Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಲಬುರಗಿ ಕೆಎಂಎಫ್‍ನಲ್ಲಿ `ಹಾಲಾ’ಹಲ – ನಿರ್ದೇಶಕರ ಜಗಳದಲ್ಲಿ ಬಡವಾದ ರೈತರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಲಬುರಗಿ ಕೆಎಂಎಫ್‍ನಲ್ಲಿ `ಹಾಲಾ’ಹಲ – ನಿರ್ದೇಶಕರ ಜಗಳದಲ್ಲಿ ಬಡವಾದ ರೈತರು

Districts

ಕಲಬುರಗಿ ಕೆಎಂಎಫ್‍ನಲ್ಲಿ `ಹಾಲಾ’ಹಲ – ನಿರ್ದೇಶಕರ ಜಗಳದಲ್ಲಿ ಬಡವಾದ ರೈತರು

Public TV
Last updated: December 18, 2019 12:51 pm
Public TV
Share
2 Min Read
GLB MILK
SHARE

ಕಲಬುರಗಿ: ನಮ್ಮ ಮುಗ್ಧ ರೈತರು ಕಷ್ಟಪಟ್ಟು ಹೈನುಗಾರಿಕೆ ಮಾಡಿ ಕೆಎಂಎಫ್‍ಗೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಆದರೆ ಹೀಗೆ ಮಂಡಳಿಗೆ ಹೋದ ರೈತರ ಹಾಲು ಅಲ್ಲಿನ ಒಳ ರಾಜಕೀಯ ದ್ವೇಷದಿಂದ ಚರಂಡಿ ಪಾಲಾಗುತ್ತಿದೆ. ಇದು ಇದೀಗ ಕಲಬುರಗಿ-ಬೀದರ್-ಯಾದಗಿರಿ ಜಿಲ್ಲೆಯ ರೈತರ ಕೋಪ ನೆತ್ತಿಗೆರುವಂತೆ ಮಾಡಿದೆ.

ಹೌದು, ಕಲಬುರಗಿ ಕೆಎಂಎಫ್‍ನಲ್ಲಿ `ಹಾಲಾ’ಹಲ ಅಲ್ಲ ಭಾರೀ ಕೋಲಾಹಲವೇ ನಡೆದು ಹೋಗುತ್ತಿದೆ. ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರ ನಡುವೆ ಹೊಂದಾಣಿಕೆ ಕೊರತೆ ಉಂಟಾಗಿ ಆಂತರಿಕ ಫೈಟ್ ನಡೆದಿದ್ದು, ಪರಸ್ಪರ ಹಲ್ಲು ಕಚ್ಚಿ ಹಗೆ ರಾಜಕೀಯದಲ್ಲಿ ತೊಡಗಿದ್ದಾರೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೇ, ನಿರ್ದೇಶಕರ ನಡುವಿನ ಜಗಳದಲ್ಲಿ ಹೈನುಗಾರಿಕೆಯನ್ನೇ ನಂಬಿರುವ ರೈತರು ಬಡವಾಗುತ್ತಿದ್ದಾರೆ.

GLB 3

ಒಬ್ಬರ ಮೇಲೊಬ್ಬರು ದ್ವೇಷ ಸಾಧನೆಗೆ ಮುಂದಾಗಿರುವ ಕಲಬುರಗಿ ಕೆಎಂಎಫ್ ನಿರ್ದೇಶಕರು ತಮಗೆ ಆಗದಿರುವವರ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ ನುಗ್ಗಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಹಾಲು ಪರಿಶುದ್ಧವೋ ಅಲ್ಲವೋ ಎಂಬುದನ್ನು ವೈಜ್ಞಾನಿಕವಾಗಿ ಟೆಸ್ಟ್ ಮಾಡದೇ ಬರೀ ಬಾಯಲ್ಲಿ ಟೇಸ್ಟ್ ಮಾಡಿ ಹಾಲಿನ ಗುಣಮಟ್ಟ ನಿರ್ಧರಿಸುತ್ತಿದ್ದಾರೆ. ಲ್ಯಾಕ್ಟೋಮೀಟರ್‍ನಲ್ಲಿ ಹಾಲಿನ ಟೆಸ್ಟ್ ಕೂಡ ಮಾಡಲ್ಲ. ಕಲಬುರಗಿ ಕೆಎಂಎಫ್ ಅಧ್ಯಕ್ಷ ಆರ್. ಕೆ ಪಾಟೀಲ್ ಖುದ್ದು ಈ ಡರ್ಟಿ ಪಾಲಿಟಿಕ್ಸ್ ನಲ್ಲಿ ಮುಳುಗಿದ್ದಾರೆ.

ಹಾಲಿನಲ್ಲಿ 3.5ರಷ್ಟು ಫ್ಯಾಟ್ ಹಾಗೂ ಕನಿಷ್ಟ 29ರಷ್ಟು ಕರೆಕ್ಟ್ ಲ್ಯಾಕ್ಟೋ ಮೀಟರ್ ರೀಡಿಂಗ್ ಬರುವಷ್ಟು ಗುಣಮಟ್ಟ ಇರಬೇಕು ಎಂಬ ನಿಯಮವಿದೆ. ತಮಗೆ ಬೇಡವಾದ ಸಹಕಾರ ಸಂಘಗಳ ಹಾಲಿನಲ್ಲಿ ಸಕ್ಕರೆ ಅಂಶ ಇದೆ. ಉಪ್ಪಿನ ಅಂಶವಿದೆ ಅಂತ ಸುಮ್‍ಸುಮ್ನೆ ಹೇಳೋ ಈ ಕೆಎಂಎಫ್ ಅಧ್ಯಕ್ಷ ಆರ್ ಕೆ ಪಾಟೀಲ್, ಸ್ಟಾಟಲ್ಲೇ ಕ್ಯಾನ್‍ಗಟ್ಟಲೇ ಹಾಲನ್ನು ಚರಂಡಿಗೆ ಸುರಿಸುತ್ತಿದ್ದಾರೆ.

GLB 4

ಸದ್ಯ ಕಲಬುರಗಿ-ಬೀದರ್-ಯಾದಗಿರಿ ಜಿಲ್ಲೆಗಳಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಜಾನುವಾರುಗಳು ಸರಿಯಾದ ಗುಣಮಟ್ಟದ ಹಾಲನ್ನು ನೀಡುತ್ತಿಲ್ಲ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಆರ್. ಕೆ ಪಾಟೀಲ್, ನೀವು ಕಳಪೆ ಹಾಲು ಪೂರೈಸಿದ್ದೀರಿ ಅನ್ನೋ ಕಾರಣ ಟಾರ್ಗೆಟ್ ಆಗಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಂತ ಹಣ ಕೂಡ ರಿಲೀಸ್ ಮಾಡುತ್ತಿಲ್ಲ. ಹೀಗಾಗಿ ಹೈನುಗಾರಿಕೆ ನಂಬಿರುವ ರೈತರ ಅಕೌಂಟ್‍ಗಳಿಗೆ ಹಣ ತಲುಪುತ್ತಿಲ್ಲ. ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಮುಖವಾಗಿ ಕಲಬುರಗಿ ಮತ್ತು ಆಳಂದ ಶೀತಲಿಕರಣ ಘಟಕದಿಂದ ಬರುವ ಹಾಲನ್ನು ಆರ್.ಕೆ.ಪಾಟೀಲ್ ಚರಂಡಿ ಪಾಲು ಮಾಡುತ್ತಿದ್ದಾರೆ. ಈ ಕುರಿತು ಕೆಎಂಎಫ್‍ನ ಕಲಬುರಗಿ-ಬೀದರ್-ಯಾದಗಿರಿ ವಿಭಾಗದ ಎಂಡಿ ಕಮಕೇರಿಯನ್ನು ಕೇಳಿದರೆ, ಅವರು ಹಾರಿಕೆಯ ಉತ್ತರ ನೀಡುತ್ತಾರೆ. ಇಲ್ಲಿ ಯಾವ ರಾಜಕೀಯ ಸಹ ನಡೆಯುತ್ತಿಲ್ಲ ಎಂದು ಸುಮ್ಮನಾಗುತ್ತಾರೆ. ಇಷ್ಟೆಲ್ಲ ಸಾಕ್ಷಿ ತೋರಿಸಿದರೂ ಅದ್ಯಾಕೋ ಏನೋ ಕಮಕೇರಿ ಸಾಹೇಬ್ರೂ ಆರ್. ಕೆ ಪಾಟೀಲ್ ವಿರುದ್ಧ ಕಮಕ್ ಕಿಮಕ್ ಅಂತಿಲ್ಲ.

GLB 7

ಕಮಕೇರಿ ಮಾತನ್ನು ಕೇಳಿದರೆ ಈ ಸಮಸ್ಯೆ ಇಲ್ಲಿ ಬಗೆಹರಿಯೋವಂತೆ ಕಾಣುತ್ತಿಲ್ಲ. ರೈತರು ಸಂಕಷ್ಟಕ್ಕೀಡಾಗೋದು ತಪ್ಪೊಲ್ಲ ಅನ್ನಿಸುತ್ತದೆ. ಕೂಡಲೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕಂಡಕಂಡಲ್ಲಿ ನಾನ್ಯಾರು ಗೊತ್ತಾ ಎಂದು ಕೇಳುವ ಪಶು ಸಂಗೋಪನಾ ಸಚಿವ ಪ್ರಭುಚೌಹಾಣ್ ಇತ್ತ ಗಮನಹರಿಸಬೇಕಿದೆ. ದಿನವೂ ಸಾವಿರಾರು ಲೀಟರ್ ಹಾಲನ್ನು ಚರಂಡಿ ಪಾಲು ಮಾಡುತ್ತಾ ಡರ್ಟಿ ಪಾಲಿಟಿಕ್ಸ್ ನಲ್ಲಿ ತೊಡಗಿರುವ ಆರ್.ಕೆ.ಪಾಟೀಲ್ ರಾಜಕೀಯಕ್ಕೆ ಕಡಿವಾಣ ಹಾಕಬೇಕಿದೆ.

 

TAGGED:farmerKalaburagikmfmilkPublic TVಕಲಬುರಗಿಕೆಎಂಎಫ್ಪಬ್ಲಿಕ್ ಟಿವಿರೈತರುಹಾಲು
Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

Mohammed Nalapad ED Raid
Bengaluru City

ಬಿಟ್ ಕಾಯಿನ್ ಕೇಸಲ್ಲಿ ನಲಪಾಡ್‌ಗೆ ಶಾಕ್ – ಸತತ 21 ಗಂಟೆಗಳ ಸುದೀರ್ಘ ಶೋಧ ಕಾರ್ಯ ಮುಗಿಸಿದ ಇಡಿ

Public TV
By Public TV
55 minutes ago
karnataka High Court
Court

SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ

Public TV
By Public TV
2 hours ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ.. ಲ್ಯಾಪ್‌ಟಾಪ್‌ ಗೆಲ್ಲಿ

Public TV
By Public TV
2 hours ago
Weather
Bengaluru City

ಬೆಂಗಳೂರು ಸೇರಿ ರಾಜ್ಯಾದ್ಯಂತ ಇನ್ನೊಂದು ವಾರ ಹೆಚ್ಚಾಗಲಿದೆ ಬಿಸಿಲು

Public TV
By Public TV
2 hours ago
Bengaluru B.Tech Student Missing
Bengaluru City

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ – ಬೆಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ

Public TV
By Public TV
3 hours ago
big bulletin 20 april 2026 part 1
Big Bulletin

ಬಿಗ್‌ ಬುಲೆಟಿನ್‌ 20 April 2026 ಭಾಗ-1

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?