬ ಹೊಸ ಸಿಎಂ ಇದ್ದಾರೆ, ಒಳ್ಳೆಯದಾಗಲಿ ಎಂದು ಹಾರೈಸೋಣ. ನನಗೆ ಇದೆಲ್ಲವೂ ಅನುಭವ ಆಗಿದೆ.
ಈ ರೀತಿ ಆಗಿದ್ದಕ್ಕೆ ಬೇಜಾರಾಗ್ತಿದೆ. ಪಕ್ಷಕ್ಕೆ ನಿಷ್ಠಾವಂತರು, ಪಕ್ಷದಲ್ಲಿ ಕಾಲುಕಟ್ಟಿಕೊಂಡು ಇರೋರಿಗೆ ಈ ರೀತಿ ಆಗ್ತಿದೆ. ಈಗಲೂ ಸಿಎಂ ಭೇಟಿ ಮಾಡೋಕೆ ಆಗಿಲ್ಲ ಎಂದ ಅಸಮಾಧಾನ ಹೊರಹಾಕಿದ್ದಾರೆ.
ನಾಳೆ ನಾನು ರಾಜೀನಾಮೆ ಕೊಡ್ತೀನಿ: ಬೇಳೂರು ಗೋಪಾಲಕೃಷ್ಣ ಗರಂ
ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಸಮಾಧಾನ ಹೊರಹಾಕಿದ್ದಾರೆ. ಗಾಡ್ಫಾದರ್ ಇದ್ದವರಿಗೆ ಪ್ರಭಾವಿಗಳಿಗೆ ಮಾತ್ರ ಸಚಿವ ಸ್ಥಾನ ಕೊಡ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ.
ಅಸಮಾಧಾನಿತರು ಎಲ್ಲರೂ ಸಂಪರ್ಕದಲ್ಲಿದ್ದಾರೆ. ನಾಳೆ ಎಲ್ಲಾ ಒಂದು ತೀರ್ಮಾನ ಕ್ಕೆ ಬರುತ್ತೇವೆ. ನಾನು ನಾಳೆ 10 ಗಂಟೆಗೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.
ನಿನ್ನೆಯವರೆಗೂ ಲಿಸ್ಟ್ನಲ್ಲಿ ಹೆಸರಿತ್ತು. ಎರಡೆರಡು ಬಾರಿಯಾದವರಿಗೆ ಮತ್ತೆ ಸ್ಥಾನ ಕೊಡ್ತೀರಾ?
ಪ್ರಭಾವಿಗಳಿಗೆ, ಮಾಜಿ ಮಂತ್ರಿ, ಮುಖ್ಯಮಂತ್ರಿಗಳ ಮಕ್ಕಳಿಗೆ ಮಾತ್ರ ಸಚಿವ ಸ್ಥಾನನಾ? ಎಂದು ಪ್ರಶ್ನಿಸಿದ್ದಾರೆ. ಮಂಕಾಳ್ ವೈದ್ಯರನ್ನು ಹೇಗೆ ನಡೆಸಿಕೊಂಡ್ರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಭೇಟಿಯಾಗದೇ ಬರೀಗೈಲಿ ವಾಪಸ್ ಆದ ಮಂಕಾಳು ವೈದ್ಯ
ಮಂಕಾಳು ವೈದ್ಯ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಇದರಿಂದ ಸಿಎಂ ಭೇಟಿಗೆ ಬಂದಿದ್ದ ಅವರು ಬೇಸರದಲ್ಲೇ ಹೊರ ನಡೆದಿದ್ದಾರೆ.
ಕೆಲಸ ಗುರುತಿಸಿ ಅವಕಾಶ ಕೊಟ್ಟಿದ್ದಾರೆ: ರಿಜ್ವಾನ್ ಅರ್ಷದ್
ಪಕ್ಷದ ನಿಷ್ಠೆಯಂದ ಕೆಲಸ ಮಾಡಿದ್ರೆ ಅವಕಾಶ ಸಿಗುತ್ತೆ. ಪಕ್ಷದ ವರಿಷ್ಠರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ರಿಜ್ವಾನ್ ಅರ್ಷದ್ ಸಿಎಂ ನಿವಾಸದಲ್ಲಿ ಹೇಳಿದ್ದಾರೆ.
ಎಸ್ಸಿ ಎಡಗೈ ಸಮುದಾಯಕ್ಕೆ ಇನ್ನೊಂದು ಸ್ಥಾನ ಸಿಗಬೇಕಿತ್ತು: ಹೆಚ್.ಆಂಜನೇಯ
ಎಸ್ಸಿ ಎಡಗೈ ಸಮುದಾಯಕ್ಕೆ ಇನ್ನೊಂದು ಸ್ಥಾನ ಸಿಗಬೇಕಿತ್ತು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಈಗ ಎರಡು ಸ್ಥಾನ ಕೊಟ್ಟಿದ್ದಾರೆ, ಅದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತೇವೆ. ಅಸಮಧಾನ ವ್ಯಕ್ತಪಡಿಸೋದರಲ್ಲಿ ಅರ್ಥ ಇಲ್ಲ.
ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ಕೊಟ್ಟಿರೋದು ಹೈಕಮಾಂಡ್ ನಿರ್ಧಾರ.
ಶಾಸಕ ಹಂಪನಗೌಡ ಬಾದರ್ಲಿ ಆಕ್ರೋಶ
5 ಬಾರಿ ಶಾಸಕರಾಗಿದ್ದರೂ ಕಡೆಗಣಿಸಿದ್ದಾರೆ. ಸಂಪುಟ ವಿಸ್ತರಣೆಯ ಸಮಯದಲ್ಲಿ ಭರವಸೆ ನೀಡಿದ್ದರು. ಆದರೆ ಈಗ ಹೈಕಮಾಂಡ್ ಕಳುಹಿಸಿದ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಮುಂದೆ ಏನುಮಾಡಬೇಕು ಎಂದು ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ
ಪ್ರಿಯಾಕೃಷ್ಣ ಅಭಿಮಾನಿಗಳಿಂದ ಪ್ರತಿಭಟನೆ
ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಭಿಮಾನಿಗಳು ವಿಜಯನಗರ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಕಾಳ ವೈದ್ಯ ಔಟ್, ಎಸ್ ಎಸ್. ಮಲ್ಲಿಕಾರ್ಜುನ್ ಎಂಟ್ರಿ
ಡಿಕೆ ಶಿವಕುಮಾರ್ ಸಂಪುಟದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಎಐಸಿಸಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರಿತ್ತು. ಆದರೆ ಈಗ ದಾವಣಗೆರೆ ಶಾಸಕ ಮಲ್ಲಿಕಾರ್ಜುನ್ ಹೆಸರು ಹೊಸದಾಗಿ ಎಂಟ್ರಿಯಾಗಿದೆ.
ಬೇರೆಯವರಿಗೂ ಅವಕಾಶ ಸಿಗಲಿ ಎಂದ ದಿನೇಶ್ ಗುಂಡೂರಾವ್
ಸಚಿವ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಹೆಸರು ಕೈ ಬಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್ ಅವರು, ನನಗೆ ಏನಾಗಿದೆ ಎಂದು ಗೊತ್ತಿಲ್ಲ. ನಾನು ನಿರೀಕ್ಷೆ ಇಟ್ಟಿರಲಿಲ್ಲ
ಮಂತ್ರಿ ಮಂಡಲ ರಚನೆ ಆಗಿರೋದು ಖುಷಿ ವಿಚಾರ. ನಾನು ಮೂರು ವರ್ಷ ಸಚಿವನಾಗಿದ್ದೆ. ಬೇರೆಯವರಿಗೂ ಅವಕಾಶ ಸಿಗಲಿ. ಅನುಭವ ಆಗಲಿ ಎಂದು ನಗುಮೊಗದಲ್ಲೇ ಉತ್ತರಿಸಿದ್ದಾರೆ.
ಜಿ.ಎಸ್ ಪಾಟೀಲ್ ಬೇಸರ
ನಾನು ಸಚಿವ ಸ್ಥಾನದ ಅಕಾಂಕ್ಷಿಯಾಗಿದ್ದೆ. ನನಗೆ ಯಾರೂ ಸ್ಪೀಕರ್ ಅಂತ ಹೇಳಿಲ್ಲ. ಸ್ಪೀಕರ್ ಹುದ್ದೆ ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನ ದೊರೆತಿದ್ದಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಸಂತಸ
ಸಚಿವ ಸ್ಥಾನ ದೊರೆತಿದ್ದಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನನಗೆ ವಿಶ್ವಾಸ ಇತ್ತು, ಅದರಂತೆ ಅವಕಾಶ ಸಿಕ್ಕಿದೆ. ಯಾವ ಖಾತೆ ಸಿಗುತ್ತೆ ಎಂಬ ಬಗ್ಗೆ ನಿರೀಕ್ಷೆ ಇಲ್ಲ. ಯಾವುದೇ ಜವಬ್ದಾರಿ ಕೊಟ್ಟರು ನಿರ್ವಹಿಸುತ್ತೇನೆ. ಅವಕಾಶ ಕೊಟ್ಟ, ಸಿಎಂ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸೋನಿಯಾಗಾಂಧಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇಂದು ಸಂಜೆ ನೂತನ ಸಚಿವರ ಪ್ರಮಾಣ ವಚನ
ನೂತನ ಸಂಪುಟ ಸದಸ್ಯರ ಪ್ರಮಾಣ ಸ್ವೀಕಾರ ಸಮಾರಂಭ ಇಂದು ಸಂಜೆ 4:05 ಕ್ಕೆ ಲೋಕಭವನದ ಆವರಣದಲ್ಲಿ ನಡೆಯಲಿದೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅಂತಿಮ ತಯಾರಿ ನಡೆಯುತ್ತಿದೆ. ಹೊರ ಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಅಜ್ಜಯ್ಯನ ಮಠಕ್ಕೆ ಸಿಎಂ
ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ (ನೊಣವಿನಕೆರೆ ಅಜ್ಜಯ್ಯ ಮಠ) ಆಗಮಿಸಿದ ಸಿಎಂ ಡಿಕೆ ಶಿವಕುಮಾರ್
ನನಗೆ ಪಕ್ಷ ದೊಡ್ಡದು – ಜಮೀರ್
ಸಿದ್ದರಾಮಯ್ಯ ಸಂಪುಟದಲ್ಲಿ ನನಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಈ ಅವಧಿಯಲ್ಲಿ ಮಂತ್ರಿ ಸ್ಥಾನ ಸಿಗದಿದ್ದರೂ ಪಕ್ಷ ಸಂಘಟನೆ ಮಾಡು ಎಂದು ಹೇಳಿದರೂ ನಾನು ಆ ಕೆಲಸಕ್ಕೂ ಸಿದ್ದನಿದ್ದೆ.
ಸಚಿವೆ ಸ್ಥಾನದ ನಿರೀಕ್ಷೆಯಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ಗೆ ಶಾಕ್
ವಿಶ್ವಾಸ ಇತ್ತು: ಟಿ ರಘುಮೂರ್ತಿ
ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ ಈಗ ಅವಕಾಶ ಸಿಕ್ಕಿದೆ. ಖಾತೆಯ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸುತ್ತೇನೆ.
ಡಿಕೆಶಿ ಸಂಪುಟ ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು – 5
ಲಿಂಗಾಯತ -6
ಕುರುಬ – 3
ವಾಲ್ಮೀಕಿ – 3
ಮುಸ್ಲಿಂ – 3
ಕ್ರೈಸ್ತ -1
ಪರಿಶಿಷ್ಟ ಜಾತಿ ಎಡ ಮತ್ತು ಬಲ – 7
ಉಪ್ಪಾರ -1
ಮರಾಠ – 1
ಈಡಿಗ – 1
ಮೊಗವೀರ – 1
ರಜಪೂತ -1
ರೆಡ್ಡಿ-1
ಮೈಸೂರು ಭಾಗಕ್ಕೆ ಅನ್ಯಾಯ: ತನ್ವೀರ್ ಸೇಠ್
ಯಾವ ಮಾನದಂಡ ಮೇಲೆ ಸಚಿವ ಸಂಪುಟ ರಚನೆ ಆಗಿದೆ ಗೊತ್ತಿಲ್ಲ. ಮೈಸೂರು ಭಾಗಕ್ಕೆ ಸಿಗಬೇಕಾದ ಶಕ್ತಿ ಸಿಕ್ಕಿಲ್ಲ. ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ನಿರಾಸೆಯಾಗಿದೆ. ರಾಹುಲ್ ಗಾಂಧಿ ವಿರುದ್ಧವಾಗಿ ಮಾತನಾಡಿದರು ಎಂಬ ಕಾರಣಕ್ಕೆ ರಾಜಣ್ಣ ಅವರ ರಾಜೀನಾಮೆ ಪಡೆಯಲಾಯಿತು. ಪಕ್ಷ ವಿರೋಧಿ ಚಟುವಟಿಕೆ ಬಹಿರಂಗವಾಗಿ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ.
ಜವಾಬ್ದಾರಿ ಹೆಚ್ಚಾಗಿದೆ: ಮಾಗಡಿ ಬಾಲಕೃಷ್ಣ
ನನ್ನ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿ ಕೊಟ್ಟಿದ್ದೀರಿ. ಈ ಜವಾಬ್ದಾರಿಯನ್ನ ಉತ್ತಮವಾಗಿ ನಿರ್ವಹಿಸುತ್ತೇನೆ. ಕ್ಷೇತ್ರದ ಜನತೆ ಐದು ಬಾರಿ ನನ್ನನ್ನ ಗೆಲ್ಲಿಸಿದ್ದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಮಾಗಡಿ ರಂಗನಾಥಸ್ವಾಮಿ ಕೃಪೆಯುಂದ ಸಚಿವ ಸ್ಥಾನ ಸಿಕ್ಕಿದೆ. ಸಿಎಂ ಹಾಗೂ ಹೈಕಮಾಂಡ್ ನಾಯಕರಿಗೆ ಧನ್ಯವಾದ.
ಗೆದ್ದ ಜಮೀರ್ – ಕ್ಷಮಾಪಣೆಯೇ ವರವಾಯ್ತಾ?
ದಾವಣಗೆರೆ ದಕ್ಷಿಣ ಉಪಚುನಾವಣೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಬಂದ ನಂತರ ಜಮೀರ್ ಅಹಮದ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಇದಾದ ಬಳಿಕ ವೇಣುಗೋಪಾಲ್, ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು ಜಮೀರ್ ಪರ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ: ಚಲುವರಾಯಸ್ವಾಮಿ
ಮಂಡ್ಯ ಜಿಲ್ಲೆಯ ರೈತರು, ಕಬ್ಬು ಬೆಳೆಗಾರರು ಮತ್ತು ಜನರ ಆಶೀರ್ವಾದವೇ ಈ ಸ್ಥಾನಕ್ಕೆ ಕಾರಣ. ನನ್ನನ್ನು ಆಯ್ಕೆ ಮಾಡಿದ ಹಿಂದೆ ಮಂಡ್ಯ ಜಿಲ್ಲೆಯ ಜನತೆ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕೊಟ್ಟ ಬೆಂಬಲವಿದೆ. ಅವರೆಲ್ಲರಿಗೂ ನನ್ನ ನಮನಗಳು. ಸಂಪುಟ ವಿಸ್ತರಣೆಯಲ್ಲಿ ನನಗೆ ಅವಕಾಶ ನೀಡಿದ ಕಾಂಗ್ರೆಸ್ ಹೈಕಮಾಂಡ್, ಸಿಎಂ ಮತ್ತು ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು
ನಿರೀಕ್ಷೆ ಮಾಡಿದ್ದೆ: ರಿಜ್ವಾನ್ ಅರ್ಷದ್
ಅರ್ಧ ಗಂಟೆ ಮೊದಲು ಕರೆ ಮಾಡಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ದರಾಗಿ ಎಂದರು. ನಾನು ಮಂತ್ರಿ ಸ್ಥಾನದ ನಿರೀಕ್ಷೆ ಮಾಡಿದ್ದೆ. ನಮ್ಮ ಅಲ್ಪಸಂಖ್ಯಾತ ಸಮುದಾಯಕ್ಕೆ ಮೂರು ಮಂತ್ರಿಸ್ಥಾನ ಸಿಕ್ಕಂತಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಹೈಕಮಾಂಡ್ ಈ ಸ್ಥಾನಕೊಟ್ಟಿದೆ. ನಮಗೆ ಖಾತೆ ವಿಚಾರವಾಗಿ ಯಾವುದೇ ನಿರೀಕ್ಷೆ ಇಲ್ಲ. ನನಗೆ ಯಾವುದೇ ಖಾತೆಯದ್ರೂ ಪರವಾಗಿಲ್ಲ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಶೀರ್ವಾದ ಪಡೆಯುತ್ತೇನೆ
ಗಾಯತ್ರಿ ಶಾಂತೇಗೌಡಗೆ ಜಾಕ್ಪಾಟ್
ಮಹಿಳಾ ಕೋಟಾದಲ್ಲಿ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳು ಚುನಾವಣೆಯಲ್ಲಿ ಬಿಜೆಪಿಯ ಎಂಕೆ ಪ್ರಾಣೇಶ್ ವಿರುದ್ಧ ಮರು ಮತ ಎಣಿಕೆಯಲ್ಲಿ ಗೆಲುವು ಪಡೆದಿದ್ದ ಗಾಯತ್ರಿ ಶಾಂತೇಗೌಡ ಈಗ ಮಂತ್ರಿ ಸ್ಥಾನ ನೀಡುವ ಮೂಲಕ ಹೈಕಮಾಂಡ್ ದೊಡ್ಡ ಗಿಫ್ಟ್ ನೀಡಿದೆ.
