ಹಾಸನ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು, ದುಬೈನಿಂದ ಹಾಸನದ ಬೇಲೂರಿಗೆ ಬಂದು ಮತದಾನ ಮಾಡಿ ಕನ್ನಡಾಭಿಮಾನ ಮೆರೆದಿದ್ದಾರೆ.
ಮೋನಿಕಾ ದೀಪಕ್ ದುಬೈನಿಂದ ಆಗಮಿಸಿ ಮತದಾನ ಮಾಡಿದ ಗೃಹಿಣಿ. ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ಮತ ಚಲಾವಣೆಗೆ ಆಗಮಿಸಿರುವುದಾಗಿ ಹೇಳಿದ ಮೋನಿಕಾ, ನಾನು ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯೆಯಾಗಿರುವುದೇ ದೊಡ್ಡ ಅಭಿಮಾನ ಅಂದಿದ್ದಾರೆ. ಇದನ್ನೂ ಓದಿ: ಹಂಸಲೇಖಾ ವಿರುದ್ಧ ನೀಡಿದ್ದ ದೂರನ್ನು ಹಿಂಪಡೆದ ಕೃಷ್ಣರಾಜ್
ಈ ಚುನಾವಣೆಯಲ್ಲಿ ಯಾರೇ ಗೆದ್ದರೂ ಕನ್ನಡಕ್ಕೆ ಉತ್ತಮ ಕೆಲಸ ಮಾಡಲಿ. ನಾವು ವಿದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನ ಹೆಚ್ಚಿದೆ. ಯಾರೆಲ್ಲ ಸಾಹಿತ್ಯ ಪರಿಷತ್ ಚುನಾವಣೆಗೆ ಮತ ಹೊಂದಿದ್ದೀರೋ ಅವರೆಲ್ಲ ತಪ್ಪದೇ ನಿಮ್ಮ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಒಂದೂವರೆ ವರ್ಷದ ಮಗುವಿನೊಂದಿಗೆ ಬೇಲೂರು ತಾಲೂಕು ಕಚೇರಿಯಲ್ಲಿ ಮತದಾನ ಮಾಡಿದ ಮೋನಿಕಾ ದೀಪಕ್ ಮತದಾನ ಮಾಡಿದ ನಂತರ ದುಬೈಗೆ ವಾಪಸ್ ತೆರಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ರದ್ದುಗೊಳಿಸಿ, ನಮ್ಮ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಿ- ರೈತರ ಬಿಗಿಪಟ್ಟು